ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪುಣೆಯ ಯೆರವಾಡಾ ಜೈಲಿಗೆ ಸಂಜಯ್ ಸ್ಥಳಾಂತರ
ಮುಂಬೈ, ಆಗಸ್ಟ್ 02 : ಅರ್ಥರ್ ರಸ್ತೆ ಜೈಲಿನಲ್ಲಿಯೇ ಇರಿಸಬೇಕೆಂದು ನಟ ಸಂಜಯ್ ದತ್ ಮಾಡಿದ್ದ ಮನವಿಗೆ ಟಾಡಾ ನ್ಯಾಯಾಲಯದಿಂದ ಪುರಸ್ಕಾರ ಸಿಕ್ಕಿಲ್ಲ.
1998ರ ಮುಂಬೈ ಸರಣಿ ಸ್ಫೋಟದಲ್ಲಿ ಅಕ್ರಮವಾಗಿ ಅಸ್ತ್ರಗಳನ್ನು ಇರಿಸಿಕೊಂಡಿದ್ದ ಆರೋಪದ ಮೇಲೆ 6 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಸಂಜಯ್ ದತ್ರನ್ನು ಪುಣೆಯ ಯೆರವಾಡಾ ಜೈಲಿಗೆ ಸ್ಥಳಾಂತರಿಸಲು ಆದೇಶಿಸಲಾಗಿದೆ.
ಸ್ಥಳಾಂತರಿಸಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಮತ್ತು ಪ್ರಾಣಕ್ಕೆ ಕುತ್ತು ಆಗುವ ಸಂಭವವಿದ್ದುದರಿಂದ ಆರ್ಥರ್ ಜೈಲಿನಲ್ಲಿಯೇ ಇರಿಸಬೇಕೆಂದು ಸಂಜಯ್ ಮನವಿ ಮಾಡಿದ್ದರು.
ಕೇವಲ ವಿಚಾರಣಾಧೀನ ಕೈದಿಗಳನ್ನು ಮಾತ್ರ ಇಟ್ಟುಕೊಳ್ಳುವ ಅರ್ಥರ್ ಜೈಲು ಸಂಜಯ್ರನ್ನು ಪುಣೆಗೆ ಸ್ಥಳಾಂತರಿಸಬೇಕೆಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.
ದತ್ ಅವರ ವಕೀಲ ಸತೀಶ್ ಮನೆಶಿಂಧೆ ಅವರು ಈ ಸುದ್ದಿಯನ್ನು ದೃಢಪಡಿಸಿದ್ದಾರೆ.
(ಯುಎನ್ಐ)
Comments
Story first published: Thursday, August 2, 2007, 5:30 [IST]