ಶಾಂತಿಯುತ ಚುನಾವಣೆಗೆ ಬದ್ಧ: ಹೊಸ ಡಿಜಿಪಿ
ಬೆಂಗಳೂರು, ಮೇ 4: ವೈದ್ಯಕೀಯ ರಜೆಯ ಮೇಲೆ ತೆರಳಿರುವ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಕೆ.ಆರ್.ಶ್ರೀನಿವಾಸನ್ ಅವರಸ್ಥಾನಕ್ಕೆ ಆರ್.ಶ್ರೀಕುಮಾರ್ ಅವರನ್ನು ಶನಿವಾರ ನೇಮಕ ಮಾಡಲಾಗಿದೆ. ಕರ್ನಾಟಕ ಪೊಲೀಸ್ ಹೌಸಿಂಗ್ ಕಾರ್ಪೋರೇಷನ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಕುಮಾರ್ ಶನಿವಾರ ಸಂಜೆ ಅಧಿಕಾರವನ್ನು ಸ್ವೀಕರಿಸಿದ್ದಾರೆ.
ಕೆ.ಆರ್.ಶ್ರೀನಿವಾಸನ್ರ ನಂತರ ಕರ್ನಾಟಕ ಪೊಲೀಸ್ ಪಡೆಯಲ್ಲಿ ಅತ್ಯಂತ ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಶ್ರೀಕುಮಾರ್, ಚುನಾವಣೆ ಉಸ್ತುವಾರಿ ನೋಡಿಕೊಳ್ಳಲು ಅವರನ್ನು ಇತ್ತೀಚೆಗಷ್ಟೆ ಆಯ್ಕೆ ಮಾಡಲಾಗಿತ್ತು. ಛಾಪಾ ಕಾಗದ ವಿಶೇಷ ತನಿಖಾ ತಂಡದ (STAMPIT)ನೇತೃತ್ವ ವಹಿಸಿದ್ದ ಇವರು ಅಬ್ದುಲ್ ಕರೀಂ ತೆಲಗಿಯನ್ನು ಸಿಬಿಐಗೆ ಒಪ್ಪಿಸುವುದಕ್ಕೂ ಮುನ್ನ ತೆಲಗಿ ಜನ್ಮ ಜಾಲಾಡಿದ್ದರು.ಹಾಗೆಯೇ ಶ್ರೀಕುಮಾರ್ ಸಿಬಿಐನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ.
ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ ಚುನಾವಣೆಗಳು ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳಲಾಗುವುದು ಎಂದು ಹೊಸ ಡಿಜಿಪಿಶ್ರೀಕುಮಾರ್ ತಿಳಿಸಿದ್ದಾರೆ. ಶ್ರೀಕುಮಾರ್ ಅವರನ್ನು ಚುನಾವಣಾ ಉಸ್ತುವಾರಿ ನೋಡಿಕೊಳ್ಳುವ ಡಿಜಿಪಿಯನ್ನಾಗಿ ನೇಮಕ ಮಾಡಿದ್ದರಿಂದ ಶ್ರೀನಿವಾಸನ್ ಅಸಮಾಧಾನಗೊಂಡಿದ್ದರು. ಹಾಗಾಗಿ ಶ್ರೀನಿವಾಸನ್ ರಜೆ ಮೇಲೆ ತೆರಳಿದ್ದಾರೆ ಎನ್ನಲಾಗಿದೆ.
(ದಟ್ಸ್ಕನ್ನಡ ವಾರ್ತೆ)