ದೀಪಾವಳಿ ಪೂಜಾ ಮುಹೂರ್ತ ಹೀಗಿವೆ, ನೋಟ್ ಮಾಡಿಕೊಳ್ಳಿ
ದೀಪಾವಳಿ ಎಂದತಕ್ಷಣ ಮನಸುಗಳು ಬೆಳಗಲು ಪ್ರಾರಂಭಿಸುತ್ತವೆ. ಎಲ್ಲರ ಮನೆ ಮುಂದೆ ಬೆಳಗಲು ಶಿವನಬುಟ್ಟಿಗಳು ಸಜ್ಜಾಗಿವೆ. ಹಾರಾಡಲು ಆಕಾಶಬುಟ್ಟಿಗಳು ಕಾಯುತ್ತಿವೆ. ಮನೆ ಮನೆಗಳೆಲ್ಲವೂ ಈ ಸಮಯದಲ್ಲಿ ದೀಪಗಳ ಬೆಳಕಿನಲ್ಲಿ ಮಿನುಗಲಿವೆ. ಮನೆಯಂಗಳದಲ್ಲಿ ಪಟಾಕಿ ಸಿಡಿಸಲು ಚಿಣ್ಣರು ಕಾತುರದಿಂದಿದ್ದಾರೆ.
ಬೋನಸ್ ಪಡೆದುಕೊಂಡು ಕಾರ್ಮಿಕ ವರ್ಗ ಸಂಭ್ರಮಿಸಲಿದೆ. ಹೊಸ ಬಟ್ಟೆ ಪಡೆದುಕೊಂಡವರು, ಹೊಸ ಸಿಹಿತಿನಿಸುಗಳ ಬಾಕ್ಸ್ ಗಳನ್ನು ಪಡೆದುಕೊಂಡವರ ಮುಖದಲ್ಲಿ ದೀಪಾವಳಿ ಹಬ್ಬದ ಮುಗುಳ್ನಗೆ ಇದ್ದಬದ್ದ ಕಷ್ಟನಷ್ಟಗಳನ್ನು ಮರೆಸುತ್ತಿದೆ. ಇದೇ ನಮ್ಮ ಹಿಂದೂ ಧರ್ಮದ ಹಬ್ಬಗಳ ಮಹಿಮೆ ಎಂದರೆ ತಪ್ಪಾಗಲಿಕ್ಕಿಲ್ಲ.
ಇನ್ನು ದೀಪಾವಳಿಯೊಂದಿಗೆ ಕಾರ್ತಿಕ ಮಾಸವು ಆರಂಭವಾಗುವುದರಿಂದ ಇಡೀ ತಿಂಗಳಾಂತ್ಯದವರೆಗೂ ಎಲ್ಲೆಡೆಗೆ ದೀಪಗಳ ಅಲಂಕಾರ ನೋಡುವುದೇ ಚೆಂದ. ನಾಡಿನ ಎಲ್ಲ ದೇವಾಲಯಗಳಲ್ಲಿ ಕಾರ್ತಿಕ ಪೂಜೆ, ದೀಪೋತ್ಸವ, ಕಾರ್ತಿಕೋತ್ಸವ ಸೇರಿದಂತೆ ಬರೀ ಬೆಳಕಿನ ಹಬ್ಬವೇ ತಿಂಗಳುಗಟ್ಟಲೇ ಇರುತ್ತದೆ. ಜೊತೆಗೆ ಮನೆದೇವರಿಗೆ ಕಾರ್ತಿಕ ಹಚ್ಚಲು ದೈವಭಕ್ತರು ಸಾಲುಗಟ್ಟಿ ನಿಲ್ಲುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಾದರೆ, ಸಾವಿರುಗಟ್ಟಲೇ ಬೆಳಗುತ್ತಿರುವ ದೀಪಗಳನ್ನು ಕಣ್ತುಂಬಿಕೊಳ್ಳುವುದು ಕೂಡ ಮನಸ್ಸಿಗೆ ಮುದ ನೀಡುತ್ತದೆ. [ಶಾಸ್ತ್ರೋಕ್ತವಾಗಿ ದೀಪಾವಳಿ ಹಬ್ಬ ಆಚರಿಸುವುದು ಹೇಗೆ?]

ದೀಪಾವಳಿ ಹಬ್ಬದ ಪೂಜಾ ಮುಹೂರ್ತಗಳು:
ನವೆಂಬರ್ 9, ಸೋಮವಾರ - ಧನತ್ರಯೋದಶಿ, ದೀಪದಾನ ಮಾಡಲು ಶುಭ. ಪ್ರದೋಷ. ನೀರು ತುಂಬುವ ಹಬ್ಬ. ಯಮದರ್ಪಣ.
ನವೆಂಬರ್ 10, ಮಂಗಳವಾರ - ರೂಪ ಚತುರ್ದಶಿ, ನರಕ ಚತುರ್ದಶಿ. ಸೂರ್ಯನು ಉದಯಿಸುವ ಸಮಯದಲ್ಲಿ (ನಸುಕಿನಲ್ಲಿ) ಅಭ್ಯಂಜನ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿಕೊಳ್ಳುವುದು. [ಬೆಳಕಿನೊಂದಿಗೆ ಆತ್ಮದ ಬಂಧ ಬೆಸೆಯುವ ಮಿಣಮಿಣ ಹಣತೆ!]
ನವೆಂಬರ್ 11, ಬುಧವಾರ - ದೀಪಾವಳಿ ಅಮವಾಸ್ಯೆ. ಶ್ರೀಚಕ್ರ ಮತ್ತು ಕುಬೇರ ಹಾಗೂ ಧನಲಕ್ಷ್ಮೀ ಪೂಜೆಯನ್ನು ಮಾಡಬೇಕು. ಬೆಳಗ್ಗೆ 7-20ರಿಂದ 8-51 (ಮಹೇಂದ್ರ ಕಾಲ), 8-51ರಿಂದ 9-36 (ಅಮೃತ ಕಾಲ), ಸಂಜೆ 5-58ರಿಂದ ರಾತ್ರಿ 9-20ರವರೆಗೆ (ಅಮೃತ ಕಾಲ) ಪೂಜೆಗೆ ಶ್ರೇಷ್ಠ ಸಮಯ. ಮಧ್ಯಾಹ್ನ 12ರಿಂದ 1-30ರವರೆಗೆ ರಾಹುಕಾಲ ಇರುವುದರಿಂದ ಪೂಜೆ ಈ ಸಮಯದಲ್ಲಿ ಸೂಕ್ತವಲ್ಲ. ರಾತ್ರಿಯ ಸಮಯದಲ್ಲಿ ಲಕ್ಷ್ಮೀಪೂಜೆ ಮಾಡಬೇಕು. ಹಗಲಿನಲ್ಲಿ ಕುಬೇರ ಮತ್ತು ಶ್ರೀಚಕ್ರ ಪೂಜೆ ಮಾಡಬಹುದು.
ನವೆಂಬರ್ 12, ಗುರುವಾರ - ದೀಪಾವಳಿ ಪಾಡ್ಯ. ಹೊಸ ಖಾತೆ ಪುಸ್ತಕಗಳನ್ನು ಪೂಜಿಸಬೇಕು. ಹೊಸ ಲೆಕ್ಕಪತ್ರದ ರಿಜಿಸ್ಟರ್ ಪೂಜಿಸಬೇಕು. ಮನೆಯಲ್ಲಿ ಪಾಂಡವರನ್ನು ಪ್ರತಿಷ್ಠಾಪಿಸಬೇಕು. ಬಲಿಪ್ರತಿಪದ, ಬಲೀಂದ್ರ ಪೂಜೆ ಮಾಡಬೇಕು. ಹೊಸದಾಗಿ ಗೃಹಪ್ರವೇಶ ಮತ್ತು ಇತರ ಹೊಸ ಕಾರ್ಯಗಳನ್ನು ಆರಂಭಿಸಲು ತುಂಬಾ ಶುಭಕರ ದಿನವಿದು.
ಬೆಳಗ್ಗೆ 6-35ರಿಂದ 8-05ರವರೆಗೆ (ಅಮೃತ ಕಾಲ), 9-25ರಿಂದ 10-20ರವರೆಗೆ (ಶುಕ್ರ ಹೋರಾ), 10-20ರಿಂದ 11-52ರವರೆಗೆ (ಅಮೃತ ಕಾಲ), ಸಂಜೆ 6-48ರಿಂದ ರಾತ್ರಿ 10-05ರವರೆಗೆ (ಅಮೃತ ಕಾಲ) ಪೂಜೆಗೆ ಶ್ರೇಷ್ಠ ಸಮಯ. (ಮಧ್ಯಾಹ್ನ 1-30ರಿಂದ 3 ಗಂಟೆಯವರೆಗೆ ರಾಹುಕಾಲ ಇರುವುದರಿಂದ ಈ ಸಮಯದಲ್ಲಿ ಪೂಜೆ ಸಲ್ಲದು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications