ಜನವರಿ 28 ರಿಂದ ದೆಹಲಿಯಲ್ಲಿ ಕನ್ನಡ ಸಂಸ್ಕೃತಿಯ ಸವಿಯೂಟ
(ಇನ್ಫೋ ವಿಶೇಷ ವಾರ್ತೆ)
ನವದೆಹಲಿ : ಭಕ್ತಿ- ಭಾವ- ಜಾನಪದ ಗೀತೆಗಳು, ನಾಟಕ, ಸಿನಿಮಾ, ಭರತನಾಟ್ಯ- ಕೂಚುಪುಡಿ ಇನ್ನೂ ಏನೇನೋ ಉಂಟು. ರಾಜಧಾನಿಯಲ್ಲಿರುವ ಕನ್ನಡಿಗರೇ ಮಿಸ್ ಮಾಡಿಕೊಳ್ಳಬೇಡಿ. ಜನವರಿ 24ರಿಂದ 28ರವರೆಗೆ ಕರ್ನಾಟಕ ಉತ್ಸವ.
ಕಾರ್ಯಕ್ರಮಗಳ ಪಟ್ಟಿ ಇಂತಿದೆ...
- ಜನವರಿ 24, ಬೆಳಗ್ಗೆ : ತೀನ್ಮೂರ್ತಿ ಭವನದ ಸಭಾಂಗಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಉತ್ಸವವನ್ನು ಉದ್ಘಾಟಿಸುವರು. ವಾರ್ತಾ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಸಮಾರಂಭದ ಅಧ್ಯಕ್ಷತೆ ವಹಿಸುವರು. ನೃತ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್ ಮುಖ್ಯ ಅತಿಥಿ.
ಸಂಜೆ 6 ಗಂಟೆ : ಪ್ರೊ.ಬಿ.ಕೆ. ಚಂದ್ರಶೇಖರ್ ಅವರಿಂದ ಸಾಂಸ್ಕೃತಿಕ ಉತ್ಸವ ಉದ್ಘಾಟನೆ. ರಂಗ ಕಲಾವಿದೆ ಅರುಂಧತಿ ನಾಗ್ ಮುಖ್ಯ ಅತಿಥಿ. ಲೋಕ ವಿ.ಶಂಕರ್ ಅವರಿಂದ ಕರ್ನಾಟಕ ಸಂಗೀತದ ಕೊಳಲು ವಾದನ. ಮಂಡ್ಯ ಗೆಳೆಯರ ಬಳಗದಿಂದ ಬಿ.ವಿ.ಕಾರಂತ್ ನಿರ್ದೇಶನದ ಸೇವಂತಿ ನಾಟಕ ಪ್ರದರ್ಶನ.
- ಜನವರಿ 25 ಸಂಜೆ 6 ಗಂಟೆ : ಸಂಗೀತಾ ಕಟ್ಟಿ ಭಾವಗೀತೆ ಹಾಡಲಿದ್ದಾರೆ. ನಂತರ ಅನುರಾಧ ಅಂಬಲ್ಪಾಡಿ ಕೂಚುಪುಡಿ ನೃತ್ಯ ಪ್ರದರ್ಶಿಸುವರು. ತದ ನಂತರ ಮಲ್ಲಮ್ಮ ಮೇಗೇರಿ ಮತ್ತು ತಂಡ ಶ್ರೀ ಕೃಷ್ಣ ಪಾರಿಜಾತ ಪ್ರದರ್ಶನ ನೀಡಲಿದೆ.
- ಜನವರಿ 26 ಸಂಜೆ 6 ಗಂಟೆ : ಕರ್ನಾಟಕ ಭವನದಲ್ಲಿ ಡಾ. ಚಂದ್ರಶೇಖರ ಕಂಬಾರರ ಸಾಂಬಶಿವ ಪ್ರಹಸನ ನಾಟಕ ಪ್ರದರ್ಶನ. ಅಭಿನಯ- ಮಂಡ್ಯ ಗೆಳೆಯರ ಬಳಗ. ನಿದೇಶನ- ಅಶೋಕ ಬಾದರದಿನ್ನಿ.
- ಜನವರಿ 27 ಸಂಜೆ 6 : ಶ್ರೀರಾಮ್ ಸೆಂಟರ್ನಲ್ಲಿ ಸಾಂಸ್ಕೃತಿಕ ಉತ್ಸವದ ಸಮಾರೋಪ. ಬಾನಂದೂರು ಕೆಂಪಯ್ಯ, ವೇಮಗಲ್ ನಾರಾಯಣ ಸ್ವಾಮಿ, ಪುರಂಧರ ಭರಣಿ, ರಮಾ ಭರಣಿ ಮತ್ತು ಎನ್.ಜಯರಾಂ ಜಾನಪದ ಗೀತೆಗಳನ್ನು ಹಾಡಲಿದ್ದಾರೆ. ಬೆಂಗಳೂರಿನ ವಾರ್ತಾ ಇಲಾಖೆಯ ಸಂಗೀತ- ನಾಟಕ ವಿಭಾಗದಿಂದ ನೀ ನೀನಾದರೆ ನೀ ನಾನೇನಾ ಹಾಸ್ಯ ನಾಟಕ ಪ್ರದರ್ಶನ.
- ಜನವರಿ 28 : ಆಂಧ್ರ ಭವನದಲ್ಲಿ ಸಿನಿಮಾ ಉತ್ಸವ. ಸ್ಪರ್ಶ, ಪ್ರೀತ್ಸೆ ಹಾಗೂ ಗಂಧದಗುಡಿ ಚಿತ್ರಗಳ ಪ್ರದರ್ಶನ.
ಮುಖಪುಟ / ಸಾಹಿತ್ಯ ಸೊಗಡು


More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications