Krishna Janmashtami 2024: ಕೃಷ್ಣ ಜನ್ಮಾಷ್ಟಮಿ ದಿನಾಂಕ, ಶುಭ ಸಮಯ, ಪೂಜಿಸುವ ವಿಧಾನಗಳು ಇಲ್ಲಿದೆ..
ಭಾರತದಲ್ಲಿ ಶ್ರೀಕೃಷ್ಣನ ಜನ್ಮದಿನ ಬಹಳ ಪ್ರಸಿದ್ಧವಾದ ಹಬ್ಬವಾಗಿದೆ. ವಿಷ್ಣುವಿನ 9ನೇ ಅವತಾರ ಕೃಷ್ಣಾವತಾರವಾಗಿದೆ ಎಂದು ಹಿಂದೂ ಪುರಾಣಗಳು ಹೇಳುತ್ತವೆ. ವಿಷ್ಣು ಅಧರ್ಮವನ್ನು ನಾಶಪಡಿಸಲು ಮತ್ತು ಧರ್ಮವನ್ನು ಸ್ಥಾಪಿಸಲು ಕೃಷ್ಣನ ಅವತಾರವನ್ನು ತೆಗೆದುಕೊಂಡನೆಂದು ಹೇಳಲಾಗುತ್ತದೆ. ಶ್ರೀಕೃಷ್ಣ ಅವನಿ ಮಾಸ, ರೋಹಿಣಿ ನಕ್ಷತ್ರ, ಅಷ್ಟಮಿ ತಿಥಿಯಂದು ಅವತರಿಸಿದನೆಂದು ಪುರಾಣಗಳು ಹೇಳುತ್ತವೆ. ಈ ಹಬ್ಬವನ್ನು ಸಾಮಾನ್ಯವಾಗಿ ಪ್ರತಿ ವರ್ಷ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಆಚರಿಸಲಾಗುತ್ತದೆ.
ಕೃಷ್ಣ ಜಯಂತಿ 2024 ಯಾವಾಗ?
ಈ ವರ್ಷ ಕೃಷ್ಣ ಜಯಂತಿ ಆಗಸ್ಟ್ 26 ಸೋಮವಾರದಂದು ಬರುತ್ತದೆ. ಅಷ್ಟಮಿ ತಿಥಿಯು ಆಗಸ್ಟ್ 26 ಬೆಳಿಗ್ಗೆ 09.13 ಕ್ಕೆ ಪ್ರಾರಂಭವಾಗಿ ಆಗಸ್ಟ್ 27 ರಂದು ಬೆಳಿಗ್ಗೆ 07.30ಕ್ಕೆ ಕೊನೆಗೊಳ್ಳುತ್ತದೆ.

ರೋಹಿಣಿ ನಕ್ಷತ್ರ ಆಗಸ್ಟ್ 26ರಂದು ರಾತ್ರಿ 09.41ಕ್ಕೆ ಕಾಣಿಸಲು ಪ್ರಾರಂಭವಾಗುತ್ತದೆ. ಆಗಸ್ಟ್ 27ರಂದು ರಾತ್ರಿ 08.54ರವರೆಗೆ ರೋಹಿಣಿ ನಕ್ಷತ್ರ ಕಾಣಿಸುತ್ತದೆ. ಅಷ್ಟಮಿ ತಿಥಿ ಮತ್ತು ರೋಹಿಣಿ ನಕ್ಷತ್ರ ಒಟ್ಟಿಗೆ ಬರುವ ರಾತ್ರಿಯನ್ನು ಶ್ರೀಕೃಷ್ಣನ ಅವತಾರ ದಿನವೆಂದು ಪರಿಗಣಿಸಲಾಗಿರುವುದರಿಂದ ಆಗಸ್ಟ್ 26ರ ಸಂಜೆ ಕೃಷ್ಣ ಜಯಂತಿಯ ಪೂಜೆಯನ್ನು ಮಾಡಲಾಗುತ್ತದೆ.
ಪೂಜಾ ವಿಧಾನಗಳು
ಈ ವರ್ಷ ಕೃತಿಕಾ ಜೊತೆಗೆ ಕೃಷ್ಣ ಜಯಂತಿಯೂ ಬರುತ್ತದೆ. ಆದ್ದರಿಂದ ಮುರುಗನನ್ನು ಪೂಜಿಸಿದರೆ ನವವಿವಾಹಿತರಿಗೆ ಮಗು ಜನಿಸುತ್ತದೆ ಎಂದು ನಂಬಲಾಗುತ್ತದೆ. ಅಲ್ಲದೆ ಮನೆಯಲ್ಲಿ ಕೃಷ್ಣನ ವಿಗ್ರಹ ಹಾಗೂ ಫೋಟೋಗಳಿಗೆ ಈ ದಿನ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ಮನೆಯಲ್ಲಿ ಕೃಷ್ಣನ ವಿಗ್ರಹ ಅಥವಾ ಚಿತ್ರಣವನ್ನು ಇಟ್ಟು ಹೂವುಗಳು, ಹೂಮಾಲೆಗಳಿಂದ ಅಲಂಕರಿಸಿ ದೀಪಗಳನ್ನು ಬೆಳಗಿಸಿ ಪೂಜಿಸುವುದು ವಾಡಿಕೆ. ಅಲ್ಲದೆ ಈ ದಿನ ಬಗೆ ಬಗೆಯ ಸಿಹಿ ತಿನಿಸುಗಳನ್ನು ತಯಾರಿಸಿ ಹಬ್ಬವನ್ನು ಆಚರಿಸಲಾಗುತ್ತದೆ.
ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಎಲ್ಲಾ ಚಿಂತೆಗಳನ್ನು ತೊಡೆದುಹಾಕುತ್ತದೆ ಎಂಬ ನಂಬಿಕೆ ಇದೆ. ಮನೆಯಲ್ಲಿರುವ ಕೃಷ್ಣನ ಮೂರ್ತಿಯನ್ನು ಅಲಂಕರಿಸುವುದು, ಮಕ್ಕಳನ್ನು ಕೃಷ್ಣನಂತೆ ಅಲಂಕರಿಸಿಸುವುದು, ಜೊತೆಗೆ ಕೃಷ್ಣನಿಗೆ ಅತ್ಯಂತ ಇಷ್ಟವಾದ ಕಲಾಕಾರಗಳನ್ನು ರಚಿಸಿ ಪೂಜಿಸುವುದು ಹಬ್ಬದ ಸಡಗರವಾಗಿದೆ. ಅಲ್ಲದೆ ಕೃಷ್ಣನ ಪಾದಗಳನ್ನು ಮನೆಯಲ್ಲೆಲ್ಲ ಇಟ್ಟು ಕೃಷ್ಣನನ್ನು ಪೂಜಿಸಲಾಗುತ್ತದೆ. ಈ ದಿನ ಶ್ರೀಕೃಷ್ಣನಿಗೆ ಇಷ್ಟವಾದ ಬೆಣ್ಣೆಯನ್ನು ತಯಾರಿಸಿ ಪೂಜಿಸುವುದು ವಿಶೇಷವಾಗಿದೆ.

ನೈವೇದ್ಯ ಏನು ಮಾಡಬೇಕು?
ಕೃಷ್ಣನಿಗೆ ಪ್ರಿಯವಾದ ಅವಲಕ್ಕಿ, ಹಾಲು, ಬೆಣ್ಣೆ, ಹಣ್ಣುಗಳು, ಸಿಹಿತಿಂಡಿಗಳು ಇತ್ಯಾದಿಗಳನ್ನು ನೈವೇದ್ಯಕ್ಕಾಗಿ ಇಡುವುದು ರೂಢಿ. ಇದರ ಹೊರತಾಗಿ ಬೇರೆ ಸಿಹಿ ತಿಂಡಿಗಳನ್ನು ತಯಾರಿಸಿ ಮನೆಯಲ್ಲಿ ಹಾಗೂ ದೇವಸ್ಥಾನಗಳಲ್ಲಿ ಕೃಷ್ಣನನ್ನು ಪೂಜಿಸಲಾಗುತ್ತದೆ.
ಪ್ರಯೋಜನಗಳು:-
ಕೃಷ್ಣನನ್ನು ಸಂತೋಷ ಮತ್ತು ಪ್ರೀತಿಯ ದೇವರು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಆತನನ್ನು ಪೂಜಿಸಿದರೆ ಜೀವನದುದ್ದಕ್ಕೂ ನೆಮ್ಮದಿಯಿಂದ ಇರುವ ನಂಬಿಕೆ ಇದೆ. ಕೃಷ್ಣ ಜಯಂತಿಯಂದು ಶ್ರೀಕೃಷ್ಣನನ್ನು ಮನಃಪೂರ್ವಕವಾಗಿ ಪೂಜಿಸುವುದರಿಂದ ಯಶಸ್ಸು, ಎಲ್ಲಾ ರೀತಿಯ ಲಾಭಗಳು ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಮಕ್ಕಳಿಲ್ಲದವರು ಕೃಷ್ಣನನ್ನು ಪೂಜಿಸಿದರೆ ಅವರಿಗೆ ಸಂತಾನ ಪ್ರಾಪ್ತಿ ಖಂಡಿತ ಎಂಬ ನಂಬಿಕೆ ಇದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications