ಬಾಗಲಕೋಟೆಯಲ್ಲಿ ಇವತ್ತು
ಬಾಗಲಕೋಟೆ : ಭಾನುವಾರದಂದು ಸಾಹಿತ್ಯ ಸಮ್ಮೇಳನ ವೇದಿಕೆಯಲ್ಲಿ ಕನ್ನಡ ಕಾವ್ಯ, ಕಾದಂಬರಿ ಮತ್ತು ಸಣ್ಣ ಕತೆ ಕ್ಷೇತ್ರದಲ್ಲಿ ನಡೆದ ಸಾಹಿತ್ಯ ಕೃಷಿಯ ಬಗ್ಗೆ ಮೂರು ದೀರ್ಘ ಗೋಷ್ಠಿಗಳು ನಡೆದವು.
ಬೆಳಗಿನ ಕಾವ್ಯ ಗೋಷ್ಠಿಯಲ್ಲಿ , ಕನ್ನಡದ ಪ್ರಮುಖ ಹಿರಿಯ ಕವಿಗಳ ಕಾವ್ಯ ರಚನಾ ಪ್ರಕ್ರಿಯೆಯಲ್ಲಿ ವ್ಯಕ್ತವಾದ ಕಾಳಜಿ, ಬಿಂಬಿಸಿದ ಸೌಂದರ್ಯ ಮತ್ತು ಅವುಗಳ ಶ್ರೇಷ್ಠತೆಯ ಕುರಿತು ಚರ್ಚೆ ನಡೆಯಿತು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ದಲಿತ ಕವಿ ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ 250 ವರ್ಷಗಳ ಅವಧಿಯಲ್ಲಿ ಕನ್ನಡ ಕಾವ್ಯ ಪ್ರಕಾರವು ಹೊಸ ಚಳವಳಿ, ಕ್ರಾಂತಿಗಳನ್ನು ಕಂಡುಂಡು ಸಮೃದ್ಧವಾಗಿ ಬೆಳೆದಿದೆ ಎಂದರು. ಅಡಿಗ, ಕುವೆಂಪು, ಮತ್ತು ಬೇಂದ್ರೆಯ ಕಾವ್ಯ ಕೃಷಿಯಲ್ಲಿ ಪ್ರೌಢತೆಯಿದ್ದು , ಇವರ ಜೊತೆಗೆ ಮಾಸ್ತಿಯವರ ಕಥನ ಕಾವ್ಯವೂ ವಿಶ್ವ ಶ್ರೇಷ್ಠ ಸಾಹಿತ್ಯದ ಸಾಲಿನಲ್ಲಿ ನಿಲ್ಲುತ್ತದೆ ಎಂದರು. ರಾಷ್ಟ್ರ ಕವಿ ಗೋವಿಂದ ಪೈ ಸಾಹಿತಿ ಮಾತ್ರವಲ್ಲದೆ ವಿದ್ವಾಂಸರಾಗಿದ್ದರು. ಅವರ ಗೋಲ್ಗೋಥಾ ಮತ್ತು ವೈಶಾಖ ಕನ್ನಡ ಕಾವ್ಯ ಬೆಳೆಯಬೇಕಾದ ಪಥವನ್ನು ತೋರಿಸಿಕೊಟ್ಟಿದೆ ಎಂದು ವಿಶ್ಲೇಷಿಸಿದರು.
ಕಾದಂಬರಿ ಬೆಳವಣಿಗೆಗೆ ಬದುಕಿನ ವೇಗ ಅಡ್ಡ
ಕಾದಂಬರಿ ಕ್ಷೇತ್ರದ ಬೆಳವಣಿಗೆಯ ವೇಗ ಕಡಿಮೆಯಾಗಿದ್ದರೂ ಬೆಳಕಿಗೆ ಬಂದಿರುವ ಕಾದಂಬರಿಗಳ ಗುಣಮಟ್ಟ ಕುಸಿದಿಲ್ಲ ಎಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಡಾ. ಎಂ.ಜಿ. ಬಿರಾದಾರ ಹೇಳಿದರು. ಜನಪ್ರಿಯತೆಯನ್ನು ಪಡೆದುಕೊಂಡ ಸಾಹಿತ್ಯ ಪ್ರಕಾರವಾಗಿದ್ದರೂ ಕಾದಂಬರಿಗಳನ್ನು ಪ್ರಕಟಿಸುವುದುಕ್ಕೆ ಪ್ರಕಾಶಕರೂ ಮುಂದೆ ಬರದಿರುವುದು ಈ ಪ್ರಕಾರ ಬೆಳೆಯದಿರಲು ಒಂದು ಕಾರಣ ಎಂದ ಬಿರಾದಾರ ಸಾಕಷ್ಟು ಜನಪ್ರಿಯ ಕಾದಂಬರಿಗಳನ್ನು ಬರೆದ ಎಸ್.ಎಲ್. ಭೈರಪ್ಪ ಅವರ ಕಾದಂಬರಿಯ ಬಗ್ಗೆ ಮಾತನಾಡುತ್ತಾ, ಭೈರಪ್ಪನವರ ಜನಪ್ರಿಯತೆಯ ಬಗ್ಗೆ ಮತ್ಸ ರದಿಂದ ಮಾತನಾಡುವುದು, ಅವರ ಕಾದಂಬರಿಯಲ್ಲಿ ಪ್ರತಿಗಾಮಿತನ ಇದೆ ಎಂದು ಹೇಳುವುದು ತಪ್ಪು ಎಂದರು. ನಿರಂಜನ ಅವರು ಬಂಡಾಯ ಚಿಂತನೆಯ ಕಾದಂಬರಿಯನ್ನು ಬರೆದರೆ, ಅನಕೃ ಪ್ರಗತಿಶೀಲ ಚಳುವಳಿಯನ್ನು ಹುಟ್ಟು ಹಾಕಿದರು. ಆದರೂ ಉತ್ತಮ ಕಾದಂಬರಿಗಳು ಕನ್ನಡದಲ್ಲಿ ವಿರಳವಾಗಿದೆ. ಅಲ್ಲದೆ ಕಾದಂಬರಿ ಪ್ರಕಾರ ಬೆಳೆಯುವುದಕ್ಕೆ ತ್ವರಿತ ಗತಿಯಲ್ಲಿ ಬದಲಾಗುತ್ತಿರುವ ಬದುಕಿನ ಶೈಲಿ, ವೇಗ ಅಡ್ಡವಾಗುತ್ತಿವೆ ಎಂದರು.
ಮಾಸ್ತಿ ಕತೆಗಳ ಕ್ಯಾನ್ವಾಸ್ ಯಾರಿಗೂ ದಕ್ಕಿಲ್ಲ
ಸಣ್ಣ ಕತೆಯ ಬಗ್ಗೆ ನಡೆದ ಗೋಷ್ಠಿಯಲ್ಲಿ , ಬದುಕಿನ ತಲ್ಲಣ , ನೋವುಗಳು ಅನುಭವ ಮತ್ತು ಸ್ಪಂದನವಾಗಿ ಕನ್ನಡದಲ್ಲಿ ಸಾಕಷ್ಟು ಕತೆಗಳು ಬಂದಿವೆ. ಸಣ್ಣ ಕತೆಗಳ ಜನಕ ಮಾಸ್ತಿಯಿಂದ ಹಿಡಿದು ಕುಂದಾಪುರ ಕನ್ನಡದ ಸೊಗಡಿನಲ್ಲಿ ಕತೆ ಬರೆದ ವೈದೇಹಿಯವರೆಗೆ ಕತಾ ಲೋಕದಲ್ಲಿ ವೈವಿಧ್ಯಮಯ ಕತೆಗಳು ಬಂದಿವೆ ಎಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪ್ರೊ.ಬಿ.ಎ. ವಿವೇಕ ರೈ ಹೇಳಿದರು. ಗೊರೂರು, ಕೆ.ಸದಾಶಿವ, ಮತ್ತು ಚಿತ್ತಾಲರ ಸಣ್ಣ ಕತೆಗಳ ಕುರಿತು ಪ್ರಬಂಧ ಮಂಡಿಸಿದ ಪ್ರೊ.ಸಿ.ವಿ. ಪಾಟೀಲ್ ಇವರೆಲ್ಲರೂ ವ್ಯಕ್ತಿ ಕೇಂದ್ರಿತ ಚಿಂತನೆಯ ಮೂಲಕ ಸಮಷ್ಠಿ ಚಿಂತನೆಯ ಕತೆಗಳನ್ನು ಬರೆದವರು ಎಂದು ಹೇಳಿದರು.
ಮಾಸ್ತಿವಯವರ ಕತೆಗಳ ಕ್ಯಾನ್ವಾಸ್ ಮತ್ತೆ ಯಾವ ಕನ್ನಡದ ಕತೆಗಾರನಿಗೂ ದಕ್ಕಲಿಲ್ಲ ಎನ್ನುವ ಅಭಿಪ್ರಾಯ ಗೋಷ್ಠಿಯಲ್ಲಿ ವ್ಯಕ್ತವಾಯಿತು. ಅದೇ ರೀತಿ ದೇವನೂರು ಮಹಾದೇವರ ಮೊದಲ ಒಂದೆರಡು ಕತೆಗಳನ್ನು ಬಿಟ್ಟರೆ ಉಳಿದ ಕತೆಗಳಲ್ಲಿ ದೇವನೂರು ಬದುಕನ್ನು ಹಾಸ್ಯ, ವ್ಯಂಗ್ಯಗಳ ಮೂಲಕ ಕಾಣುತ್ತಾರೆ ಎನ್ನುವ ಅಭಿಪ್ರಾಯವೂ ವ್ಯಕ್ತವಾಯಿತು.
ಕವಿಗೋಷ್ಠಿ ಯಲ್ಲಿ ನಡೆದದ್ದು ಗದ್ದಲ
ಸಂಜೆ ನಡೆದ ಕವಿಗೋಷ್ಠಿ ಜನರ ಗದ್ದಲದ ನಡುವೆ ಅಪೂರ್ಣಗೊಂಡಿತು. ಗೋಷ್ಠಿಯಲ್ಲಿ ಜನಪ್ರಿಯ, ಹಿರಿಯ ಕವಿಗಳು ಭಾಗವಹಿಸದ ಕಾರಣ ನಿರಾಶರಾದ ಜನರು ಕವಿಗೋಷ್ಠಿಯ ಬಗೆಗೆ ಆಕ್ರೋಶ ವ್ಯಕ್ತಪಡಿಸಿದರು. ಅಧ್ಯಕ್ಷರಿಗೆ ಕೂಡ ಭಾಷಣ ಮಾಡಲು, ಕವಿತೆ ಓದಲು ಅಡ್ಡಿಪಡಿಸಿದರು. ವಿಶೇಷ ಉಪನ್ಯಾಸಗಳು ಕೂಡ ಹೊಸ ವಿಷಯಗಳ ಮಂಡನೆ ಹಾಗೂ ಚರ್ಚೆಗೆ ಅವಕಾಶ ಕೊಡದೆ ಮುಗಿದದ್ದು ಜನರನ್ನು ನಿರಾಶೆಗೊಳಿಸಿತು.
ಸಾಹಿತ್ಯ ಸೊಗಡು / ನಡೀರಿ ಹೋಗೋಣ ಬಾಗಲಕೋಟೆಗೆ / ಫೀಡ್ಬ್ಯಾಕ್-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications