ದೇಶ ಲಾಕ್ಡೌನ್; ಯುವಕರ ಗೋಳು ಟಿಕ್ಟಾಕ್ನಲ್ಲಿ ಜೋರು
ಬೆಂಗಳೂರು, ಮಾರ್ಚ್ 27: ಕೊರೊನಾ ಮಹಾಮಾರಿ ಜಗತ್ತಿನಲ್ಲಿ ದೊಡ್ಡ ಹಾವಳಿಯನ್ನೇ ಸೃಷ್ಟಿಸಿದೆ. ಜನಸಂಖ್ಯೆಯಲ್ಲಿ ಪ್ರಪಂಚದ ಎರಡನೇ ಅತಿದೊಡ್ಡ ದೇಶವಾಗಿರುವ ಭಾರತಕ್ಕೂ ಕೊರೊನಾ ಕಾಟ ಕೊಡುತ್ತಿದೆ.
ಕೊರೊನಾ ಸೋಂಕು ವ್ಯಾಪಕವಾಗಿ ಹರಡದಂತೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು, 21 ದಿನ ಅಂದರೆ ಏಪ್ರೀಲ್ 15 ರವೆರೆಗೆ ಲಾಕ್ಡೌನ್ ಘೋಷಿಸಿದ್ದಾರೆ.
ಸಂಪೂರ್ಣ ಲಾಕ್ಡೌನ್ನಿಂದ ಜನ ಮನೆಯಿಂದ ಹೊರಗೆ ಬಾರದಂತೆ ಮಾಡಲಾಗಿದೆ. ಇದರಿಂದ ಕಂಗಾಲಾಗಿರುವ ಭಾರತದ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಸಂಪೂರ್ಣ ಲಾಕ್ಡೌನ್ ಬಗ್ಗೆ ತಮ್ಮ ನೋವನ್ನು ಚಿತ್ರ ವಿಚಿತ್ರವಾಗಿ ತೋಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಭಾರೀ ಜನಪ್ರಿಯವಾಗುತ್ತಿರುವ ಟಿಕ್ಟಾಕ್ನಲ್ಲಂತೂ ಲಾಕ್ಡೌನ್ ಬಗ್ಗೆ ಯುವಕರು ಸಕತ್ ಕಾಮಿಡಿ ವಿಡಿಯೋಗಳನ್ನು ಹರಿಬಿಡುತ್ತಿದ್ದಾರೆ. ಲಾಕ್ಡೌನ್ಗೆ ಸಕತ್ ಟ್ರೋಲ್ ಮಾಡುತ್ತಿದ್ದಾರೆ. ಅಂತಹ ವಿಡಿಯೋಗಳು ಒಂದಕ್ಕಿಂತ ಒಂದು ನಗೆ ಉಕ್ಕಿಸುತ್ತಿವೆ. ಲಾಕ್ಡೌನ್ ಬಗ್ಗೆ ಬೇಸರಗೊಂಡವರು ಟಿಕ್ಟಾಕ್ನಲ್ಲಿ ಒಂದು ರೌಂಡ್ ಹೊಡೆದುಕೊಂಡು ಬರಲು ಅಡ್ಡಿಯಿಲ್ಲ.

ಹೇಗಪ್ಪಾ ಮನೆಯಲ್ಲಿ ಇರೋದು?
ಸದಾ ಹೊರಗೆ ಓಡಾಡಿಕೊಂಡು ಇರುವವರಿಗೆ ಲಾಕ್ಡೌನ್ ಎಂಬುದು ಸಹಿಸಲಸಾಧ್ಯವಾದ ಸಂಗತಿಯಾಗಿದೆ. ಇದರಿಂದ ಶಾಕ್ ಗೆ ಒಳಗಾಗಿದ್ದಾರೆ ಅನೇಕರು. ಅದರಲ್ಲೂ ಅನೇಕ ಯುವಕ ಯುವತಿಯರು ಮನೆಯಲ್ಲಿ ಇನ್ನೂ 18 ದಿನ ಸಮಯ ಕಳೆಯುವುದು ಹೇಗೆ? ಎಂಬುದನ್ನು ಟಿಕ್ಟಾಕ್ನಲ್ಲಿ ವಿಡಿಯೋ ಮಾಡಿ ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರೆ.

ಎಂದೂ ಮಾಡದ ಕೆಲಸಗಳು!
ಲಾಕ್ಡೌನ್ನಿಂದ ಮನೆಯಲ್ಲಿ ಸಮಯ ಕಳೆಯದಾಗದವರು ಅಡುಗೆ ಮಾಡುವುದು, ಹೆಂಡತಿಗೆ ಸಹಾಯ ಮಾಡುವುದು, ಒಂದು ಕೆಜಿಯಲ್ಲಿ ಅಕ್ಕಿಕಾಳು ಎಷ್ಟಿವೆ, ಬಾಚಣಿಕೆಯ ಹಲ್ಲು ಎಷ್ಟಿವೆ? ಕಿಟಕಿಯಿಂದ ಹೊರಗೆ ನೋಡುತ್ತಾ ನಾವು ಯಾವಾಗ ಹೊರ ಹೋಗುತ್ತೇವೋ ಎಂದು ನೋಡುವುದು, ಮಕ್ಕಳೊಂದಿಗೆ ಆಟ ಆಡುವುದು, ಬಿದ್ದು ಉರುಳಾಡುವುದನ್ನು ಟಿಕ್ಟಾಕ್ ಮಾಡುತ್ತಿದ್ದಾರೆ. ಲಾಕ್ಡೌನ್ ಬಗ್ಗೆ ಮಾಡಿರುವ ಈ ವಿಡಿಯೋಗಳು ಸಕತ್ ನಗು ತರಿಸುತ್ತಿವೆ.

ಪೊಲೀಸರ ಭಯ
ಲಾಕ್ಡೌನ್ ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಆದರೆ ಪೊಲೀಸರ ಕಣ್ಣು ತಪ್ಪಿಸಿಯೂ ಕೆಲವರು ಹೊರಗೆ ಅಡ್ಡಾಡಲು ಹೋಗುತ್ತಿದ್ದಾರೆ. ಅಡ್ಡಾಡಲು ಹೋಗಿ ಪೊಲೀಸ್ ಲಾಠಿ ಏಟು ತಿಂದು ಬರುವವರ ಬಗ್ಗೆ ಟಿಕ್ಟಾಕ್ನಲ್ಲಿ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ. ಪೊಲೀಸರ ಭಯ ಟಿಕ್ಟಾಕ್ನಲ್ಲಿ ಅನುರಣಿಸುತ್ತಿದೆ.

ಸಕತ್ ಕ್ರಿಯೇಟಿವ್ ವಿಡಿಯೋಗಳು
ಲಾಕ್ಡೌವ್ನಿಂದ ಜನ ಎಷ್ಟೊಂದು ಕ್ರಿಯೇಟಿವ್ ಆಗಿದ್ದಾರೆ ಎಂಬುದನ್ನು ನೋಡಬೇಕಾದರೆ ಟಿಕ್ಟಾಕ್ ನೋಡಬೇಕಿದೆ. ಹೊರಗೆ ಹೋಗದೇ ಪರಿತಪಿಸುತ್ತಿರುವವರು ಟಿಕ್ಟಾಕ್ನಲ್ಲಿ ತಮ್ಮ ಕೌಶಲ್ಯವನ್ನು ತೋರಿಸುವಲ್ಲಿ ಹಿಂದೆ ಬಿದ್ದಿಲ್ಲ. ಲಾಕ್ಡೌನ್ ನಿಂದ ನಮಗೆ ಸಮಯ ಕಳೆಯುವುದೇ ಆಗುತ್ತಿಲ್ಲ ಎಂದು ಟಿಕ್ಟಾಕಿಗಳು ಅಲವತ್ತುಕೊಳ್ಳುತ್ತಿರುವುದು ನೋಡುಗರಲ್ಲಿ ನಗೆ ಉಕ್ಕಿಸುತ್ತಿವೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications