ಜಿಲ್ಲಾ ಸುದ್ದಿಗಳು : ಐಟಿ ಮಂದಿ ಮೇಲೆ ನಾಗತಿಹಳ್ಳಿ ಕಿಡಿ

ಮಂಗಳೂರು, ಸೆಪ್ಟೆಂಬರ್ 22 : ಐಟಿ ಮತ್ತು ಬಿಟಿ ಉದ್ಯಮದಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಈ ಸತ್ಯದ ಅರಿವಿಲ್ಲದ ಐಟಿ/ಬಿಟಿ ಮಂದಿ ನಾವೇ ಸಾಧಕರು, ನಾವೇ ದೇಶದ ಉದ್ಧಾರಕರು ಎಂಬಂತೆ ಬೀಗುತ್ತಾರೆ ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ನಗರದಲ್ಲಿ ನಡೆದ 'ಮಾತಾಡ್ ಮಾತಾಡು ಮಲ್ಲಿಗೆ' ಚಿತ್ರದ ಸಂವಾದವೊಂದರಲ್ಲಿ ಅವರು ಮಾತನಾಡುತ್ತಿದ್ದರು. ಈ ಉದ್ದಿಮೆಗಳು ನೀರ ಮೇಲಿನ ಗುಳ್ಳೆ ಇದ್ದಂತೆ. ಇವು ಶಾಶ್ವತವಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

'ಮಾಮಾಮ'ಚಿತ್ರದಲ್ಲಿ ರೈತರ ಬದುಕಿನ ಕತೆ ಹೇಳಿದ್ದ ನಾಗತಿಹಳ್ಳಿ, ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಕಿಡಿಕಾರಿದ್ದರು. ಈಗ ಸಂವಾದದಲ್ಲಿ ಐಟಿ ಮಂದಿ ಮೇಲೆ ಕಿಡಿಕಾರಿದರು.

***

ಕೊಪ್ಪಳದಲ್ಲಿ ಶನಿವಾರ ಗಣೇಶೋತ್ಸವ

ಕೊಪ್ಪಳ, ಸೆಪ್ಟೆಂಬರ್ 22 : ಕೊಪ್ಪಳದಲ್ಲಿ ಗಣೇಶೋತ್ಸವ ಆತಂಕದ ವಾತಾವರಣ ಸೃಷ್ಟಿಸಿದೆ. ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಅನೇಕ ಅಂಗಡಿ ಮಳಿಗೆಗಳು ಹಾನಿಗೊಳಗಾಗಿವೆ. ಈ ಮಧ್ಯೆ ಶನಿವಾರ ಗಣೇಶ ವಿಸರ್ಜನೆ ಕಾರ್ಯಕ್ರಮ ನಡೆಯುತ್ತಿದೆ. ಅಹಿತಕರ ಘಟನೆ ತಪ್ಪಿಸಲು ಪೊಲೀಸರು ನಿಗಾ ವಹಿಸಿದ್ದು, ಬಿಗಿಭದ್ರತೆಯ ನಡುವೆ ಗಣೇಶ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.

***

ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ

ದಾವಣಗೆರೆ, ಸೆಪ್ಟೆಂಬರ್ 22 : ಕೆಎಎಸ್ ದರ್ಜೆಯ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡುವ ಅಧಿಕಾರವನ್ನು ನೀಡಿ ಲೋಕಾಯುಕ್ತವನ್ನು ಬಲಮಾಡಿದ್ದೇವೆ. ಸದ್ಯದಲ್ಲೇ ಶಾಸಕರು ಸೇರಿದಂತೆ ರಾಜಕಾರಣಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ನೀಡಲಿದ್ದೇವೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

***

ಕಾವೇರಿ ತೀರ್ಥ

ಮಡಿಕೇರಿ, ಸೆಪ್ಟೆಂಬರ್ 22 : ಅ.18ರಂದು ತುಲಾಂತ್ಯ ಮುಹೂರ್ತದಲ್ಲಿ ಪವಿತ್ರ ಕಾವೇರಿ ತೀರ್ಥ ಉದ್ಬವವಾಗಲಿದೆ. ಪ್ರತಿವರ್ಷ ಅ.17ರಂದು ತೀರ್ಥೋತ್ಭವವಾಗುತ್ತಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+