Maruti Suzuki: ಇದೇ ತಿಂಗಳು ಮಾರುತಿ ಕಂಪನಿಯ ಕಾರು ಖರೀದಿಸಿ 68000 ಉಳಿಸಿ
ನೀವು ಏನಾದ್ರೂ ಕಾರುಗಳನ್ನು ಖರೀದಿಸುವ ಯೋಚನೆಯಲ್ಲಿದ್ದರೆ, ಈ ತಿಂಗಳು ಸೂಕ್ತ ಸಮಯ. ನೀವು ಮಾರುತಿ ಸುಜುಕಿ ಕಾರ್ಗಳನ್ನು ಪಡೆದಲ್ಲಿ ಸಾವಿರಾರು ರೂಪಾಯಿ ಲಾಭವನ್ನು ಪಡೆಯಬಹುದಾಗಿದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಗೂ ಪೆಟ್ಟು ಬೀಳದು. ಹಾಗಿದ್ದರೆ, ಮಾರುತಿ ಕಂಪನಿ ಯಾವೆಲ್ಲಾ ಕಾರ್ಗಳ ಮೇಲೆ ಆಫರ್ ನೀಡುತ್ತಿದೆ ಎಂಬುದರ ಮಾಹಿತಿ ಇಲ್ಲಿದೆ.
ಮಾರುತಿ ಕಂಪನಿ ತನ್ನ ಹ್ಯಾಚ್ಬ್ಯಾಕ್ ಕಾರ್ಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ನೀವು ಮಾರುತಿ ಕಂಪನಿಯ ಕಾರ್ಗಳನ್ನು ಖರೀದಿಸಿದ್ದೇ ಆದಲ್ಲಿ ಸುಮಾರು 68 ಸಾವಿರ ರೂ. ವರೆಗೆ ಹಣವನ್ನು ಉಳಿಸಬಹುದಾಗಿದೆ. ಈ ರಿಯಾಯಿತಿಯು 31 ಮೇ 2024 ರವರೆಗೆ ಮಾತ್ರ ಅನ್ವಯಿಸುತ್ತದೆ. ಆಫರ್ಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನೀವು ಮಾರುತಿ ಸುಜುಕಿ ಶೋರೂಮ್ ಸಂಪರ್ಕಿಸಿ.
]

ಮಾರುತಿ ಆಲ್ಟೊ ಕೆ10
ಮಧ್ಯಮ ವರ್ಗದವರ ಕನಸಿನ ಕಾರ್ ಮಾರುತಿ ಸುಜುಕಿ ಅಲ್ಟೋ ಕೆ10 ಕೊಳ್ಳುವ ಆಸೆ ನಿಮ್ಮದಾಗಿದ್ದರೆ, ನೀವು 63,100 ರೂಪಾಯಿಗಳ ವರೆಗೆ ಹಣವನ್ನು ಉಳಿಸಬಹುದಾಗಿದೆ. ಈ ಕಾರಿನ ಎಕ್ಸ್ ಶೋರಮ್ ಬೆಲೆ 3.99 ರಿಂದ ಆರಂಭವಾಗುತ್ತದೆ. ಪ್ರತಿ ಲೀಟರ್ಗೆ ಈ ಕಾರ್ ಸುಮಾರು 25 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಅಲ್ಲದೆ ಈ ಕಾರಿನಲ್ಲಿ ಐದು ಜನರು ಅರಾಮವಾಗಿ ಕುಳಿತುಕೊಳ್ಳಬಹುದು. ಇದಕ್ಕೆ 1000 ಸಿಸಿ ಎಂಜಿನ ನೀಡಲಾಗುತ್ತಿದೆ.
ವ್ಯಾಗನ್ ಆರ್ ಮೇಲೆ ಭರ್ಜರಿ ರಿಯಾಯಿತಿ
ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರು ಎಂಬ ಹೆಗ್ಗಳಿಕೆಗೆ ವ್ಯಾಗನ್ ಆರ್ ಪಾತ್ರವಾಗಿದೆ. ಈ ತಿಂಗಳು ಈ ಕಾರ್ನ್ನು ನೀವು ಖರೀದಿಸಿದರೆ, 68,100 ರೂಪಾಯಿ ರಿಯಾಯಿತಿ ಪಡೆಯಬಹುದಾಗಿದೆ. ವ್ಯಾಗನ್ ಆರ್ ಬೆಲೆ 5.54 ಲಕ್ಷ ರೂ.ದಿಂದ ಆರಂಭವಾಗುತ್ತದೆ. ಈ ಕಾರು ಒಂದು ಲೀಟರ್ನಲ್ಲಿ 26 ಕಿಮೀ ಮೈಲೇಜ್ ನೀಡುತ್ತದೆ. ಈ ಕಾರಿನಲ್ಲಿ 1.0L ಮತ್ತು 1.2L ಎಂಜಿನ್ ಆಯ್ಕೆಗಳು ಲಭ್ಯವಿದೆ.

ಮಾರುತಿ ಸೆಲೆರಿಯೊ
ಮಾರುತಿ ಸೆಲೆರಿಯೊವನ್ನು ಮೇ ತಿಂಗಳಲ್ಲಿ ಖರೀದಿಸಿದರೆ 58,100 ರೂಪಾಯಿ ರಿಯಾಯಿತಿ ಪಡೆಯಬಹುದು. ಈ ಕಾರು ಒಂದು ಲೀಟರ್ ನಲ್ಲಿ 26 ಕಿ.ಮೀ ಮೈಲೇಜ್ ನೀಡುತ್ತದೆ. ಇದು 1000 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದೆ. ಸೆಲೆರಿಯೊ ಬೆಲೆ 5.36 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ.
ಮಾರುತಿ ಎಸ್-ಪ್ರೆಸ್ಸೊ
ಈ ತಿಂಗಳು ಮಾರುತಿ ಸುಜುಕಿಯ ಮೈಕ್ರೋ SUV S-Presso ಖರೀದಿಸಿದ್ದೇ ಆದಲ್ಲಿ ಖಂಡಿತವಾಗಿಯೂ 58,100 ರೂಪಾಯಿಗಳ ಲಾಭ ಪಡೆಯುತ್ತೀರಿ. ಈ ಕಾರಿನ ಬೆಲೆ 4.26 ಲಕ್ಷ ರೂಪಾಯಿಗಳಿಂದ ಆರಂಭವಾಗಲಿದ್ದು, ಒಂದು ಲೀಟರ್ನಲ್ಲಿ 26 ಕಿಮೀ ಮೈಲೇಜ್ ನೀಡುತ್ತದೆ.
ಮಾರುತಿ ಕಂಪನಿಯ ಈ ಆಫರ್ ಈ ತಿಂಗಳಲ್ಲಿ ಕೊನೆಗೊಳ್ಳಲಿದೆ. ಈ ಬಂಪರ್ ಆಫರ್ ಗ್ರಾಹಕರಿಗೆ ಮೇ 31ರ ವರೆಗೆ ಇರುತ್ತದೆ. ಬರೀ ಇದೇ ಕಾರ್ಗಳಲ್ಲ ಬೇರೆ ಕಾರ್ಗಳನ್ನು ನೀವು ಕೊಂಡಾಗಲೂ ಗ್ರಾಹಕ ಹಣವನ್ನು ಉಳಿಸಬಹುದು.
-
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ












Click it and Unblock the Notifications