ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಬಿಸಿ ವಿದ್ಯಾರ್ಥಿಗಳೇ, ನಿಮ್ಮಿಂದೆ ನಾವಿದ್ದೇವೆ : ಸರ್ಕಾರ

By Staff
|
Google Oneindia Kannada News

ನವದೆಹಲಿ : ಹಿಂದುಳಿದ ವರ್ಗದ ಮೀಸಲಾತಿ(ಓಬಿಸಿ) ನೀತಿ ಜಾರಿಗೆ, ಸುಪ್ರೀಂಕೋರ್ಟ್‌ ತಡೆಯಾಡ್ಡಿರುವುದರಿಂದ ಸರ್ಕಾರ ಧೃತಿಗೆಟ್ಟಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಅರ್ಜುನ್‌ ಸಿಂಗ್‌ ಹೇಳಿದ್ದಾರೆ.

ಓಬಿಸಿ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಶೇ.27ರ ಮೀಸಲಾತಿ ನೀಡಿತ್ತು. ಈ ನೀತಿ ಜಾರಿಗೆ ಸುಪ್ರೀಂ ಕೋರ್ಟ್‌ ಗುರುವಾರ ತಡೆಯಾಡ್ಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ಸಂವಿಧಾನಾತ್ಮಕ ಹಾಗೂ ನ್ಯಾಯಯುತ ಕ್ರಮಗಳ ಮೂಲಕ ಮೀಸಲಾತಿ ನೀತಿಯನ್ನು ಸರ್ಕಾರ ಸಮರ್ಥಿಸಿಕೊಳ್ಳಲಿದೆ ಎಂದಿದ್ದಾರೆ.

ಸಂಸತ್ತಿನಲ್ಲಿ ಮೀಸಲಾತಿ ನೀತಿಗೆ ಸಂಪೂರ್ಣ ಬೆಂಬಲ ದೊರೆತಿದೆ. ದೇಶದಲ್ಲಿ ಈ ಬಗ್ಗೆ ಕೆಲವು ವಿರೋಧಗಳಿದ್ದು , ಅವುಗಳನ್ನು ನ್ಯಾಯಾಂಗದ ಮೂಲಕ ಬಗೆಹರಿಸಿಕೊಳ್ಳಲಾಗುವುದು ಎಂದು ಅರ್ಜುನ್‌ ಸಿಂಗ್‌ ಹೇಳಿದ್ದಾರೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X