Get Updates
Get notified of breaking news, exclusive insights, and must-see stories!

ರಸಗುಲ್ಲಾ ನಮ್ದೇ ಅಂತ ಕಿತ್ತಾಡಿಕೊಂಡ ಭಾರತದ ಎರಡು ರಾಜ್ಯಗಳು!

Rasogolla controversy: ಭಾರತದ ವಿವಿಧ ರಾಜ್ಯಗಳು ಗಡಿ, ಭಾಷೆ, ನೀರಿನ ವಿಚಾರವಾಗಿ ಜಗಳ ಮಾಡಿಕೊಳ್ಳುವುದು. ಈ ವಿಷಯಗಳ ಬಗ್ಗೆ ವಿವಾದ ಸೃಷ್ಟಿ ಆಗುವುದು ಇದೆ. ಮಹಾರಾಷ್ಟ್ರ - ಕರ್ನಾಟಕ ನಡುವೆ ಗಡಿ ವಿವಾದ ಇದ್ದರೆ. ತಮಿಳುನಾಡು - ಕರ್ನಾಟಕದ ನಡುವೆ ಕಾವೇರಿ ನದಿ ನೀರು ಹಂಚಿಕೆ ವಿವಾದ ಇದೆ. ಆದರೆ, ಭಾರತದ ಎರಡು ರಾಜ್ಯಗಳು ಒಂದು ರಸಗುಲ್ಲಾಗೋಸ್ಕರ ಕಿತ್ತಾಡಿಕೊಂಡಿತ್ತು ಅಂದರೆ ನೀವು ನಂಬುತ್ತೀರಾ. ಹೌದು ನಮ್ಮ ದೇಶದ ಎರಡು ರಾಜ್ಯಗಳು ರಸಗುಲ್ಲಾ ನಮ್ದು.. ರಸಗುಲ್ಲಾ ನಮ್ದು ಅಂತ ಕಿತ್ತಾಡಿಕೊಂಡಿದ್ದವು. ಇದಕ್ಕಾಗಿ ಕಮಿಟಿಗಳನ್ನು ಸಹ ರಚನೆ ಮಾಡಲಾಗಿತ್ತು. ಇತಿಹಾಸದ ಅಧ್ಯಯನಗಳನ್ನು ಹುಡುಕಲಾಗಿತ್ತು.

ಎರಡು ರಾಜ್ಯಗಳ ನಡುವೆ ರಸಗುಲ್ಲಾಗಾಗಿ ನಡೆದ ಚರ್ಚೆ ದೇಶದಾದ್ಯಂತ ಸುದ್ದಿಯಾಗಿತ್ತು. ಆ ಪರಿ ಒಂದು ರಸಗುಲ್ಲಾಗಾಗಿ ಪಶ್ಚಿಮ ಬಂಗಾಳ ಹಾಗೂ ಒಡಿಶಾ ಗುದ್ದಾಡಿಕೊಂಡಿದ್ದವು. ಈ ಚರ್ಚೆ ಬರೋಬ್ಬರಿ 2 ವರ್ಷ ನಡೆದಿತ್ತು. ಕೊನೆಗೆ ಇದರಲ್ಲಿ ಒಂದು ರಾಜ್ಯಕ್ಕೆ ಗೆಲುವಾಯ್ತು. ಹಾಗಾದರೆ ಏನಿದು ರಸಗುಲ್ಲಾ ಗುದ್ದಾಟ. ದೇಶದಾದ್ಯಂತ ಈ ವಿಷಯ ಚರ್ಚೆಯಾಗಿದ್ದು ಯಾಕೆ ಎನ್ನುವ ಮಾಹಿತಿ ಇಲ್ಲಿದೆ.

West Bengal and Odisha States Clash Over Rasgulla

ದೇಶದಲ್ಲಿ ಮಳೆಗಾಲದಲ್ಲಿ ಮಳೆ ಕೊರತೆ ಎದುರಾದರ ಅದರ ಬೆನ್ನಲ್ಲೇ ಎರಡು ರಾಜ್ಯಗಳ ನಡುವೆ ನೀರು ಹಂಚಿಕೆ ವಿವಾದ ಶುರುವಾಗುತ್ತದೆ. ಅಂತಹ ರಾಜ್ಯಗಳಲ್ಲಿ ಕರ್ನಾಟಕ - ತಮಿಳುನಾಡು ಸಹ ಸೇರಿವೆ. ಇನ್ನು ಒಂದೇ ಭಾಷೆಯಾದರೂ ಆಂಧ್ರಪ್ರದೇಶ ಹಾಗೂ ತೆಲಂಗಾಣದ ನಡುವೆ ಹಲವು ಕಾರಣಕ್ಕೆ ಈಗಲೂ ವೈಮನಸ್ಸು ಇದೆ. ಆದರೆ, ಸಿಹಿ ತಿನಿಸಿಗಾಗಿ ಎರಡು ರಾಜ್ಯಗಳು ಗುದ್ದಾಡಿಕೊಂಡಿದ್ದನ್ನ ನೀವು ಎಂದಾದರೂ ಕೇಳಿದ್ದೀರಾ. ಹೌದು ಇದು ಅಚ್ಚರಿಯಾದರೂ ನಿಜ.

ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯಗಳು ಸುದೀರ್ಘ ಎರಡು ವರ್ಷಕ್ಕೂ ಹೆಚ್ಚು ರಸಗುಲ್ಲಾ ವಿಷಯವಾಗಿ ಸಂಘರ್ಷಕ್ಕೆ ಇಳಿದಿದ್ದವು. ರಸಗುಲ್ಲಾ ನಮ್ಮ ರಾಜ್ಯದ ಸಿಹಿ ಎಂದು ಎರಡೂ ರಾಜ್ಯಗಳು ವಾದ ಮಾಡಿದ್ದವು. ಪಶ್ಚಿಮ ಬಂಗಾಳ ರಾಜ್ಯ ಈ ಸಹಿ ತಿನಿಸು ಕೊಲ್ಕತ್ತಾದ ಮಿಠಾಯಿ ತಯಾರಕರಾದ ನಬಿನ್ ಚಂದ್ರದಾಸ್ ಅವರು ಅನ್ವೇಷಿಸಿದ್ದರು ಎಂದಿದ್ದಾರೆ. ಒಡಿಶಾ 13ನೇ ಶತಮಾನದಲ್ಲಿ ಪುರಿಯಲ್ಲಿ ಈ ಸಿಹಿತಿಂಡಿಯನ್ನು ಕಂಡುಹಿಡಿಯಲಾಗಿತ್ತು ಎಂದು ವಾದಿಸಿತ್ತು.

West Bengal and Odisha States Clash Over Rasgulla

ಈ ಎರಡು ರಾಜ್ಯಗಳ ನಡುವೆ ಒಂದು ಸಿಹಿ ತಿನಿಸಿಗಾಗಿ ನಡೆದ ಜಗಳವನ್ನು ನೋಡಿ ಈ ರೀತಿ ವಿಷಯಕ್ಕೂ ರಾಜ್ಯಗಳು ಜಗಳ ಮಾಡಿಕೊಳ್ಳುವುದು ಇದೆಯ ಅಂತ ಜನ ಮಾತನಾಡಿಕೊಂಡಿದ್ದರು. ಆದರೆ ಈ ಸಿಹಿ ತಿನಿಸು ಈ ಎರಡೂ ರಾಜ್ಯಗಳಲ್ಲಿ ಭಾವನಾತ್ಮಕ ವಿಷಯವಾಗಿತ್ತು. ಎರಡೂ ರಾಜ್ಯಗಳಲ್ಲೂ ಜನ ಹೆಚ್ಚು ಸಿಹಿ ತಿನ್ನುತ್ತಾರೆ. ಪಶ್ಚಿಮ ಬಂಗಾಳದ ಸಿಹಿ ತಿನಿಸುಗಳಲ್ಲಿ ರಸಗುಲ್ಲಾ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.

ರಸಗುಲ್ಲಾ ವಿವಾದ ಶುರುವಾಗಿದ್ದು ಹೇಗೆ ?

ರಸಗುಲ್ಲಾ ಚರ್ಚೆ ಅಥವಾ ವಿವಾದ ಪ್ರಾರಂಭವಾಗುವುದಕ್ಕೆ ಮುಖ್ಯ ಕಾರಣ ಒಡಿಶಾ ಸರ್ಕಾರದ ಒಂದು ನಿರ್ಧಾರ. 2015ರಲ್ಲಿ ಈ ಚರ್ಚೆ ಶುರುವಾಯ್ತು. ಅಂದಿನ ಒಡಿಶಾ ಸರ್ಕಾರವು ಉಲ್ಟೊ ರಥ ಎನ್ನುವ ಹಬ್ಬ ಆಚರಣೆಯ ದಿನವನ್ನು ರಸಗುಲ್ಲಾ ದಿವಸ್ ಎಂದು ಆಚರಣೆ ಮಾಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಪಶ್ಚಿಮ ಬಂಗಾಳ ವಿರೋಧ ವ್ಯಕ್ತಪಡಿಸಿತ್ತು. ಎರಡು ರಾಜ್ಯಗಳ ನಡುವೆ ಈ ವಿಚಾರವಾಗಿ ನಡೆದ ಚರ್ಚೆ ಹಾಗೂ ವಾದ - ವಿವಾದ ಅಂತಿಮವಾಗಿ ಪಶ್ಚಿಮ ಬಂಗಾಳದ ರಸಗುಲ್ಲಾಗೆ ಜಿಐ ಟ್ಯಾಗ್ (ಜಿಯೋಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್) ಸಿಗುವ ಮೂಲಕ ಈ ವಿವಾದ ಅಂತ್ಯವಾಯ್ತು. ಪಶ್ಚಿಮ ಬಂಗಾಳ ರಸಗುಲ್ಲಾಗೆ ಜಿಐ ಟ್ಯಾಗ್‌ ಪಡೆದ ಮೇಲೂ ಈ ವಿಷಯ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಚರ್ಚೆಯಾಗುತ್ತಲ್ಲೇ ಇದೆ ಎನ್ನುವುದು ಬೇರೆ ಮಾತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+