'ಮಿಸೆಸ್ ಇಂಡಿಯಾ ಯೂನಿವರ್ಸ್' ಮಲೆನಾಡಿನ ಮನೀಶಾ ಜತೆಗೆ ಮಾತುಕತೆ
ಇದು ಮಲೆನಾಡಿನ ಮತ್ತೊಬ್ಬ ಹೆಣ್ಣುಮಗಳ ಯಶೋಗಾಥೆ. ಶಿವಮೊಗ್ಗ ಜಿಲ್ಲೆಯ ಹೆಸರನ್ನು ವಿಶ್ವ ಭೂಪಟದಲ್ಲಿ ಮತ್ತೊಮ್ಮೆ ಹುಡುಕುವಂತೆ ಮಾಡಿದ ಮನೀಶಾ ವರುಣ್ ರ ಬಗೆಗಿನ ವಿಶೇಷ ಲೇಖನ ಇದು. ಕಳೆದ ವರ್ಷ ಭದ್ರಾವತಿಯ ಶಾಶಾಭಟ್ ಸೂಪ್ರಾ ವಿಶ್ವ ಸುಂದರಿಯ ಕಿರೀಟವನ್ನು ಮುಡಿಗೇರಿಸಿದ್ದನ್ನು ಯಾರೂ ಮರೆಯುವಂತಿಲ್ಲ.
ಇದೀಗ ಇದೇ ಹಾದಿ ತುಳಿದಿದ್ದಾರೆ ಮಲೆನಾಡಿನ ಚೆಲುವೆ- ಶಿವಮೊಗ್ಗದ ಮನಿಷಾ ವರುಣ್. ಈ ಬಾರಿಯ ಮಿಸೆಸ್ ಇಂಡಿಯಾ ಯುನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡು ಶಿವಮೊಗ್ಗದ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಡಾಜಲ್ ಇಂಡಿಯಾ ಸಂಸ್ಥೆ ಆಯೋಜಿಸಿದ್ದ ಈ ಸೌಂದರ್ಯ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ 26 ಮಂದಿ ಭಾಗವಹಿಸಿದ್ದರು.
ಕೊನೆಯ ಸುತ್ತಿನಲ್ಲಿ ಐವರು ಸ್ಪರ್ಧಾಳುಗಳ ಪೈಕಿ ವಿಜೇತರಾಗಿ ಹೊರಹೊಮ್ಮಿದ ಮನೀಶಾ ಅವರು ಎಂಟು ಸುತ್ತುಗಳಲ್ಲಿ ಪ್ರಥಮ ಸ್ಥಾನವನ್ನು ಉಳಿಸಿಕೊಂಡೇ ಕೊನೆಯದಾಗಿ ಮಿಸೆಸ್ ಇಂಡಿಯಾ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಅರಿವು ಮೂಡಿಸುವ ಘೋಷವಾಕ್ಯವನ್ನು ಹೊತ್ತ ಈ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಕೇಳಲಾದ, ನಿಮಗೆ ಮಾದರಿ ಯಾರು ಎಂಬ ಪ್ರಶ್ನೆಗೆ 'ಜನ್ಮ ನೀಡಿದ ತಾಯಿ ಹಾಗೂ ಮಾತೃ ಸ್ವರೂಪಿ ಅತ್ತೆ' ಎಂದು ನೀಡಿದ ಉತ್ತರ ಕೊಲಂಬೊದಲ್ಲಿ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕ ಸಮೂಹದ ಚಪ್ಪಾಳೆಗೆ ಸಾಕ್ಷಿಯಾಗಿತ್ತು.

ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವೀಧರೆ
ಎರಡು ಮಕ್ಕಳ ತಾಯಿಯಾಗಿರುವ ಮನೀಶಾ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವೀಧರೆ. ಅತ್ಯಂತ ಕಠಿಣವಾದ ಈ ಸ್ಪರ್ಧೆಗೆ ಮನೀಶಾ ಅವರನ್ನು ತಯಾರು ಮಾಡಿದ್ದು ಈ ಹಿಂದೆ ಶಿವಮೊಗ್ಗದ ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದ ಪಂಕಜ್ ಕುಮಾರ್ ಪಾಂಡೆ ಅವರ ಪತ್ನಿ ಅನುಜಾ ಪಾಂಡೆ. ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗೆ ತರಬೇತುದಾರರು ಹಾಗೂ ರಾಷ್ಟ್ರೀಯ ವಸ್ತ್ರ ವಿನ್ಯಾಸ ಸೌಂದರ್ಯ ಪರಿಕರಗಳ ನಿರ್ದೇಶಕರಾಗಿರುವ ಅನುಜಾ ಪಾಂಡೆ ನಾಲ್ಕು ತಿಂಗಳು ಕಾಲ ಕಠಿಣ ತರಬೇತಿಯನ್ನು ನೀಡಿದ್ದನ್ನು ಮನೀಶಾ ಮರೆಯುವುದಿಲ್ಲ.

ಸಿನಿಮಾ - ಸೀರಿಯಲ್ ಬಗ್ಗೆ ಆಸಕ್ತಿ ಇಲ್ಲ
ನನಗೆ ಮಹಿಳಾ ದೌರ್ಜನ್ಯ ತಡೆ ಹಾಗೂ ಮಹಿಳಾ ರಕ್ಷಣೆ ಕುರಿತು ಆಸಕ್ತಿ ಇದ್ದು, ಈ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಲಾಗುವುದು. ಕುಟುಂಬ ಹಾಗೂ ಸಮಾಜದ ಹಿತ ಕಾಯುವಲ್ಲಿ ಆಸಕ್ತಿಯಿದೆಯೇ ಹೊರತು, ಸಿನಿಮಾ - ಸೀರಿಯಲ್ ಬಗ್ಗೆ ಆಸಕ್ತಿ ಇಲ್ಲ ಎನ್ನುವ ಮನಿಶಾ, ಸೌಂದರ್ಯ ಸ್ಪರ್ಧೆಯೆಂದರೆ ಪೂರ್ವಗ್ರಹ ಬೇಡ. ಹಾಗೆಯೇ ಅಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ. ಹೀಗಾಗಿ ಹೆಣ್ಣುಮಕ್ಕಳು ಧೈರ್ಯದಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎನ್ನುತ್ತಾರೆ.

ಆತ್ಮವಿಶ್ವಾಸ ಹೆಚ್ಚಾಗುತ್ತದೆ
ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ, ಜಾಣ್ಮೆ, ಬುದ್ಧಿಮತ್ತೆ ಹಾಗೂ ಆ ಕ್ಷಣದಲ್ಲಿ ನಾವು ನೀಡುವ ಪ್ರತಿಕ್ರಿಯೆಗಳ ಮುಖ್ಯ ಮಾನದಂಡಗಳು ಎಂದು ತಮ್ಮ ಅನುಭವ ಹಂಚಿಕೊಂಡ ಅವರು, ಆತ್ಮವಿಶ್ವಾಸ ವೃದ್ಧಿ, ಸಮಾಜವನ್ನು ಧನಾತ್ಮಕ ಅಂಶಗಳಿಂದ ಎದುರಿಸುವ ಶಿಕ್ಷಣ ಈ ಸ್ಪರ್ಧೆಗಳಲ್ಲಿ ಸಿಗುತ್ತದೆ ಎನ್ನುತ್ತಾರೆ.

ಕುಟುಂಬದವರೇ ನನ್ನ ಸಾಧನೆಗೆ ಪ್ರೇರಣೆ
ಮನೆಯಲ್ಲಿ ತಂದೆ- ತಾಯಿ, ಅತ್ತೆ- ಮಾವ, ಪತಿ ಎಲ್ಲರೂ ನೀಡಿದ- ನೀಡುತ್ತಿರುವ ಪ್ರೋತ್ಸಾಹದಿಂದ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಈ ಬೆಳವಣಿಗೆ ಹಾಗೂ ಪ್ರಶಸ್ತಿಯನ್ನು ಅವರಿಗೆ ಅರ್ಪಿಸುತ್ತೇನೆ. ಹಾಗೇ ಸಮಾಜಮುಖಿ ಕಾರ್ಯ ಮಾಡಲು ಇದನ್ನೇ ಪ್ರೇರಣೆಯಾಗಿಸಿಕೊಂಡು ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ನಗುತ್ತಲೇ ಉತ್ತರಿಸಿದರು ಮನಿಶಾ. "ನನಗೆ ಮದುವೆಯಾಗಿದೆ. ಜೀವನವೇ ಮುಗಿಯಿತು. ಓದಿದರೆ ಎಷ್ಟು- ಬಿಟ್ಟರೆಷ್ಟು, ಹೊರಗೇಕೇ ಹೋಗಬೇಕು" ಎಂಬ ಹಿಂಜರಿಕೆ ಇರುವಂಥ ಹೆಣ್ಣುಮಕ್ಕಳಿಗೆ ಮನಿಶಾ ಅವರು ಮಾದರಿ ಅನ್ನಿಸುವುದಿಲ್ಲವೇ?
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications