ಲೇಖಕಿಯರಿಂದ ಸ್ಪರ್ಧೆಗಾಗಿ ಕಥೆ ಕವನಗಳ ಆಹ್ವಾನ
ಬೆಂಗಳೂರು : ಉದಯೋನ್ಮುಖ ಲೇಖಕಿಯರನ್ನು ಪ್ರೋತ್ಸಾಹಿಸುವುದಕ್ಕಾಗಿ ಕರ್ನಾಟಕ ಲೇಖಕಿಯರ ಸಂಘ ಪ್ರತಿ ವರ್ಷವೂ ಪ್ರೇಮಾ ಭಟ್ ದತ್ತಿ ನಿಧಿ ಹಾಗೂ ಗುಡಿಬಂಡೆ ಪೂರ್ಣಿಮಾ ಪ್ರಶಸ್ತಿಗಳಿಗಾಗಿ ಕಥೆ ಹಾಗೂ ಕವನಗಳನ್ನು ಆಹ್ವಾನಿಸಿದೆ.
ಪ್ರೇಮಾ ಭಟ್ ದತ್ತಿ ನಿಧಿ ಪ್ರಶಸ್ತಿಗಾಗಿ ನಡೆಯಲಿರುವ ಕಥಾ ಸ್ಪರ್ಧೆಗೆ ಲೇಖಕಿಯರು ಅಪ್ರಕಟಿತ, ಸ್ವಂತ ಕಥೆಗಳನ್ನು ಕಳುಹಿಸಬೇಕು. ಗ್ರಾಮಾಂತರ ಪ್ರದೇಶದ ಲೇಖಕಿಯರಿಗೆ ಹೆಚ್ಚಿನ ಪ್ರಾಶಸ್ತ್ಯ. ಕೈ ಬರಹದಲ್ಲಿರುವ ಕಥೆ ಹತ್ತು ಪುಟಗಳ ಮಿತಿಯಲ್ಲಿರಬೇಕು. ಕಥೆ ತಲುಪಲು ಕೊನೆಯ ದಿನಾಂಕ, ಫೆ. 28, 2003.
ಗುಡಿಬಂಡೆ ಪೂರ್ಣಿಮಾ ದತ್ತಿ ನಿಧಿ ಬಹುಮಾನಕ್ಕಾಗಿ ನಡೆಸುವ ಕವನ ಸ್ಪರ್ಧೆಗೆ ಉದಯೋನ್ಮುಖ ಕವಯಿತ್ರಿಯರಿಂದ ಕವನಗಳನ್ನು ಆಹ್ವಾನಿಸಲಾಗಿದೆ. ಯಾವುದೇ ಕವನ ಸಂಕಲನಗಳನ್ನು ಪ್ರಕಟಿಸದ, ಆದರೆ ಯಾವುದಾದರೂ ಪತ್ರಿಕೆಯಲ್ಲಿ ಪ್ರಕಟವಾದ ಕವನಗಳನ್ನು ಈ ಸ್ಪರ್ಧೆಗೆ ಕಳುಹಿಸಬಹುದು. ಪ್ರಕಟಿತ ಕವನದ ಪ್ರತಿ ಹಾಗೂ ಸ್ವವಿಳಾಸದೊಂದಿಗೆ ಕವನವನ್ನು ಫೆ. 23, 2003ರೊಳಗೆ ಕಳುಹಿಸಬೇಕು.
ಕಥೆ ಅಥವಾ ಕವನ ಕಳುಹಿಸಿಕೊಡಬೇಕಾದ ವಿಳಾಸ : ಅಧ್ಯಕ್ಷರು, ಕರ್ನಾಟಕ ಲೇಖಕರಿಯ ಸಂಘ (ರಿ), ಬೆಂಗಳೂರು ನಂ. 206, 2ನೇ ಮಹಡಿ, ವಿಜಯ ಮ್ಯಾನ್ಶನ್ಸ್, 2ನೇ ತಿರುವು, 2ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು- 560 018.ಗುಡ್ ಲಕ್.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...