ವೈಕುಂಠ ಏಕಾದಶಿ, ಸ್ವರ್ಗದ ಬಾಗಿಲು ತೆರೆಯುತ್ತಿದೆ

ಸ್ವರ್ಗದಲ್ಲಿ ನೋವುಗಳೇ ಇರುವುದಿಲ್ಲವಂತೆ. ಮೇಲು ಕೀಳು ಭೇದಭಾವ ಇಲ್ಲವಂತೆ. ಹಾಗಾಗಿ, ರಾಗ ದ್ವೇಷ ಮದ ಮತ್ಸರಗಳನ್ನು ಮೀರಿದ ಅಪ್ಯಾಯಮಾನವಾದ ಹೂವಿನ ತೋಟವೇ ಸ್ವರ್ಗ ಎಂಬ ಭಾವನೆ ಮನುಜಮತಬಾಂಧವರಲ್ಲಿ ಭದ್ರವಾಗಿದೆ. ಸೊಗಸಾದದ್ದನ್ನು ಮತ್ತು ಹಿತವಾದದ್ದನ್ನು ಏಕಕಾಲಕ್ಕೆ ದಯಪಾಲಿಸುವ ಸಮೃದ್ಧ ನೆಲ ಸ್ವರ್ಗಕ್ಕೆ ತೆರಳಲು ಎಲ್ಲರೂ ಬಯಸುವುದು ತೀರ ಸ್ವಾಭಾವಿಕವೇ ಆಗಿದೆ.
ಈ ಇಳೆಯ ಮೇಲೆ ಜಾತಿ, ಉಪಜಾತಿ, ಮತ, ಪಾಪ-ಪುಣ್ಯದ ಕಲ್ಪನೆಗಳು ಲೆಕ್ಕವಿಡಲಾರದಷ್ಟು ಸಂಖ್ಯೆಯಲ್ಲಿವೆ. ವೈಯಕ್ತಿಕವಾಗಿ ನಿಮ್ಮ ನಂಬಿಕೆಗಳ ನೆಲೆ ಏನೇ ಇರಲಿ, ಶ್ರದ್ದೆ, ನಿಷ್ಠೆ, ಭಕ್ತಿಯಿಂದ ನಾಳೆ (ಜ.7, ಬುಧವಾರ) ಉಪವಾಸ ವ್ರತ ಮಾಡಬೇಕು. ನಾಳೆ ದಿವಸ ನೀವು ಕೈಗೊಳ್ಳುವ ಈ ಪವಿತ್ರ ಉಪವಾಸದಿಂದ ಲಭ್ಯವಾಗುವ ಪುಣ್ಯ ಇನ್ನುಳಿದ 23 ಏಕಾದಶಿ ವ್ರತಾಚರಣೆಗೆ ಸಮ ಎನ್ನುವ ನಂಬಿಕೆಯೂ ಇದೆ. ಹಿನ್ನೆಲೆಗಳು ಇಂತಿರಲು, ನೀವೂ ಸ್ವರ್ಗದ ಅಭಿಲಾಷಿಗಳಾಗಿದ್ದರೆ ಸ್ವರ್ಗದ ಬಾಗಿಲು ತಟ್ಟಲು ಇದು ಪ್ರಶಸ್ತವಾದ ಸಕಾಲ. ವೈಕುಂಠ ಏಕಾದಶಿ ದಿನ ಉಪವಾಸ ವ್ರತ ಆಚರಿಸಿದರೆ ಸತ್ತಮೇಲೆ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆಂಬ ನಂಬಿಕೆಯಿದೆ.
ಒಂದಲ್ಲ ಒಂದು ದಿವಸ ಸ್ವರ್ಗದಲ್ಲಿ ಲೀನವಾಗುವುದಕ್ಕೆ ಅವಕಾಶ ಕಲ್ಪಿಸಿಕೊಡುವ ದೈವದತ್ತ ಕಾಲ ಈಗ ಮತ್ತೊಮ್ಮೆ ಮನೆಬಾಗಿಲಿಗೆ ಬಂದಿದೆ. ಹಿಂದೂ ಪಂಚಾಗದ ಪ್ರಕಾರ ಪುಷ್ಯ ಮಾಸ, ಮಾರ್ಗಶಿರ ಶುಕ್ಲ ಪಕ್ಷದ ಏಕಾದಶಿ ದಿನವನ್ನು "ವೈಕುಂಠ ಏಕಾದಶಿ" ಎಂದು ವೈಷ್ಣವ ಅನುಯಾಯಿಗಳು ಆಚರಿಸುವುದು ತಮಗೆಲ್ಲ ತಿಳಿದಿದೆ. ಅವತ್ತು ಉಪವಾಸ ಮಾಡಿ, ಶ್ರೀಮನ್ನಾರಾಯಣನ ದರ್ಶನ ಪಡೆದರೆ ಸ್ವರ್ಗದ ಆಕಾಂಕ್ಷೆ ಇಟ್ಟುಕೊಂಡಿರುವ ಯಾರು ಬೇಕಾದರೂ ಅಲ್ಲಿಗೆ ತೆರಳಬಹುದಾಗಿದೆ.
ಈ ಸಂದರ್ಭದಲ್ಲಿ ದೇಶದೆಲ್ಲೆಡೆ ನಾಳೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತದೆ. ಉದಾಹರಣೆಗೆ, ಬೆಂಗಳೂರಿನ ದೇವಗಿರಿ, ಜೆ ಪಿ ನಗರದ ವೆಂಕಟೇಶ್ವರ ದೇವಾಲಯ, ಶ್ರೀನಗರದ ವಿಷ್ಮು ಕುಟೀರ, ಮಹಾಲಕ್ಷ್ಮಿ ಬಡಾವಣೆ, ಕೋಟೆ, ಇಸ್ಕಾನ್, ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ಮತ್ತು ನರಸಿಂಹ ಸ್ವಾಮಿ, ಶ್ರೀರಂಗ ಪಟ್ಟಣದ ರಂಗನಾಥ ಸ್ವಾಮಿ, ಉಡುಪಿಯ ಶ್ರೀಕೃಷ್ಣ, ಚಿಕ್ಕ ತಿರುಪತಿ ಮುಂತಾದ ಹಲವಾರು ದೇವಾಲಯಗಳಲ್ಲಿ ಬೆಳಗಿನ ಜಾವದಿಂದಲೇ ಪೂಜೆ, ವೈಕುಂಠ ದರ್ಶನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜನವರಿ 14 ಬುಧವಾರ ಉತ್ತರಾಯಣ ಪುಣ್ಯಕಾಲ ಆರಂಭವಾಗುತ್ತದೆ. ಈಗ ನಾವೆಲ್ಲ ದಕ್ಷಿಣಾಯಣ ಪುಣ್ಯಕಾಲದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಪುರಾಣ ಪ್ರತೀತಿಗಳು ಹೇಳುವ ಪ್ರಕಾರ ಉಪವಾಸ ವ್ರತ ಆಚರಿಸಿ ದಕ್ಷಿಣಾಯಣದಲ್ಲಿ ಭೂಲೋಕದ ವ್ಯಾಪಾರ ಮುಗಿಸಿದರೆ ಸ್ವರ್ಗ ತಪ್ಪದೆ ಮತ್ತು ಆದಷ್ಟು ಶೀರ್ಘ ಗತಿಯಲ್ಲಿ ಸಿಗುತ್ತದೆ. ಆಕಸ್ಮಾತ್ ಅಫ್ಜಲ್ ಗುರು ಮತ್ತು ಕಸಬ ಕೂಡ ಇವತ್ತು ಉಪವಾಸ ಮಾಡಿ, ನಾರಾಯಣ ದರ್ಶನಭಾಗ್ಯ ಪಡೆದರೆ ಅವರಿಗೂ ಸ್ವರ್ಗ ದಕ್ಕುವುದರಲ್ಲಿ ಸಂಶಯವಿರುವುದಿಲ್ಲ.
ಏಕಾದಶಿ ತಿನಿಸುಗಳು
ಸಾಬೂದಾಣಿ ಖಿಚಡಿ : ಇದು ಏಕಾದಶಿ ಪರಿಹಾರ
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications