ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾನ ಕಲಾ ಪರಿಷತ್‌ ಸಮ್ಮೇಳನಾಧ್ಯಕ್ಷರಾಗಿ ಟಿ.ಎ.ಎಸ್‌.ಮಣಿ

By Staff
|
Google Oneindia Kannada News

ಗಾನ ಕಲಾ ಪರಿಷತ್‌ ಸಮ್ಮೇಳನಾಧ್ಯಕ್ಷರಾಗಿ ಟಿ.ಎ.ಎಸ್‌.ಮಣಿ
ಆಗಸ್ಟ್‌ 17ರಿಂದ 21ರವರೆಗೆ ಸಂಗೀತ ಸಮ್ಮೇಳನ

ಬೆಂಗಳೂರು : ಖ್ಯಾತ ಸಂಗೀತ ಕಲಾವಿದ ಟಿ.ಎ.ಎಸ್‌.ಮಣಿ ಕರ್ನಾಟಕ ಗಾನ ಕಲಾ ಪರಿಷತ್‌ನ 2003ನೇ ಇಸವಿಯ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಆಗಸ್ಟ್‌ 17ರಿಂದ 21ರವರೆಗೆ ಬೆಂಗಳೂರಿನ ಜಯನಗರ ಬಡಾವಣೆಯಲ್ಲಿರುವ ಡಾ.ಎಚ್‌.ಎನ್‌.ಕಲಾಕ್ಷೇತ್ರದಲ್ಲಿ ಸಂಗೀತ ಸಮ್ಮೇಳನ ನಡೆಯುವುದು ಎಂದು ಗಾನ ಕಲಾ ಪರಿಷತ್‌ನ ಮಾಧ್ಯಮ ಪ್ರಕಟಣೆ ತಿಳಿಸಿದೆ.

ಸಂಗೀತ ಸಮ್ಮೇಳನದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಯುವ ಕಲಾವಿದರಾಗಿ ಸಂಗೀತ ಸಮ್ಮೇಳನ ನಡೆಯುತ್ತಿದ್ದು, ಈ ಸಮ್ಮೇಳನದ ಅಧ್ಯಕ್ಷತೆಯನ್ನು ಖ್ಯಾತ ಪಿಟೀಲು ವಿದುಷಿ ನಳಿನಾ ವಹಿಸುವರು. ತಜ್ಞರ ಸಮಿತಿಯ ಅಧ್ಯಕ್ಷರಾಗಿ ಸಂಗೀತ ವಿದ್ವಾಂಸ ಆರ್‌.ಕೆ.ಪದ್ಮನಾಭ ಆಯ್ಕೆಯಾಗಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X