Naga panchami 2023: ನಾಗ ಪಂಚಮಿ ದಿನ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳು ಇವು...
ಶ್ರಾಮಣ ಮಾಸ ಆರಂಭವಾಗಿದೆ. ಶ್ರಾವಣ ಮಾಸವನ್ನು ಹಬ್ಬಗಳ ತಿಂಗಳು ಎಂದು ಕರೆಯಲಾಗುತ್ತದೆ. ಈ ಹಬ್ಬಗಳಲ್ಲಿ ನಾಗರ ಪಂಚಮಿ ಕೂಡ ಒಂದಾಗಿದೆ.
ಸಾಮಾನ್ಯವಾಗಿ ಜನರು ಈ ದಿನ ಉಪವಾಸ ಮಾಡುತ್ತಾರೆ. ಮನೆಯಲ್ಲಿ ಹಾವಿನ ವಿಗ್ರಹಗಳನ್ನು ಮಾಡುತ್ತಾರೆ. ಇದು ಮಾನವರು ಮತ್ತು ಪ್ರಕೃತಿಯ ನಡುವಿನ ಸಾಮರಸ್ಯವನ್ನು ಸಂಕೇತಿಸುತ್ತದೆ.

ನಾಗ ಪಂಚಮಿಯನ್ನು ಶ್ರಾವಣ ಶುಕ್ಲದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ಬಾರಿ ಈ ಹಬ್ಬ ಆಗಸ್ಟ್ 21ರಂದು ಆಚರಿಸಲಾಗುತ್ತದೆ. ಹಿಂದೂ ಪುರಾಣಗಳಲ್ಲಿ ಸರ್ಪಗಳನ್ನು ದೇವರೆಂದು ಪೂಜಿಸಲಾಗುತ್ತದೆ.
ನಾಗ ಪಂಚಮಿಯಂದು ನಾಗದೇವತೆಯೊಂದಿಗೆ ಶಿವನನ್ನು ಪೂಜಿಸುವುದರಿಂದರ ಜೀವನದಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಸೋಮವಾರದಂದು ಪಂಚಮಿ ಬರುವ ಕಾರಣ ಇದರ ಮಹತ್ವ ಹೆಚ್ಚಿದೆ. ಏಕೆಂದರೆ ಈ ದಿನ ಶ್ರಾವಣ ಸೋಮವಾರವಾಗಿದೆ. ಅಂದರೆ ಈ ದಿನ ಶಿವನನ್ನು ಪೂಜಿಸಲಾಗುತ್ತದೆ. ಇದೇ ದಿನ ನಾಗರ ಪಂಚಮಿ ಕೂಡ ಇರುವುದರಿಂದ ಇಬ್ಬರನ್ನೂ ಒಂದೇ ದಿನ ಪೂಜಿಸುವ ಮೂಲಕ ಭಕ್ತರು ಇಬ್ಬರ ಆಶೀರ್ವಾದವನ್ನು ಪಡೆಯುತ್ತಾರೆ.
ನಾಗ ಪಂಚಮಿಯಂದು ಜನರು ಹಾವಿನ ಮೂರ್ತಿಯನ್ನು ಪೂಜಿಸುತ್ತಾರೆ. ನಮಗೆ ಮತ್ತು ನಮ್ಮ ಕುಟುಂಬಕ್ಕೆ ನೋವುಂಟು ಮಾಡದಂತೆ ಮತ್ತು ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಆಶೀರ್ವದಿಸುವಂತೆ ಪ್ರಾರ್ಥಿಸುತ್ತಾರೆ. ಈ ಬಾರಿಯ ಪಂಚಮಿ ಆಗಸ್ಟ್ 21 ರಂದು 12.21 ನಿಮಿಷಕ್ಕೆ ಆರಂಭವಾಗಲಿದೆ. ಹಾಗಾದರೆ ಈ ವಿಶೇಷ ನಾಗ ಪಂಚಮಿ ದಿನ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳ ಬಗ್ಗೆ ತಿಳಿಯೋಣ.

ನಾಗ ಪಂಚಮಿಯಂದು ಮಾಡಿ
*ದೇವಾಲಯಗಳಲ್ಲಿ ಇರುವ ಮಣ್ಣಿನ ನಾಗನ ಮೂರ್ತಿ ಅಥವಾ ಲೋಹದ ಹಾವಿಗೆ ಹಾಲು, ಹೂವುಗಳು, ಹಣ್ಣುಗಳನ್ನು ಅರ್ಪಿಸಿ.
*ನಿಮ್ಮ ಜೀವನದಿಂದ ತೊಂದರೆಗಳನ್ನು ತೊಡೆದುಹಾಕಲು ದೇವರನ್ನು ಪೂರ್ಣ ಹೃದಯದಿಂದ ಆರಾಧಿಸಿ.
*ಶಿವ ಮತ್ತು ನಾಗದೇವರ ಆಶೀರ್ವಾದ ಪಡೆಯಲು ನಾಗ ಪಂಚಮಿಯಂದು ರುದ್ರಾಭಿಷೇಕವನ್ನು ಮಾಡಿ.
*ಈ ದಿನದ ಉಪವಾಸ ಮಾಡುವುದರಿಂದ ಶಿವನ ಆಶೀರ್ವಾದವನ್ನು ಪಡೆಯಬಹುದು.
*ದೇವಾಲಯಗಳಿಗೆ ಮುಂಜಾನೆ ಭೇಟಿ ನೀಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ ಮತ್ತು ಸಂಜೆ ಅಲ್ಲ. ಅಲ್ಲದೆ, ಇಡೀ ದಿನ ನಾಗ್ ಪಂಚಮಿ ಮಂತ್ರಗಳನ್ನು ಪಠಿಸಿ.
ನಾಗ ಪಂಚಮಿಯಂದು ಮಾಡಬೇಡಿ
*ಈ ವಿಶೇಷ ದಿನದಂದು, ಕಬ್ಬಿಣದಿಂದ ಮಾಡಿದ ಯಾವುದೇ ಅಡುಗೆ ಸಲಕರಣೆಗಳನ್ನು ಬಳಸುವುದನ್ನು ತಡೆಯಬೇಕು.
*ನಾಗಪಂಚಮಿಯಂದು ರೈತರು ಮತ್ತು ಇತರ ಕೃಷಿ ಕಾರ್ಮಿಕರು ಹೊಲ ಉಳುಮೆ ಮಾಡುವುದನ್ನು ತಪ್ಪಿಸುತ್ತಾರೆ, ಏಕೆಂದರೆ ಇದು ಹಾವುಗಳ ಜೀವಕ್ಕೆ ಅಪಾಯಕಾರಿ. ಭೂಮಿಯನ್ನು ಅಗೆಯುವುದನ್ನು ತಪ್ಪಿಸುತ್ತಾರೆ
*ಅಲ್ಲದೆ, ಸೂಜಿಗಳು ಮತ್ತು ಇತರ ಯಾವುದೇ ಚೂಪಾದ ವಸ್ತುಗಳನ್ನು ಬಳಕೆಯನ್ನು ತಪ್ಪಿಸಿ.
*ಹಸಿರು ಎಲೆಗಳ ತರಕಾರಿಗಳ ಸೇವನೆಯನ್ನು ತಪ್ಪಿಸಿ. ನೀವು ಸೇವಿಸುವ ಅಗತ್ಯವಿದ್ದರೆ, ಅವುಗಳನ್ನು ಕತ್ತರಿಸದೆಯೇ ಬೇಯಿಸಿ ತಿನ್ನುವುದು ಉತ್ತಮ.
*ಈ ದಿನ ಮರಗಳು ಮತ್ತು ಗಿಡಗಳನ್ನು ಕತ್ತರಿಸುವುದನ್ನು ತಪ್ಪಿಸಿ.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications