ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜನವರಿ 28 ರಿಂದ ದೆಹಲಿಯಲ್ಲಿ ಕನ್ನಡ ಸಂಸ್ಕೃತಿಯ ಸವಿಯೂಟ
(ಇನ್ಫೋ ವಿಶೇಷ ವಾರ್ತೆ)
ನವದೆಹಲಿ : ಭಕ್ತಿ- ಭಾವ- ಜಾನಪದ ಗೀತೆಗಳು, ನಾಟಕ, ಸಿನಿಮಾ, ಭರತನಾಟ್ಯ- ಕೂಚುಪುಡಿ ಇನ್ನೂ ಏನೇನೋ ಉಂಟು. ರಾಜಧಾನಿಯಲ್ಲಿರುವ ಕನ್ನಡಿಗರೇ ಮಿಸ್ ಮಾಡಿಕೊಳ್ಳಬೇಡಿ. ಜನವರಿ 24ರಿಂದ 28ರವರೆಗೆ ಕರ್ನಾಟಕ ಉತ್ಸವ.
ಕಾರ್ಯಕ್ರಮಗಳ ಪಟ್ಟಿ ಇಂತಿದೆ...
- ಜನವರಿ 24, ಬೆಳಗ್ಗೆ : ತೀನ್ಮೂರ್ತಿ ಭವನದ ಸಭಾಂಗಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಉತ್ಸವವನ್ನು ಉದ್ಘಾಟಿಸುವರು. ವಾರ್ತಾ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಸಮಾರಂಭದ ಅಧ್ಯಕ್ಷತೆ ವಹಿಸುವರು. ನೃತ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್ ಮುಖ್ಯ ಅತಿಥಿ.
ಸಂಜೆ 6 ಗಂಟೆ : ಪ್ರೊ.ಬಿ.ಕೆ. ಚಂದ್ರಶೇಖರ್ ಅವರಿಂದ ಸಾಂಸ್ಕೃತಿಕ ಉತ್ಸವ ಉದ್ಘಾಟನೆ. ರಂಗ ಕಲಾವಿದೆ ಅರುಂಧತಿ ನಾಗ್ ಮುಖ್ಯ ಅತಿಥಿ. ಲೋಕ ವಿ.ಶಂಕರ್ ಅವರಿಂದ ಕರ್ನಾಟಕ ಸಂಗೀತದ ಕೊಳಲು ವಾದನ. ಮಂಡ್ಯ ಗೆಳೆಯರ ಬಳಗದಿಂದ ಬಿ.ವಿ.ಕಾರಂತ್ ನಿರ್ದೇಶನದ ಸೇವಂತಿ ನಾಟಕ ಪ್ರದರ್ಶನ.
- ಜನವರಿ 25 ಸಂಜೆ 6 ಗಂಟೆ : ಸಂಗೀತಾ ಕಟ್ಟಿ ಭಾವಗೀತೆ ಹಾಡಲಿದ್ದಾರೆ. ನಂತರ ಅನುರಾಧ ಅಂಬಲ್ಪಾಡಿ ಕೂಚುಪುಡಿ ನೃತ್ಯ ಪ್ರದರ್ಶಿಸುವರು. ತದ ನಂತರ ಮಲ್ಲಮ್ಮ ಮೇಗೇರಿ ಮತ್ತು ತಂಡ ಶ್ರೀ ಕೃಷ್ಣ ಪಾರಿಜಾತ ಪ್ರದರ್ಶನ ನೀಡಲಿದೆ.
- ಜನವರಿ 26 ಸಂಜೆ 6 ಗಂಟೆ : ಕರ್ನಾಟಕ ಭವನದಲ್ಲಿ ಡಾ. ಚಂದ್ರಶೇಖರ ಕಂಬಾರರ ಸಾಂಬಶಿವ ಪ್ರಹಸನ ನಾಟಕ ಪ್ರದರ್ಶನ. ಅಭಿನಯ- ಮಂಡ್ಯ ಗೆಳೆಯರ ಬಳಗ. ನಿದೇಶನ- ಅಶೋಕ ಬಾದರದಿನ್ನಿ.
- ಜನವರಿ 27 ಸಂಜೆ 6 : ಶ್ರೀರಾಮ್ ಸೆಂಟರ್ನಲ್ಲಿ ಸಾಂಸ್ಕೃತಿಕ ಉತ್ಸವದ ಸಮಾರೋಪ. ಬಾನಂದೂರು ಕೆಂಪಯ್ಯ, ವೇಮಗಲ್ ನಾರಾಯಣ ಸ್ವಾಮಿ, ಪುರಂಧರ ಭರಣಿ, ರಮಾ ಭರಣಿ ಮತ್ತು ಎನ್.ಜಯರಾಂ ಜಾನಪದ ಗೀತೆಗಳನ್ನು ಹಾಡಲಿದ್ದಾರೆ. ಬೆಂಗಳೂರಿನ ವಾರ್ತಾ ಇಲಾಖೆಯ ಸಂಗೀತ- ನಾಟಕ ವಿಭಾಗದಿಂದ ನೀ ನೀನಾದರೆ ನೀ ನಾನೇನಾ ಹಾಸ್ಯ ನಾಟಕ ಪ್ರದರ್ಶನ.
-
ಜನವರಿ
28
:
ಆಂಧ್ರ
ಭವನದಲ್ಲಿ
ಸಿನಿಮಾ
ಉತ್ಸವ.
ಸ್ಪರ್ಶ,
ಪ್ರೀತ್ಸೆ
ಹಾಗೂ
ಗಂಧದಗುಡಿ
ಚಿತ್ರಗಳ
ಪ್ರದರ್ಶನ.
Comments
Story first published: Friday, October 27, 2000, 5:30 [IST]