ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇದು ಅಶರೀರವಾಣಿ, ಈಗ ಸುಳ್ಳುವಾರ್ತೆಗಳು..
ನಮಸ್ಕಾರ.
ಇದು
ಅಶರೀರವಾಣಿ,
ಈಗ
ಸುಳ್ಳು
ವಾರ್ತೆಗಳು.
ಓದುತ್ತಿರುವವರು
ಸತ್ಯ
ಹರಿಶ್ಚಂದ್ರನ
ಮೊಮ್ಮಗ.
ವಾರ್ತೆಗಳ
ವಿವರ
ಇಂತಿದೆ.
- ವಿಧಾನಸೌಧದ 7ನೇ ಮಹಡಿಯು ಬೆಳಗ್ಗೆ 12ಗಂಟೆಗೆ ಕುಸಿದು ಬಿದ್ದಿದ್ದು, ಯಾರಿಗೂ ಗಾಯ ಆಗಿಲ್ಲ. ಕಾರಣ ಕಚೇರಿಗೆ ನೌಕರರು ಇನ್ನೂ ಬಂದಿರಲಿಲ್ಲ.
- ಅಪರಿಚಿತ ರಾಜ್ಯದ ಸುಡುಗಾಡು ಜಿಲ್ಲೆಯ ಹೆಸರಿಲ್ಲದ ತಾಲೂಕಿನ ನಾಪತ್ತೆ ಗ್ರಾಮದಲ್ಲಿ ಒಂದು ಆನೆಯು, ತಾನು ಪ್ರೀತಿಸಿದ ಇರುವೆ ತನ್ನನ್ನು ಮದುವೆಯಾಗಲಿಲ್ಲವೆಂಬ ಕಾರಣಕ್ಕಾಗಿ ನೊಂದು ದಾರದಿಂದ ಕೊರಳು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದೆ.
- ಕ್ರೀಡಾವಾರ್ತೆ : ಭಾರತ ತಂಡ ಪಾಕಿಸ್ತಾನದ ಎಲ್ಲಾ ವಿಕೆಟ್ ಗಳನ್ನು ಒಂದೇ ಓವರ್ ನಲ್ಲಿ ಕಬಳಿಸಿ, ಗಿನ್ನಿಸ್ ದಾಖಲೆ ಮಾಡಿದೆ... ಇದೀಗ ಬಂದ ದಿಢೀರ್ ದಡಾರ್ ವಾರ್ತೆ : ಇನ್ನು ಕೆಲವೇ ಕ್ಷಣಗಳಲ್ಲಿ ಭೂಕಂಪವಾಗಲಿದ್ದು, ಯಾರೂ ಬದುಕುವ ಸಾಧ್ಯತೆ ಇಲ್ಲ. ಇಲ್ಲಿಗೆ ಸುಳ್ಳು ವಾರ್ತಾ ಪ್ರಸಾರ ಮುಕ್ತಾಯವಾಯಿತು. ಮತ್ತೆ ಮುಂದಿನ ಸುಳ್ಳು ವಾರ್ತೆ ಭೂಕಂಪದ ನಂತರ.
(ಜೋಕು ಕತ್ತರಿಸಿದವರು ; ಉಷಾರಾಣಿ)
Comments