ಏನಿದು ಮಿಷನ್ ಶಕ್ತಿ- Anti- ಉಪಗ್ರಹ ಕ್ಷಿಪಣಿ ಅಸ್ತ್ರ?
ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಾಹ್ನ ಮಾಡಿರುವ ಮಹತ್ವದ ಘೋಷಣೆಯಲ್ಲಿ ಕೇಳಿ ಬಂದ ಪ್ರಮುಖವಾಗಿ ಕೇಳಿ ಬಂದ ಪದಗಳು Low Earth Orbit (LEO) ಹಾಗೂ ಇನ್ನೊಂದು ಮಿಷನ್ ಶಕ್ತಿ.
ಮಿಷನ್ ಶಕ್ತಿ -ಇದು ಉಪಗ್ರಹ ಪ್ರತಿರೋಧಿ ಅಸ್ತ್ರ(Anti saatellite weapons) ವನ್ನು ಸ್ವದೇಶವಾಗಿ ನಿರ್ಮಿಸಿ, ಪರೀಕ್ಷಿಸಿ, ಪ್ರಯೋಗಿಸಲು ಆರಂಭವಾದ ಯೋಜನೆ.
ಯುಪಿಎ ಸರ್ಕಾರದ ಕಾಲದಾಲ್ಲಿ ಈ ಯೋಜನೆ ಬಗ್ಗೆ ಪ್ರಸ್ತಾವನೆ ಬಂದಿದ್ದರೂ ಕಾರ್ಯಗತವಾಗಿರಲಿಲ್ಲ. ಸುಮಾರು 9 ವರ್ಷಗಳಿಂದ ಈ ಯೋಜನೆ ಬಗ್ಗೆ ಡಿಆರ್ ಡಿಒ ಹಾಗೂ ಇಸ್ರೋ ಇನ್ನಿತರ ಬಾಹ್ಯಾಕಾಶ ಸಂಬಂಧಿಸಿದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ನಿರಂತರವಾಗಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿದ್ದವು.
ನಮ್ಮ ವಿಜ್ಞಾನಿಗಳ ಪರಿಶ್ರಮ, ಮೋದಿ ಸರ್ಕಾರದ ದೃಢ ನಿರ್ಧಾರದಿಂದ ಈಗ ಬಾಹ್ಯಾಕಾಶದಲ್ಲಿ ಹೊಸ ವಿಕ್ರಮ ಸಾಧಿಸಲಾಗಿದೆ.
ಯುಎಸ್, ಚೀನಾ ಹಾಗೂ ರಷ್ಯಾ ನಂತರ ಬಾಹ್ಯಾಕಾಶ ಲೋಕದ ಸೂಪರ್ ಲೀಗ್ ನಲ್ಲಿ ಈ ತಂತ್ರಜ್ಞಾನವನ್ನು ಹೊಂದಿರುವ ದೇಶವಾಗಿ ಭಾರತ ಹೊರ ಹೊಮ್ಮಿದೆ.

ಎಸ್ಯಾಟ್ ತಂತ್ರಜ್ಞಾನ ಪರೀಕ್ಷೆ
A-SAT ಮೂಲಕ ಕೆಳ ಹಂತದ ಕಕ್ಷೆ(LEO)ಯಲ್ಲಿರುವ ಉಪಗ್ರಹವನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಭಾರತ ಇದೀಗ ಹೊಂದಿದೆ. ನಮ್ಮ ವಿಜ್ಞಾನಿಗಳು ಈ ಪರೀಕ್ಷೆಯನ್ನು 3 ನಿಮಿಷದಲ್ಲಿ ಕಾರ್ಯಗತಗೊಳಿಸಿದ್ದಾರೆ.
1958ರಲ್ಲಿ ಅಮೆರಿಕ ಮೊಟ್ಟಮೊದಲ ಬಾರಿಗೆ ಎಸ್ಯಾಟ್ ತಂತ್ರಜ್ಞಾನ ಪರೀಕ್ಷೆ ಮಾಡಿತ್ತು. ಯುಎಸ್ಎಸ್ ಆರ್ 1964ರಲ್ಲಿ ಹಾಗೂ ಚೀನಾ 2007ರಲ್ಲಿ ಪರೀಕ್ಷೆ ಯಶಸ್ವಿಯಾಗಿ ಮಾಡಿತ್ತು. ರಷ್ಯಾ ತನ್ನ ಪಿಎಲ್ -19 ನುಡೋಲ್ ಕ್ಷಿಪಣಿ ಬಳಸಿತ್ತು.

ಭಾರತ ಸೂಪರ್ ಪವರ್ ಆಗುವತ್ತ
2010ರಲ್ಲಿ ಈ ಯೋಜನೆ ಬಗ್ಗೆ ಡಿಆರ್ ಡಿಒ ಸುಳಿವು ನೀಡಿತ್ತು. ಶತ್ರು ರಾಷ್ಟ್ರಗಳ ಉಪಗ್ರಹವನ್ನು ಬಾಹ್ಯಾಕಾಶದಲ್ಲಿ ಹೊಡೆದುರುಳಿಸಬಹುದಾದ ಅಸ್ತ್ರವನ್ನು ವಿನ್ಯಾಸಗೊಳಿಸಿ, ತಯಾರಿಸಿ, ಬಳಸುವ ಅಗತ್ಯವಿದೆ ಎಂದು ತಿಳಿಸಲಾಗಿತ್ತು. ಈಗ ಇದು ಕಾರ್ಯಗತವಾಗಿದೆ.

ಭಾರತ ಉಪಗ್ರಹಗಳು
ಕೃಷಿ, ನೈಸರ್ಗಿಕ ವಿಕೋಪ, ಸಂವಹನ, ಹವಾಮಾನ, ದೂರ ಸಂವೇದಿ, ರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ಉಪಗ್ರಹಗಳನ್ನು ಹೊಂದಿದೆ.ನಮ್ಮ ವಿಜ್ಞಾನಿಗಳ ಪರಿಶ್ರಮ, ಮೋದಿ ಸರ್ಕಾರದ ದೃಢ ನಿರ್ಧಾರದಿಂದ ಈಗ ಬಾಹ್ಯಾಕಾಶದಲ್ಲಿ ಹೊಸ ವಿಕ್ರಮ ಸಾಧಿಸಲಾಗಿದೆ.

ಎ ಸ್ಯಾಟ್ ಕ್ಷಿಪಣಿ ಪ್ರಯೋಗ ಯಶಸ್ವಿ
ಈಗ ಎ ಸ್ಯಾಟ್ ಕ್ಷಿಪಣಿ ಪ್ರಯೋಗ ಯಶಸ್ವಿಯಾದ ಬಳಿಕ, ಅಂತಾರಾಷ್ಟ್ರೀಯ ಸಮುದಾಯದಲ್ಲಿ ಭಾರತದ ಸಾಮರ್ಥ್ಯದ ಬೆಲೆ ಎಲ್ಲರಿಗೂ ಅರಿವಾಗಲಿದೆ.ಆದರೆ, ಭಾರತ ಭದ್ರತಾ ಹಿತದೃಷ್ಟಿಯಿಂದ ಮಾತ್ರ ಇಂಥ ಪ್ರಯೋಗವನ್ನು ಕೈಗೊಂಡಿದೆ. ಬಾಹ್ಯಾಕಾಶದಲ್ಲಿ ನ ಸಮರ (ಆಡು ಭಾಷೆಯಲ್ಲಿ ಹೇಳುವುದಾದರೆ ಸ್ಟಾರ್ ವಾರ್)ಕ್ಕೆ ಆಸ್ಪದ ನೀಡದಿರುವುದು ಭಾರತದ ಆದ್ಯತೆ. ಈ ಪರೀಕ್ಷೆಯಿಂದ ಭಾರತ ಯಾವುದೇ ಅಂತಾರಾಷ್ಟ್ರೀಯ ಕಾನೂನು ಅಥವಾ ನಿಬಂಧನೆಯನ್ನು ಮುರಿದಿಲ್ಲ.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು












Click it and Unblock the Notifications