ವೀರಪ್ಪನ್ಗೆ ಫೇರ್ ಆ್ಯಂಡ್ ಲವ್ಲೀ ಶೃಂಗಾರ ?
ಬೆಂಗಳೂರು : ಕಾಡುಗಳ್ಳ ವೀರಪ್ಪನ್ ಕಾಡಿನಲ್ಲಿ ಐಷಾರಾಮಿ ಜೀವನ ಸಾಗಿಸುತ್ತಿದ್ದಾನೆಯೇ ? ನಾಗಪ್ಪನವರ ಶವ ದೊರಕಿದ ಚೆಂಗಡಿ ಅರಣ್ಯ ಪ್ರದೇಶದಲ್ಲಿ ಎಸ್ಟಿಎಫ್ ಪೊಲೀಸರಿಗೆ ದೊರೆತಿರುವ ಕೆಲವು ವಸ್ತುಗಳು ಈ ಅನುಮಾನ ಮೂಡಿಸಿವೆ.
ದೊರೆತಿರುವ ವಸ್ತುಗಳಾದರೂ ಎಂಥವು ನೋಡಿ : ಬಾಸುಮತಿ ಅಕ್ಕಿ, ಮೈಸೂರು ಸ್ಯಾಂಡಲ್ ಸೋಪು, ಫೇರ್ ಆ್ಯಂಡ್ ಲವ್ಲೀ, ಅಡುಗೆಗೆ ಎಂಟಿಆರ್ ಮಸಾಲೆ, ಕುಡಿಯಲು ಅಮೂಲ್ಯ ಹಾಲಿನ ಪುಡಿ, ಬ್ರಿಟಾನಿಯಾ ಬಿಸ್ಕೆಟ್, ಬಾದಾಮಿ, ದ್ರಾಕ್ಷಿ, ಸೇಬು, ಖಾರ ತಿನಿಸುಗಳು- ಇದೆಲ್ಲವು ಇದ್ದ ಮೇಲೆ ಬದುಕು ಐಷಾರಾಮಿ ಅಲ್ಲದೆ ಏನು ? ನಮ್ಮ ಗ್ರಾಮೀಣರು ಇವುಗಳನ್ನು ಬಳಸಲು ಸಾಧ್ಯವೆ?
ಇವಿಷ್ಟೇ ಅಲ್ಲ - ವೀರಪ್ಪನ್ ಬಳಸುತ್ತಿದ್ದ ಎನ್ನಲಾದ ಅಕ್ವಾ ಟೂತ್ಬ್ರಷ್, ಪೇಸ್ಟ್, ಹೇರ್ ಡೈ, ರಿನ್ ಪೌಡರ್ , ಸೊಳ್ಳೇ ಓಡಿಸುವ ಒಡೋಮಸ್ ಕಾಯಿಲ್, ಕೊಬ್ಬರಿ ಎಣ್ಣೆ, ಮೈಗೆ ಸವರಿಕೊಳ್ಳುವ ಕ್ರೀಮ್ಗಳು, ಕ್ಷೌರ ಮಾಡಿಕೊಳ್ಳಲು ಬೇಕಾದ ಸಾಮಗ್ರಿಗಳು, ಊಟದ ತಟ್ಟೆ, ಲೋಟಗಳು, ಮಲ್ನಾಡ್ ಹೆಸರಿನ ತುಪ್ಪದ ಡಬ್ಬಗಳು, ಬ್ರೂ ಕಾಫಿ ಪುಡಿ , ಬನಿಯನ್ಗಳು, ಅಂಡರ್ವೇರ್ಗಳು, ಮಂಕಿ ಕ್ಯಾಪ್ಗಳು ಹಾಗೂ ವಿವಿಧ ಮಾತ್ರೆಗಳು ಕಾಡಿನಲ್ಲಿ ದೊರೆತಿವೆ.
ಹೆಚ್ಚು ಬೆಳಕು ಚೆಲ್ಲುವ ಬ್ಯಾಟರಿಗಳು, ಶೆಲ್ಗಳು, ಫೋಟೋ ಕ್ಯಾಮರಾ ಕೂಡ ಕಾಡಿನಲ್ಲಿ ದೊರೆತಿವೆ. ಇದೆಲ್ಲ ದೊರೆಯುವಾಗ ಕಾಡಾದರೇನು ನಾಡಾದರೇನು ?
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ