ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಗೇನಕಲ್ ವಿವಾದ ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ

By Staff
|
Google Oneindia Kannada News

ಬೆಂಗಳೂರು, ಜು.31: ಹೊಗೇನಕಲ್ ಕುಡಿಯುವ ನೀರಿನ ಯೋಜನೆಯನ್ನು ತಮಿಳುನಾಡು ಸರ್ಕಾರ ತಕ್ಷಣ ತಡೆಯಬೇಕೆಂದು ಸೂಚಿಸಲು ಸರ್ವಪಕ್ಷ ನಿಯೋಗದ ನಾಯಕರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಶೀಘ್ರದಲ್ಲೇ ಭೇಟಿ ಮಾಡಲಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಜೆಡಿ(ಎಸ್)ನ ಪುಟ್ಟೇಗೌಡ ಕೇಳಿದ ಪ್ರಶ್ನೆಗೆ ನೀರಾವರಿ ಸಚಿವ ಬಸವರಾಜ್ ಬೊಮ್ಮಾಯಿ ಉತ್ತರಿಸುತ್ತಾ , ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸಭೆ ಅಧಿವೇಶನ ಮುಗಿತ ನಂತರ ಶೀಘ್ರದಲ್ಲೇ ಸರ್ವಪಕ್ಷ ಸಭೆಯನ್ನು ಆಯೋಜಿಸಿ ವಿವಾದಿತ ಹೊಗೇನಕಲ್ ಯೋಜನೆಯ ಬಗ್ಗೆ ಚರ್ಚಿಸಲಿದ್ದಾರೆ. ಕರ್ನಾಟಕದ ಹಕ್ಕನ್ನು ಯಾವುದೇ ಕಾರಣಕ್ಕೂ ಬಲಿಕೊಡುವುದಿಲ್ಲ ಎಂದು ತಿಳಿಸಿದರು.

ಹೊಗೇನಕಲ್ ಪ್ರಾಂತ್ಯದಲ್ಲಿ ಸಮೀಕ್ಷೆ ನಡೆಸಲು ಮೂರು ವರ್ಷಗಳ ಹಿಂದೆ ಎರಡೂ ರಾಜ್ಯಗಳಿಗೆ ಸೇರಿದ ಜಂಟಿ ತಂಡವನ್ನು ರಚಿಸಿದ್ದರು. ಇದುವರೆಗೂ ತಮಿಳುನಾಡಿಗೆ ಸೇರಿದ ಅಧಿಕಾರಿಗಳು ಕೇವಲ ಒಂದು ಬಾರಿ ಮಾತ್ರ ಸಭೆಗೆ ಹಾಜರಾಗಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X