ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಓಬಿಸಿ ವಿದ್ಯಾರ್ಥಿಗಳೇ, ನಿಮ್ಮಿಂದೆ ನಾವಿದ್ದೇವೆ : ಸರ್ಕಾರ
ನವದೆಹಲಿ : ಹಿಂದುಳಿದ ವರ್ಗದ ಮೀಸಲಾತಿ(ಓಬಿಸಿ) ನೀತಿ ಜಾರಿಗೆ, ಸುಪ್ರೀಂಕೋರ್ಟ್ ತಡೆಯಾಡ್ಡಿರುವುದರಿಂದ ಸರ್ಕಾರ ಧೃತಿಗೆಟ್ಟಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಅರ್ಜುನ್ ಸಿಂಗ್ ಹೇಳಿದ್ದಾರೆ.
ಓಬಿಸಿ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಶೇ.27ರ ಮೀಸಲಾತಿ ನೀಡಿತ್ತು. ಈ ನೀತಿ ಜಾರಿಗೆ ಸುಪ್ರೀಂ ಕೋರ್ಟ್ ಗುರುವಾರ ತಡೆಯಾಡ್ಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ಸಂವಿಧಾನಾತ್ಮಕ ಹಾಗೂ ನ್ಯಾಯಯುತ ಕ್ರಮಗಳ ಮೂಲಕ ಮೀಸಲಾತಿ ನೀತಿಯನ್ನು ಸರ್ಕಾರ ಸಮರ್ಥಿಸಿಕೊಳ್ಳಲಿದೆ ಎಂದಿದ್ದಾರೆ.
ಸಂಸತ್ತಿನಲ್ಲಿ ಮೀಸಲಾತಿ ನೀತಿಗೆ ಸಂಪೂರ್ಣ ಬೆಂಬಲ ದೊರೆತಿದೆ. ದೇಶದಲ್ಲಿ ಈ ಬಗ್ಗೆ ಕೆಲವು ವಿರೋಧಗಳಿದ್ದು , ಅವುಗಳನ್ನು ನ್ಯಾಯಾಂಗದ ಮೂಲಕ ಬಗೆಹರಿಸಿಕೊಳ್ಳಲಾಗುವುದು ಎಂದು ಅರ್ಜುನ್ ಸಿಂಗ್ ಹೇಳಿದ್ದಾರೆ.
(ಏಜನ್ಸೀಸ್)
Comments
Story first published: Thursday, March 29, 2007, 5:30 [IST]