IT Sector: ಐಟಿ ವಲಯದಲ್ಲಿ ಪ್ರಮುಖ ನೇಮಕಾತಿಯಲ್ಲಿ ಶೇ.1.5 ಕುಸಿತ ಸಾಧ್ಯತೆ
ಬೆಂಗಳೂರು, ಆಗಸ್ಟ್ 07: ಭಾರತದಲ್ಲಿ ಮಾಹಿತಿ ತಂತ್ರಜ್ಞಾನ (IT) ವಲಯದಲ್ಲಿನ ಉದ್ಯೋಗಗಳ ನೇಮಕ ಪ್ರಸಕ್ತ ಹಣಕಾಸು ವರ್ಷದಲ್ಲಿ ನೀರಸವಾಗಿದೆ. ದೇಶದ ಪ್ರಮುಖ ಐಟಿ ಕಂಪನಿಗಳು ಹಿಂದಿನ ವರ್ಷಕ್ಕೆ ಹೋಲಿಸಿದರೆ ಸದರಿ ಆರ್ಥಿಕ ವರ್ಷದಲ್ಲಿ ಶೇಕಡಾ 40 ರಷ್ಟು ಕಡಿಮೆ ನೇಮಕಾತಿಯ ನಿರೀಕ್ಷೆ ಇದೆ.
ಇದು ಹೀಗೆ ಮುಂದುವರಿದರೆ 2024ರ ಆರ್ಥಿಕ ವರ್ಷಕ್ಕೆ ಐಟಿ ಕ್ಷೇತ್ರದ ದೈತ್ಯ ಕಂಪನಿಗಳಲ್ಲಿಯೇ 50,000 ರಿಂದ 1,00,000 ಉದ್ಯೋಗಿಗಳ ಸಂಖ್ಯೆ ಕಡಿಮೆ ಆಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಕಳೆದ ವರ್ಷ 2022ರಲ್ಲಿ ಒಟ್ಟು ನಿವ್ವಳ 2,50,000 ಉದ್ಯೋಗಿಗಳ ನೇಮಕ ಆಗಿತ್ತು. ಆದರೆ ಇದು ಈ ವರ್ಷಕ್ಕೆ ಭಾರಿ ಕುಸಿತ ಕಂಡಿದೆ. ಇದು ಈ ಕ್ಷೇತ್ರದಲ್ಲಿನ ಬೇಡಿಕೆಯ ಅನಿಶ್ಚಿತತೆ ಮತ್ತು ತಂತ್ರಜ್ಞಾನ ಸೇವೆಗಳಲ್ಲಿನ ಮಂದಗತಿ ಬೆಳವಣಿಯನ್ನು ಸೂಚಿಸುತ್ತದೆ ಎಂದು ತಿಳಿದು ಬಂದಿದೆ.
ಈ ನೇಮಕಾತಿ ಇಳಿಕೆಯ ಪ್ರವೃತ್ತಿಯು ಭಾರತಕ್ಕೆ ಮತ್ತು ಸ್ವದೇಶಿ ಕಂಪನಿಗಳಿಗೆ ಮಾತ್ರ ಸಿಮೀತವಾಗಿಲ್ಲ. ಬದಲಾಗಿ ಭಾರತದಲ್ಲಿರುವ ಬೃಹತ್ ಉದ್ಯೋಗಿ ನೆಲೆಗಳನ್ನು ಹೊಂದಿರುವ ಅಂತಾರಾಷ್ಟ್ರೀಯ ಐಟಿ ದೊಡ್ಡ ಕಂಪನಿಗಳಲ್ಲಿ ಸಹ ಈ ವರ್ಷ ಸುಮಾರು 5,000 ರಷ್ಟು ಕುಸಿತ ಆಗಿದೆ.
ಇತ್ತೀಚಿನ ತ್ರೈಮಾಸಿಕದದಲ್ಲಿ ಆಕ್ಸೆಂಚರ್, ಕ್ಯಾಪ್ಜೆಮಿನಿ ಮತ್ತು ಕಾಗ್ನಿಜೆಂಟ್ಗಳಂತ ಕಂಪನಿಗಳಲ್ಲಿ ಉದ್ಯೋಗಿಗಳ ಸಂಖ್ಯೆ ಇಳಿಕೆ ಆಗಿದ್ದನ್ನು ಗಮನಿಸಬಹುದು. ಇದೆಲ್ಲ ಕಾರಣದಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ವಲಯದಿಂದ ನಿವ್ವಳ ನೇಮಕಾತಿಯಲ್ಲಿ ಶೇಕಡಾ 40 ಕುಸಿತ ನಿರೀಕ್ಷಿಸಬಹುದಾಗಿದೆ.

ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸಕ್ತ ಆಗಸ್ಟ್ನಲ್ಲಿ ಹೊಸ ನೇಮಕಾತಿಗಳ ಅಗತ್ಯತೆ ಸುಮಾರು ಶೇಕಡಾ 50 ರಷ್ಟು ಕಡಿಮೆ ಆಗಿದೆ ಎಂದು ಟೀಮ್ಲೀಸ್ ಡಿಜಿಟಲ್ನ ಮುಖ್ಯ ಕಾರ್ಯನಿರ್ವಾಹಕ ಸುನಿಲ್ ಸಿ ಮಾಹಿತಿ ನೀಡಿದರು.
ಯುರೋಪ್ ಕಂಪನಿ ಮುಖ್ಯಸ್ಥರ ಪ್ರತಿಕ್ರಿಯೆ
Quess ITಯ ಮುಖ್ಯ ಕಾರ್ಯನಿರ್ವಾಹಕ ವಿಜಯ್ ಶಿವರಾಮ್ ಅವರು ಶೇಕಡಾ 25- 30ರಷ್ಟು ಐಟಿ ನೇಮಕಾತಿಯ ಇಳಿಕೆಯು ತೀವ್ರ ಪರಿಣಾಮ ಬಿದ್ದಿದೆ. ಇದಕ್ಕೆ ಕೆಲವು ಕಾರಣಗಳನ್ನು ಹೆಸರಿಸಿರುವ ಅವರು, ಕಡಿಮೆ ನೇಮಕಾತಿಯು ಬೇಡಿಕೆ ಚಕ್ರಕ್ಕೆ ಹೊಡೆತ ನೀಡಿದೆ. ಕೆಲವು ಪ್ರಾಜೆಕ್ಟ್ಗಳ ರದ್ದತಿ, ಮ್ಯಾಕ್ರೋ ಸವಾಲುಗಳಿಂದ ಪ್ರತಿಕೂಲ ಪರಿಣಾಮ ಬೀರಿವೆ ಎಂದು ತಿಳಿಸಿದ್ದಾರೆ.
ವಿಪ್ರೋದಲ್ಲಿ ಫ್ರೆಶರ್ಸ್ ನೇಮಕಾತಿ ನಡೆದಿಲ್ಲ
ವಿಪ್ರೋದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸೌರಭ್ ಗೋವಿಲ್ ಅವರು, ಕಂಪನಿಯು ಮೊದಲ ತ್ರೈಮಾಸಿಕದಲ್ಲಿ ಯಾವುದೇ ಫ್ರೆಶರ್ಗಳನ್ನು ನೇಮಕ ಮಾಡಿಕೊಳ್ಳಲಿಲ್ಲ. ನೇಮಕಾತಿ ಬೇಡಿಕೆಗೆ ಅನುಗುಣವಾಗಿ ಆ ಬಗ್ಗೆ ನಿರ್ಧರಿಸುವದಾಗಿ ಹೇಳಿತ್ತು. ಸದ್ಯ ಅಗತ್ಯಕ್ಕೆ ತಕ್ಕ ಉದ್ಯೋಗಿಗಳನ್ನು ತಾವು ಹೊಂದಿರುವುದಾಗಿ ವಿಪ್ರೋ ತಿಳಿಸಿದೆ.
ಇನ್ನೂ ಇನ್ಫೋಸಿಸ್ ಕಂಪನಿಯು ಬೇಡಿಕೆ ಆಧಾರದಡಿ ನೇಮಕ ಮಾಡಿಕೊಳ್ಳುವ ಗುರಿ ಹೊಂದಲಾಗಿದೆ ಎಂದು ಇನ್ಫೋಸಿಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಲೀಲ್ ಪರೇಖ್ ತಿಳಿಸಿದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications