ಇಲಿನಾಯ್ು ವಿದ್ಯಾರಣ್ಯದಲ್ಲಿ ಯುಗಾದಿ
- ವರದಿ : ಕೆ. ತ್ರಿವೇಣಿ ಶ್ರೀನಿವಾಸರಾವ್, ಇಲಿನಾಯ್ು, ಅಮೆರಿಕಾ
[email protected] - ಚಿತ್ರಗಳು - ಶ್ರೀನಿವಾಸರಾವ್
ಮೊದಲಿಗೆ ಪೂಜಾ ಕಾರ್ಯಕ್ರಮವನ್ನು ಲೆಮಾಂಟ್ನ ರಾಮದೇಗುಲದ ಅರ್ಚಕರು ವಿದ್ಯುಕ್ತವಾಗಿ ನೆರವೇರಿಸಿದ ನಂತರ, ಪಂಚಾಂಗ ಶ್ರವಣವಿತ್ತು. ಬಹುಪಾಲು ಜನರ ವರ್ಷಭವಿಷ್ಯದಲ್ಲಿ ಆಯಕ್ಕಿಂತ ವ್ಯಯವೇ ಹೆಚ್ಚಾಗಿದ್ದಂತೆ ತೋರಿತು. ವ್ಯಯ ಸಂವತ್ಸರದಲ್ಲಿ, ಹಣ ಹೆಚ್ಚು ವ್ಯಯವಾದರೆ ಆಗಲಿ, ಆದರೆ ಅದು ಒಳ್ಳೆಯ ಕೆಲಸಕ್ಕೆ ಉಪಯೋಗವಾಗಲಿ ಎಂಬ ಅರ್ಚಕರ ನುಡಿ ಅರ್ಥಪೂರ್ಣವೆನಿಸಿತು.
|





ಈ ಕಾರ್ಯಕ್ರಮದಲ್ಲಿ ಹಾಡುತ್ತಿದ್ದ ಗಾಯಕಿ ಅನುಪಮಾ ನಿತಿನ್ ಇದ್ದಕ್ಕಿದ್ದಂತೆ ಕಣ್ಮರೆಯಾದ ರಹಸ್ಯ ಪತ್ತೆಯಾಗಿದ್ದು, ಅವರು ‘‘ಆರಾಧಿಸುವೆ ಮದನಾರಿ’’ ಹಾಡಿಗೆ ನರ್ತಿಸಲು ಸುಭದ್ರೆಯ ವೇಷದೊಂದಿಗೆ ಪ್ರತ್ಯಕ್ಷವಾದಾಗ! ಸುಭದ್ರೆಯ ಎದುರು ನಿಂತು ಹಾಡಲು ಅಲ್ಲಿ ಕಳ್ಳ ಸನ್ಯಾಸಿ ಅರ್ಜುನ ಇರಲಿಲ್ಲ. ಬದಲಿಗೆ ಅಲ್ಲಿದ್ದಿದ್ದು ಅನುಪಮಾ ಪತಿ ನಿತಿನ್! ಎಲ್ಲಾ ಗೀತೆಗಳೂ ಬಹಳ ಚೆನ್ನಾಗಿ ಮೂಡಿಬಂದಿತೆಂಬುದಕ್ಕೆ, ಪ್ರೇಕ್ಷಕರು ಹೃತ್ಪೂರ್ವಕವಾಗಿ ತಟ್ಟಿದ ಚಪ್ಪಾಳೆಗಿಂತ ಬೇರೆ ಪುರಾವೆ ಎಲ್ಲಿಂದ ತರಲಿ? ಒಂದು ಹಾಡನ್ನು ಇನ್ನೊಂದು ಹಾಡಿನೊಂದಿಗೆ ಬೆಸೆಯಲು ನಡುವೆ ಆಕರ್ಷಕ ನಿರೂಪಣೆಯೂ ಇತ್ತು. ನಾನಂತೂ ‘‘ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ’’ ಹಾಡಿದ ಗಾಯಕ ದಿನೇಶ್ ಕಾದಮುದ್ದಿಯವರಲ್ಲಿ, ಮುಂದಿನ ಬಾರಿ ಹಾಡಲು ‘‘ಕನಸುಗಾರನ ಒಂದು ಕನಸು ಕೇಳಮ್ಮಾ’’ ಹಾಡಿಗೆ ಅರ್ಜಿಯನ್ನೂ ಈಗಾಗಲೇ ಸಲ್ಲಿಸಿಬಿಟ್ಟಿದ್ದೇನೆ!










Click it and Unblock the Notifications