ಕಲಬುರಗಿ; ವಸತಿ ಶಾಲೆಯಲ್ಲಿ ಅತಿಥಿ ಶಿಕ್ಷಕರ ಹುದ್ದೆ ಖಾಲಿ ಇದೆ
ಬೆಂಗಳೂರು, ಜೂನ್ 23; ಕಲಬುರಗಿ ಜಿಲ್ಲೆಯ ಕಾಳಗನೂರ ಮತ್ತು ಗುಂಡಗುರ್ತಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜೂನ್ 25ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಕಲಬುರಗಿ ತಾಲೂಕಿನ ಕಾಳಗನೂರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಖಾಲಿ ಇರುವ ಇಂಗ್ಲೀಷ್ ವಿಷಯದ ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎ, ಬಿ.ಎಡ್. ವಿದ್ಯಾರ್ಹತೆ ಹೊಂದಿರಬೇಕು.
ಶಾಲೆಗಳಿಗೆ 5 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಸರ್ಕಾರದ ಒಪ್ಪಿಗೆ
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 10,000 ರೂ. ನೀಡಲಾಗುತ್ತದೆ. ಆಸಕ್ತರು ಕಾಳಗನೂರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಖುದ್ದಾಗಿ ತಮ್ಮ ರಿಸ್ಯೂಮ್ನೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9886611971.
Breaking; ಸರ್ಕಾರಿ ಶಾಲೆ ಅತಿಥಿ ಶಿಕ್ಷಕರ ಗೌರವ ಸಂಭಾವನೆ ಹೆಚ್ಚಳ
ಕಲಬುರಗಿ, ಶಿವಮೊಗ್ಗ, ಮೈಸೂರಿನಲ್ಲಿ ಕೆಲಸ ಖಾಲಿ ಇರುವ ಮಾಹಿತಿಗಳು ಸ್ಲೈಡ್ನಲ್ಲಿ ಲಭ್ಯವಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಇವುಗಳ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ; ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಹಾಕಿ
ಗುಂಡುಗುರ್ತಿ ಮೊರಾರ್ಜಿ ದೇಸಾಯಿ
ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಗುಂಡುಗುರ್ತಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಖಾಲಿ ಇರುವ ಇಂಗ್ಲೀಷ್ ವಿಷಯದ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಜೂನ್ 25 ಕೊನೆಯ ದಿನವಾಗಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ 7406248194, 9972902398, 7338556049 ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ.
ರಂಗಶಿಕ್ಷಕರ ಹುದ್ದೆಗೆ ತಾತ್ಕಾಲಿಕವಾಗಿ
ಭಾರತೀಯ ರಂಗಶಿಕ್ಷಣ ಕೇಂದ್ರ-ರಂಗಶಾಲೆಯಲ್ಲಿ ಇಬ್ಬರು ರಂಗಶಿಕ್ಷಕರ ಹುದ್ದೆಗಳನ್ನು ಸಂದರ್ಶನದ ಮೂಲಕ ಭರ್ತಿ ಮಾಡಲಾಗುತ್ತಿದೆ ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದ್ದಾರೆ. ಅಭ್ಯರ್ಥಿಗಳು ರಂಗಭೂಮಿಯಲ್ಲಿ ಅನುಭವ ಹೊಂದಿರಬೇಕು. ರಾಷ್ಟ್ರೀಯ ನಾಟಕ ಶಾಲೆಯ ಪದವಿ/ ರಾಜ್ಯದ ಯಾವುದೇ ರಂಗಶಿಕ್ಷಣ ಕೇಂದ್ರದಿಂದ ರಂಗಶಿಕ್ಷಣ ಪದವಿ/ ಡಿಪ್ಲೋಮಾ ಪಡೆದಿರಬೇಕು.
ರಂಗಭೂಮಿ ಅನುಭವ, ರಂಗ ಶಿಕ್ಷಣದಲ್ಲಿ ಶಿಕ್ಷಕರಾಗಿ ದುಡಿದ ಅನುಭವ ಹೊಂದಿರಬೇಕು. ಅಭ್ಯರ್ಥಿಗಳು ಜುಲೈ 8 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಜುಲೈ 13 ರಂದು ಬೆಳಗ್ಗೆ 10.30ಕ್ಕೆ ಮೈಸೂರು ರಂಗಾಯಣದಲ್ಲಿ ನಡೆಯುವ ಸಂದರ್ಶನಕ್ಕೆ ಮೂಲ ದಾಖಲಾತಿಗಳ (ಜನ್ಮ ದಿನಾಂಕ ದೃಢೀಕರಣ ಪತ್ರ, ಎನ್ಎಸ್ಡಿ ಡಿಪ್ಲೋಮಾ ಪ್ರಮಾಣಪತ್ರ, ರಂಗಶಿಕ್ಷಣ ಕೇಂದ್ರದ ಅನುಭವ ಪ್ರಮಾಣಪತ್ರ, ರಂಗಭೂಮಿ ಅನುಭವ ಕುರಿತು ಸ್ವವಿವರ ಪತ್ರ ಹಾಗೂ ಆಧಾರ್ ಕಾರ್ಡ್) ಜೊತೆ ಹಾಜರಾಗಬೇಕು.
ಅರ್ಜಿಗಳನ್ನು ಉಪನಿರ್ದೇಶಕರು, ರಂಗಾಯಣ, ವಿನೋಬಾ ರಸ್ತೆ, ಮೈಸೂರು-05 ವಿಳಾಸಕ್ಕೆ ಸಲ್ಲಿಸಬೇಕು. ಅರ್ಜಿ ನಮೂನೆಯನ್ನು www.rangayana.org ವೆಬ್ಸೈಟ್ದಿಂದ ಡೌನ್ಲೋಡ್ ಮಾಡಿಕೊಳ್ಳಬೇಕು.
ಉದ್ಯೋಗ ಸೃಜನೆ ಯೋಜನೆಯಡಿ ಆನ್ಲೈನ್ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಬ್ಯಾಂಕುಗಳಿಂದ ಸಾಲ ಪಡೆದು ಗ್ರಾಮೀಣ ಪ್ರದೇಶಗಳಲ್ಲಿ ಉತ್ಪಾದನಾ ಮತ್ತು ಸೇವಾ ವಲಯದ ಚಟುವಟಿಕೆ ಪ್ರಾರಂಭಿಸಲು ಕೇಂದ್ರ ಸರ್ಕಾರದಿಂದ ಶೇ.25 ರಿಂದ 35ರ ತನಕ, ನಗರ ಪ್ರದೇಶದಲ್ಲಿ ಶೇ.15 ರಿಂದ 25ರ ತನಕ ಸಹಾಯಧನ ಲಭ್ಯವಿದೆ. ಈ ಯೋಜನೆಯಡಿ ಹೊಸದಾಗಿ ಚಟುವಟಿಕೆಗಳನ್ನು ಪ್ರಾರಂಭಿಸಲು ಇಚ್ಛಿಸುವ ಶಿವಮೊಗ್ಗ ಜಿಲ್ಲೆಯ ಆಸಕ್ತ ಯುವಕ/ ಯುವತಿಯರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ
ಯೋಜನೆಯಡಿ
ಉತ್ಪಾದನಾ
ಘಟಕಗಳಿಗೆ
50
ಲಕ್ಷ
ಮತ್ತು
ಸೇವಾ
ಘಟಕಗಳಿಗೆ
20
ಲಕ್ಷ
ಗರಿಷ್ಟ
ಯೋಜನಾ
ವೆಚ್ಚದ
ಘಟಕಗಳಿಗೆ
ಬ್ಯಾಂಕುಗಳಿಂದ
ಆರ್ಥಿಕ
ನೆರವು
ಪಡೆಯಲು
ಅವಕಾಶವಿದೆ.
ಆಸಕ್ತರು
ಯೋಜನೆಯ
ಮಾಹಿತಿಯನ್ನು
ಪಡೆದು
www.kviconline.gov.in/pmegpeportal
ಜಾಲತಾಣದಲ್ಲಿ
ಅರ್ಜಿ
ಸಲ್ಲಿಸಬಹುದಾಗಿದೆ.
ಹೆಚ್ಚಿನ
ವಿವರಗಳಿಗೆ
ದೂರವಾಣಿ
ಸಂಖ್ಯೆ
08182-223273
/
9480825637.
ತುಮಕೂರಿನಲ್ಲಿ ವಿಕಲಚೇತನರಿಗೆ ಉದ್ಯೋಗ ಮೇಳ
ಸಮರ್ಥನಂ
ಅಂಗವಿಕಲ
ಸಂಸ್ಥೆ
ತುಮಕೂರಿನ
ವಿಶ್ವ
ವಿದ್ಯಾನಿಲಯ
ವಿಜ್ಞಾನ
ಕಾಲೇಜು,
ಡಾ.
ಶ್ರೀ
ಶಿವಕುಮಾರ್
ಮಹಾಸ್ವಾಮೀಜಿ
ಸಭಾಂಗಣದಲ್ಲಿ
25/06/2022
ರಂದು
ಬೆಳಗ್ಗೆ
9.00ಕ್ಕೆ
ವಿಕಲಚೇತನರ
ಉದ್ಯೋಗ
ಮೇಳವನ್ನು
ಆಯೋಜಿಸಿದ್ದಾರೆ.
ಭಾಗವಹಿಸಲು
ಇಚ್ಛಿಸುವವರು
ಹೆಚ್ಚಿನ
ಮಾಹಿತಿಗಾಗಿ
ಸಮರ್ಥನಂ
ಸಂಸ್ಥೆಯ
ಸಿಬ್ಬಂದಿಗಳಾದ
ವೀರಭದ್ರಪ್ಪ
ಪಾಟೀಲ್ಗೆ
ಕರೆ
ಮಾಡಬಹುದಾಗಿದೆ.
ಮೊಬೈಲ್
ನಂಬರ್
9480812121
ಹಾಗೂ
ಸುಭಾಷ್
ಮೊಬೈಲ್
ನಂಬರ್
9449864693.
ಇ-ಮೇಲ್
[email protected],
centerhead
Bangalore@
samarthanam.org
ಸಂಪರ್ಕಿಸುವಂತೆಯೂ
ಮನವಿ
ಮಾಡಲಾಗಿದೆ.