ನವರಾತ್ರಿಯಲ್ಲಿ ವಾಗ್ದೇವಿ ಸಂಗೀತೋಪಾಸನೆ

ಮೈಸೂರಿನಂತೆಯೇ, ವೈಭವದ ನವರಾತ್ರಿ ನಡೆಯುವ ಊರು ತಿರುವನಂತಪುರ. ಅಲ್ಲಿಯ ಪದ್ಮನಾಭದೇವಸ್ಥಾನದ ಪಕ್ಕದ ನವರಾತ್ರಿ ಮಂಡಪಂನಲ್ಲಿ, ಇನ್ನೂರಕ್ಕೂ ಹೆಚ್ಚು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಗೀತೋತ್ಸವದ ಆಚರಣೆ ಇದೆ. ಮಹಾರಾಜ ಸ್ವಾತಿ ತಿರುನಾಳ್ (ಕ್ರಿ.ಶ.1813 ರಿಂದ ಕ್ರಿ.ಶ.1814) ಕರ್ನಾಟಕ ಸಂಗೀತದ ಪ್ರಮುಖ ವಾಗ್ಗೇಯಕಾರರಲ್ಲೊಬ್ಬರು. ಅವರು ನವರಾತ್ರಿಯ ಸಂದರ್ಭದಲ್ಲೇ ಹಾಡಬೇಕೆಂದು ರಚಿಸಿರುವ ಒಂಬತ್ತು ದೇವೀ ಪರವಾದ ಕೃತಿಗಳನ್ನು, ಈ ಸಂಗೀತೋತ್ಸವದಲ್ಲಿ ಪ್ರತಿ ದಿನ ತಲಾ ಒಂದು ಕೃತಿಯನ್ನು ವಿಸ್ತರಿಸಿ ಹಾಡಲಾಗುತ್ತೆ. ಈ ರಚನೆಗಳಿಗೆ ನವರಾತ್ರಿ ಕೃತಿಗಳೆಂದೇ ಕರೆಯಲಾಗುತ್ತೆ. ದಸರೆಯ ಮೊದಲ ದಿವಸ ಸಂಜೆ ಹಾಡುವ ಕೃತಿ ಶಂಕರಾಭರಣ ರಾಗದಲ್ಲಿರುವ ದೇವಿ ಜಗಜ್ಜನನಿ ಎಂಬುದು.
ನವರಾತ್ರಿಯ ಸಂದರ್ಭದಲ್ಲಿ ದೇವಿಯ ವಿವಿಧ ರೂಪಗಳ (ಪಾರ್ವತಿ, ಸರಸ್ವತಿ, ದುರ್ಗೆ, ಇತ್ಯಾದಿ) ಬಗ್ಗೆ ಹಾಡುವುದು, ಅಥವಾ ಕೇಳುವುದು ಚೆನ್ನ. ಅಲ್ಲವೇ?
ನವರಾತ್ರಿಯ ಮೊದಲ ದಿವಸ ನಾನು ನಿಮಗೆ ಕೇಳಿಸಲು ಆಯುತ್ತಿರುವ ಕೃತಿ ಕಲ್ಯಾಣಿ ರಾಗದಲ್ಲಿರುವ ತ್ಯಾಗರಾಜರ (ಕ್ರಿ.ಶ.1767- ಕ್ರಿ.ಶ.1847) ಒಂದು ಕೃತಿ - ಸುಂದರಿ ನೀ ದಿವ್ಯರೂಪಮುನು ಎಂಬುದು. ತ್ಯಾಗರಾಜರು ತಮಿಳುನಾಡಿನ ಮದ್ಯಭಾಗದಲ್ಲಿ, ತಂಜಾವೂರಿನ ಬಳಿ ತಿರುವಾರೂರಿನಲ್ಲಿದ್ದವರು. ಒಮ್ಮೆ ತಮ್ಮ ಶಿಷ್ಯರಾದ ವೀಣಾ ಕುಪ್ಪಯ್ಯರ್ ಅವರ ಮನೆಗೆ ಅಹ್ವಾನಿತರಾಗಿ ಅವರಿದ್ದ ಚೆನ್ನಪಟ್ಟಣಂ (ಚೆನ್ನೈ, ಮದ್ರಾಸು) ಗೆ ಪ್ರವಾಸ ಕೈಗೊಂಡಿದ್ದರು. ಆಗ, ಅಲ್ಲೇ ಬಳಿಯಿರುವ ತಿರುವೊಟ್ಟ್ರಿಯೂರ್ ಎಂಬ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದರು. ಈ ಊರು, ಈಗ ಮದ್ರಾಸಿಗೇ ಸೇರಿಕೊಂಡಂತೆ, ಊರಿನ ಉತ್ತರಭಾಗದಲ್ಲಿದೆ. ಅಲ್ಲಿರುವ ತ್ರಿಪುರಸುಂದರಿಯ ಮೇಲೆ ಐದು ಕೃತಿಗಳನ್ನು ರಚಿಸಿದರು. ಇವು ತಿರುವೊಟ್ಟ್ರಿಯೂರ್ ಪಂಚರತ್ನ ಕೃತಿಗಳು ಎಂದೇ ಹೆಸರುವಾಸಿಯಾಗಿವೆ.
ಕಲ್ಯಾಣಿ ರಾಗ 15, 16ನೇ ಶತಮಾನಗಳಲ್ಲಿ ಪ್ರಚಲಿತದಲ್ಲಿದ್ದರೂ, ಅದಕ್ಕೆ ಅಷ್ಟಾಗಿ ಪಂಡಿತರ ಪ್ರಶಸ್ತಿ ದೊರಕಿರಲಿಲ್ಲವೆಂದು ತೋರುತ್ತದೆ. ಹಾಗೆಂದೇ, ವೆಂಕಟಮಖಿಯಂತಹ ಶಾಸ್ತ್ರಜ್ಞರು ಈ ರಾಗವನ್ನು ಮುಸಲ್ಮಾನರಿಗೆ ಪ್ರಿಯವಾದ ರಾಗ -ಎಂದು ಅದಕ್ಕೆ ಇರುವ ಉತ್ತರಾದಿ ಮತ್ತು ಪರ್ಶಿಯನ್ ಸಂಗೀತದ ಸಂಬಂಧಗಳನ್ನು ಹೇಳಿ ತೋರಿಸಿ, ಸಂಗೀತ ಪ್ರಬಂಧಗಳ ರಚನೆಗಳಿಗೆ ಇದು ಅಷ್ಟಾಗಿ ಹೊಂದಿಕೆಯಾಗದು ಎಂದು ನುಡಿದಿದ್ದಾರೆ. ಆದರೆ, ಕಾಲಾನುಕ್ರಮದಲ್ಲಿ ಅದು ಕರ್ನಾಟಕ ಸಂಗೀತದ ವಾಗ್ಗೇಯಕಾರರಿಗೆ ಬಹಳ ಪ್ರೀತಿಯ ರಾಗವೇ ಆಗಿಹೋಯಿತು. ತ್ಯಾಗರಾಜರೊಬ್ಬರೇ ಸುಮಾರು ಮೂವತ್ತಕ್ಕೂ ಹೆಚ್ಚು ರಚನೆಗಳನ್ನು ಕಲ್ಯಾಣಿ ರಾಗದಲ್ಲಿ ರಚಿಸಿದ್ದಾರೆ. ಅವುಗಳಲ್ಲಿ ಒಂದು ಉತ್ತಮ ರಚನೆ ಸುಂದರಿ ನೀ ದಿವ್ಯ ರೂಪಮುನು. ಆದಿತಾಳದಲ್ಲಿ ನಿಬದ್ಧವಾಗಿರುವ ಈ ಕೃತಿಯ ಸಾಹಿತ್ಯ ತೆಲುಗಿನಲ್ಲಿದೆ. ಈ ರಚನೆಯಲ್ಲಿ ತ್ಯಾಗರಾಜರು ತಿರುವೊಟ್ಟ್ರಿಯೂರಿನ ತ್ರಿಪುರ ಸುಂದರಿಯನ್ನು ನೋಡಿದ ತಮ್ಮ ಭಾಗ್ಯವನ್ನು ಬಡವನಿಗೆ ಸಿರಿಬಂದಂತೆ ಎಂದು ವರ್ಣಿಸಿದ್ದಾರೆ.
ಈ ರಚನೆಯನ್ನು ನೀವು ಇಲ್ಲಿ ಕೇಳಬಹುದು: ಬಾಲಮುರಳಿ ಅವರ ಕಂಠದಲ್ಲಿ ಸುಂದರಿ ನೀ ದಿವ್ಯ ರೂಪಮುನು. ಆರಂಭದಲ್ಲಿ ಕಲ್ಯಾಣಿ ರಾಗಾಲಾಪನೆಯೂ ಇದೆ. ಕೊನೆಯಲ್ಲಿ ಸೊಗಸಾದ ಕಲ್ಪನಾಸ್ವರಗಳು ಇವೆ. ಕೇಳಿ ಆನಂದಿಸಿ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications