Get Updates
Get notified of breaking news, exclusive insights, and must-see stories!

ವೈಕುಂಠ ಏಕಾದಶಿ, ಸ್ವರ್ಗದ ಬಾಗಿಲು ತೆರೆಯುತ್ತಿದೆ

Vaikuntha Ekadashi, Free Passpost to Heaven!
ಹಿಂದೂ ಧರ್ಮದ ಅತ್ಯಂತ ಮನಮೋಹಕ ಕಲ್ಪನೆಗಳಲ್ಲಿ ಕಳಶಪ್ರಾಯವಾದದ್ದು ಸ್ವರ್ಗದ ಕಲ್ಪನೆ. ಹಿಂದೂ ಧರ್ಮ ಮಾತ್ರವಲ್ಲ. ಇತರ ಎಲ್ಲ ಧರ್ಮಗಳೂ ಕೂಡ ಸಹಜವಾಗಿ ತಮ್ಮದೇ ಆದ ಸ್ವರ್ಗದ ಕಲ್ಪನೆಗಳನ್ನು ಇಟ್ಟುಕೊಂಡಿವೆ. ಏಕೆಂದರೆ, ಇಲ್ಲಿಗೆ ಬಂದಿರುವ ಎಲ್ಲರೂ ಅಲ್ಲಿಗೆ ಹೋಗಬೇಕು. ಹೋದರೆ, ಸ್ವರ್ಗಕ್ಕೇ ಹೋಗಬೇಕು.

ಸ್ವರ್ಗದಲ್ಲಿ ನೋವುಗಳೇ ಇರುವುದಿಲ್ಲವಂತೆ. ಮೇಲು ಕೀಳು ಭೇದಭಾವ ಇಲ್ಲವಂತೆ. ಹಾಗಾಗಿ, ರಾಗ ದ್ವೇಷ ಮದ ಮತ್ಸರಗಳನ್ನು ಮೀರಿದ ಅಪ್ಯಾಯಮಾನವಾದ ಹೂವಿನ ತೋಟವೇ ಸ್ವರ್ಗ ಎಂಬ ಭಾವನೆ ಮನುಜಮತಬಾಂಧವರಲ್ಲಿ ಭದ್ರವಾಗಿದೆ. ಸೊಗಸಾದದ್ದನ್ನು ಮತ್ತು ಹಿತವಾದದ್ದನ್ನು ಏಕಕಾಲಕ್ಕೆ ದಯಪಾಲಿಸುವ ಸಮೃದ್ಧ ನೆಲ ಸ್ವರ್ಗಕ್ಕೆ ತೆರಳಲು ಎಲ್ಲರೂ ಬಯಸುವುದು ತೀರ ಸ್ವಾಭಾವಿಕವೇ ಆಗಿದೆ.

ಈ ಇಳೆಯ ಮೇಲೆ ಜಾತಿ, ಉಪಜಾತಿ, ಮತ, ಪಾಪ-ಪುಣ್ಯದ ಕಲ್ಪನೆಗಳು ಲೆಕ್ಕವಿಡಲಾರದಷ್ಟು ಸಂಖ್ಯೆಯಲ್ಲಿವೆ. ವೈಯಕ್ತಿಕವಾಗಿ ನಿಮ್ಮ ನಂಬಿಕೆಗಳ ನೆಲೆ ಏನೇ ಇರಲಿ, ಶ್ರದ್ದೆ, ನಿಷ್ಠೆ, ಭಕ್ತಿಯಿಂದ ನಾಳೆ (ಜ.7, ಬುಧವಾರ) ಉಪವಾಸ ವ್ರತ ಮಾಡಬೇಕು. ನಾಳೆ ದಿವಸ ನೀವು ಕೈಗೊಳ್ಳುವ ಈ ಪವಿತ್ರ ಉಪವಾಸದಿಂದ ಲಭ್ಯವಾಗುವ ಪುಣ್ಯ ಇನ್ನುಳಿದ 23 ಏಕಾದಶಿ ವ್ರತಾಚರಣೆಗೆ ಸಮ ಎನ್ನುವ ನಂಬಿಕೆಯೂ ಇದೆ. ಹಿನ್ನೆಲೆಗಳು ಇಂತಿರಲು, ನೀವೂ ಸ್ವರ್ಗದ ಅಭಿಲಾಷಿಗಳಾಗಿದ್ದರೆ ಸ್ವರ್ಗದ ಬಾಗಿಲು ತಟ್ಟಲು ಇದು ಪ್ರಶಸ್ತವಾದ ಸಕಾಲ. ವೈಕುಂಠ ಏಕಾದಶಿ ದಿನ ಉಪವಾಸ ವ್ರತ ಆಚರಿಸಿದರೆ ಸತ್ತಮೇಲೆ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆಂಬ ನಂಬಿಕೆಯಿದೆ.

ಒಂದಲ್ಲ ಒಂದು ದಿವಸ ಸ್ವರ್ಗದಲ್ಲಿ ಲೀನವಾಗುವುದಕ್ಕೆ ಅವಕಾಶ ಕಲ್ಪಿಸಿಕೊಡುವ ದೈವದತ್ತ ಕಾಲ ಈಗ ಮತ್ತೊಮ್ಮೆ ಮನೆಬಾಗಿಲಿಗೆ ಬಂದಿದೆ. ಹಿಂದೂ ಪಂಚಾಗದ ಪ್ರಕಾರ ಪುಷ್ಯ ಮಾಸ, ಮಾರ್ಗಶಿರ ಶುಕ್ಲ ಪಕ್ಷದ ಏಕಾದಶಿ ದಿನವನ್ನು "ವೈಕುಂಠ ಏಕಾದಶಿ" ಎಂದು ವೈಷ್ಣವ ಅನುಯಾಯಿಗಳು ಆಚರಿಸುವುದು ತಮಗೆಲ್ಲ ತಿಳಿದಿದೆ. ಅವತ್ತು ಉಪವಾಸ ಮಾಡಿ, ಶ್ರೀಮನ್ನಾರಾಯಣನ ದರ್ಶನ ಪಡೆದರೆ ಸ್ವರ್ಗದ ಆಕಾಂಕ್ಷೆ ಇಟ್ಟುಕೊಂಡಿರುವ ಯಾರು ಬೇಕಾದರೂ ಅಲ್ಲಿಗೆ ತೆರಳಬಹುದಾಗಿದೆ.

ಈ ಸಂದರ್ಭದಲ್ಲಿ ದೇಶದೆಲ್ಲೆಡೆ ನಾಳೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತದೆ. ಉದಾಹರಣೆಗೆ, ಬೆಂಗಳೂರಿನ ದೇವಗಿರಿ, ಜೆ ಪಿ ನಗರದ ವೆಂಕಟೇಶ್ವರ ದೇವಾಲಯ, ಶ್ರೀನಗರದ ವಿಷ್ಮು ಕುಟೀರ, ಮಹಾಲಕ್ಷ್ಮಿ ಬಡಾವಣೆ, ಕೋಟೆ, ಇಸ್ಕಾನ್, ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ಮತ್ತು ನರಸಿಂಹ ಸ್ವಾಮಿ, ಶ್ರೀರಂಗ ಪಟ್ಟಣದ ರಂಗನಾಥ ಸ್ವಾಮಿ, ಉಡುಪಿಯ ಶ್ರೀಕೃಷ್ಣ, ಚಿಕ್ಕ ತಿರುಪತಿ ಮುಂತಾದ ಹಲವಾರು ದೇವಾಲಯಗಳಲ್ಲಿ ಬೆಳಗಿನ ಜಾವದಿಂದಲೇ ಪೂಜೆ, ವೈಕುಂಠ ದರ್ಶನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಜನವರಿ 14 ಬುಧವಾರ ಉತ್ತರಾಯಣ ಪುಣ್ಯಕಾಲ ಆರಂಭವಾಗುತ್ತದೆ. ಈಗ ನಾವೆಲ್ಲ ದಕ್ಷಿಣಾಯಣ ಪುಣ್ಯಕಾಲದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಪುರಾಣ ಪ್ರತೀತಿಗಳು ಹೇಳುವ ಪ್ರಕಾರ ಉಪವಾಸ ವ್ರತ ಆಚರಿಸಿ ದಕ್ಷಿಣಾಯಣದಲ್ಲಿ ಭೂಲೋಕದ ವ್ಯಾಪಾರ ಮುಗಿಸಿದರೆ ಸ್ವರ್ಗ ತಪ್ಪದೆ ಮತ್ತು ಆದಷ್ಟು ಶೀರ್ಘ ಗತಿಯಲ್ಲಿ ಸಿಗುತ್ತದೆ. ಆಕಸ್ಮಾತ್ ಅಫ್ಜಲ್ ಗುರು ಮತ್ತು ಕಸಬ ಕೂಡ ಇವತ್ತು ಉಪವಾಸ ಮಾಡಿ, ನಾರಾಯಣ ದರ್ಶನಭಾಗ್ಯ ಪಡೆದರೆ ಅವರಿಗೂ ಸ್ವರ್ಗ ದಕ್ಕುವುದರಲ್ಲಿ ಸಂಶಯವಿರುವುದಿಲ್ಲ.

ಏಕಾದಶಿ ತಿನಿಸುಗಳು
ಸಾಬೂದಾಣಿ ಖಿಚಡಿ : ಇದು ಏಕಾದಶಿ ಪರಿಹಾರ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+