ತಮ್ಮ ಆರೋಗ್ಯಕ್ಕೆ ಕವಿತೆಯೇ ಕಾರಣ - ಕೆ.ಎಸ್. ನರಸಿಂಹಸ್ವಾಮಿ
(ಇನ್ಫೋ ವಿಶೇಷ ವಾರ್ತೆ)
ಬೆಂಗಳೂರು : ಪ್ರಸ್ತುತದ ಮನುಷ್ಯನ ಬದುಕು ನೆಮ್ಮದಿ ಕಳೆದುಕೊಂಡಿರುವ ಬಗ್ಗೆ ವಿಷಾದಿಸಿರುವ ಮೈಸೂರು ಮಲ್ಲಿಗೆ ಕವಿ ಕೆ.ಎಸ್. ನರಸಿಂಹಸ್ವಾಮಿ ತಮ್ಮ ಆರೋಗ್ಯಕ್ಕೆ ಕವಿತೆಗಳೇ ಕಾರಣ ಎಂದು ಹೇಳಿದ್ದಾರೆ.
ಕನ್ನಡ ಕಾವ್ಯ ಲೋಕ ಎತ್ತ ಸಾಗುತ್ತಿದೆ ಎಂದು ಹೇಳುವುದು ಕಷ್ಟ ಎಂದ ನರಸಿಂಹಸ್ವಾಮಿ, ಕನ್ನಡ ಕಾವ್ಯ ಸಾಗುತ್ತಿರುವ ಹಾದಿಯನ್ನು - ಹಾಡಲು ಕೋಗಿಲೆಗಳು ಸಿದ್ಧವಾಗಿವೆ, ಆದರೆ ವಸಂತವೇ ಬಂದಿಲ್ಲ ಎಂದು ಮುಗುಮ್ಮಾಗಿ ಹೇಳಿದರು. ಅವರು ಸೋಮವಾರ ಕನ್ನಡಭವನದ ನಯನ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಜೋಗದ ಸಿರಿಯ ಕವಿ. ಪ್ರೊ.ಕೆ.ಎಸ್. ನಿಸಾರ್ ಅಹಮದ್ರ ‘ಅರವತ್ತೆೈದರ ಐಸಿರಿ’ ಹಾಗೂ ‘ಸಮಗ್ರ ಭಾವಗೀತೆಗಳು’ ಸಂಕಲಗಳನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಶ್ರೀವಾರಿ ಪ್ರಕಾಶನ ಈ ಎರಡೂ ಪುಸ್ತಕಗಳನ್ನು ಪ್ರಕಟಿಸಿದೆ.
ಸತ್ಸಂಗದಿಂದ ನಿಸಾರ್ ಒಳ್ಳೆಯ ಕವಿಯಾಗಿದ್ದಾರೆ ಎಂದು ನಿಸಾರರ ಕಾವ್ಯವನ್ನು ಪ್ರಶಂಸಿದ ಕೆಎಸ್ನ, ನಿಸಾರರ ಪ್ರಥಮ ಸಂಕಲನಕ್ಕೆ ತಾವು ಮುನ್ನುಡಿ ಬರೆದುದನ್ನು ನೆನಪಿಸಿಕೊಂಡರು.
ಭಾವಗೀತೆಗಳನ್ನು ಬರೆಯುವುದು ಪಾಪವಲ್ಲ : ನಿಸಾರರ ಕವಿತೆಗಳನ್ನು ಕುರಿತು ಮಾತನಾಡಿದ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಒಳ್ಳೆಯ ಹಾಡು ಬರೆಯುವುದು ಸುಲಭವಲ್ಲ . ಗಂಭೀರ ಕಾವ್ಯ ದಟ್ಟವಾಗಿ ಸೃಷ್ಟಿಯಾಗುತ್ತಿದ್ದ ಕಾಲದಲ್ಲಿ ನಿಸಾರರು ಒಳ್ಳೆಯ ಭಾವಗೀತೆ ಬರೆದರು ಎಂದು ವೆಂಕಟೇಶಮೂರ್ತಿ ಹೇಳಿದರು. ಭಾವಗೀತೆಗಳನ್ನು ಬರೆಯುವುದು ಪಾಪ ಎಂದಾದಲ್ಲಿ ನಮ್ಮನ್ನು ಪುರಂದರ ಹಾಗೂ ಕನಕದಾಸರು ಎಂದೂ ಕ್ಷಮಿಸುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ನಿಸಾರರ ಕವಿತೆಗಳ ಬಗ್ಗೆ ಮಾತನಾಡಿದ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಜನರ ಪ್ರೀತಿಯನ್ನು ನಂಬಿ ಬರೆದ ಕವಿ ನಿಸಾರ್ ಎಂದರು. ಪ್ರೊ.ಎಂ.ಎಚ್.ಕೃಷ್ಣಯ್ಯ ‘ಅರವತ್ತೆೈದರ ಐಸಿರಿ’ ಸಂಕಲನದ ಬಗ್ಗೆ ಮಾತನಾಡಿದರು. ಪ್ರೊ. ದೇ. ಜವರೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪುನರ್ಜನ್ಮ ಗಾಂಧಿ ಬಜಾರಿನಲ್ಲೇ ಇರಲಿ : ಮರುಜನ್ಮ ಇರುವುದಾದರೇ ನಾನು ಗಾಂಧಿ ಬಜಾರಿನಲ್ಲೇ ಇರಲು ಬಯಸುತ್ತೇನೆ. ಮತ್ತೆ ಮಾಸ್ತಿ ನನ್ನ ಬೆನ್ನು ತಟ್ಟಬೇಕು. ಅವರೊಂದಿಗೆ ಹರಟಬೇಕು. ಇದು ಸಾಧ್ಯವಾಗದಿದ್ದಲ್ಲಿ ನನಗೆ ಮರುಜನ್ಮ ಬೇಡವೇ ಬೇಡ ಎಂದು ನಿಸಾರ್ ಅಹಮದ್ ಭಾವುಕರಾಗಿ ಹೇಳಿದರು.
ಭಾವಗೀತೆಯ ಪ್ರಕಾರ ತಮಗೆ ಅಂತರ್ಗತ ಎನ್ನುವುದನ್ನು ಒತ್ತಿ ಹೇಳಿದ ನಿಸಾರ್, ಭಾವಗೀತೆಗಳಿಗೆ ಅಭಾವ ಬಂದಿರುವ ಸಂದರ್ಭದಲ್ಲೇ ಕೆಎಸ್ನ ‘ಸಂಜೆಹಾಡು’ ಬರೆದಿರುವುದನ್ನು ಎತ್ತಿ ಹೇಳಿದರು.
ಕೆಎಸ್ನಗೆ ಸನ್ಮಾನ : ನರಸಿಂಹಸ್ವಾಮಿ ಹಾಗೂ ಅವರ ಪತ್ನಿ ವೆಂಕಟಮ್ಮ ಅವರನ್ನು ಪ್ರೊ. ಜಿ. ವೆಂಕಟಸುಬ್ಬಯ್ಯ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಮಾಲತಿಶರ್ಮ, ನಗರ ಶ್ರೀನಿವಾಸ ಉಡುಪ ಹಾಗೂ ಅರ್ಚನ ಉಡುಪ ಭಾವಗೀತೆಗಳನ್ನು ಹಾಡಿದರು.
ಮುಖಪುಟ / ಸಾಹಿತ್ಯ ಸೊಗಡು![]()
![]()
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications