ಸರಸ್ವತಿ ಹಬ್ಬ ಹಾಗೂ ವಸಂತ ಪಂಚಮಿ

ಕನ್ನಡ ನಾಡಿನಲ್ಲಿ ಈಗ ಒಣ ಹವೆ. ಬಿಸಿಲು ತನ್ನ ಬಿಚ್ಚುಗತ್ತಿಯನ್ನು ಒರೆಯಿಂದ ತೆಗೆಯಲು ತವಕಿಸುತ್ತಿರುವ ಕಾಲ. ಆದರೆ, ಅಲ್ಲಲ್ಲಿ ಚಳಿ ಇನ್ನೂ ಬಿಟ್ಟಿಲ್ಲ. ಹತ್ತರಲ್ಲಿ ಒಬ್ಬರಾದರೂ ಸ್ವೆಟರ್ ಹಾಕಿಕೊಂಡು ಅಡ್ಡಾಡುವ ಚಿತ್ರ ಕಣ್ಣಿಗೆ ಬೀಳುವುದು. ಅಂದಹಾಗೆ ಹಳೇ ಬೇರು, ಹೊಸ ಚಿಗುರನ್ನು ಚಿವುಟಿ ಮೂಸಿ ನೋಡುವ ಸಮಯ ಕೂಡಾ. ರಸ್ತೆ ಅಗಲೀಕರಣ, ಮೆಟ್ರೊ ರೈಲಿಗೆ ದಾರಿ ಮಾಡುವುದಕ್ಕೆ ಊರಿನ ನಾನಾ ಭಾಗಗಳಲ್ಲಿ ನೆಲಕ್ಕುರುಳಿದ ಹೆಮ್ಮರಗಳ ಹೆಣವನ್ನು ದಾಟಿ ಆಚೆ ಸಾಗುವ ಕಾಲಘಟ್ಟ.
ಕಂದಮ್ಮಗಳಿಗೆ ಅಕ್ಷರ ಕಲಿಸಲು ಆರಂಭಿಸುವುದಕ್ಕೆ ಇವತ್ತು ಪ್ರಶಸ್ತವಾದ ಮುಹೂರ್ತ. ಗಾಳಿಪಟ ಹಾರಿಸುವುದಕ್ಕೆ ಚೆಂದದ ವಾತಾವರಣ. ಪಿತೃಗಳಿಗೆ ತರ್ಪಣ ಕೊಡುವುದಕ್ಕೆ ಶ್ರೇಷ್ಠವಾದ ದಿನ. ಈ ಎಲ್ಲವೂ ನಿಮ್ಮ ಮನ ಮನೆಯಂಗಳದಲ್ಲಿ, ಬಾನಂಗಳದಲ್ಲಿ, ಹಿತ್ತಲಲ್ಲಿ, ನದಿ ತೀರದಲ್ಲಿ ಸಾಂಗವಾಗಲಿ.












Click it and Unblock the Notifications