ಸೂಕ್ಷ್ಮತೆ, ಸ್ವಾವಲಂಬನೆ, ಸ್ವಪ್ರಯತ್ನಕ್ಕೆ ಇಂಬು ಕೊಟ್ಟ ಲಾಕ್ ಡೌನ್ ಗೆ ದೀರ್ಘ ನಮಸ್ಕಾರ
ಮಾರ್ಚ್ 23ನೇ ತಾರೀಕು. ಕೊರೊನಾ ಎಂಬ ಮಹಾಮಾರಿ ಎಲ್ಲೆಲ್ಲೂ ಹಬ್ಬುತ್ತಿತ್ತು. ಟಿವಿಯಲ್ಲಿ ಸುದ್ದಿ ವಾಹಿನಿಯನ್ನು ವೀಕ್ಷಿಸುತ್ತಿದ್ದೆ. ನಾಳೆಯಿಂದ ಇಡೀ ಕರ್ನಾಟಕ ಲಾಕ್ ಡೌನ್ ಎಂಬ ವರದಿ ಬರುತ್ತಿತ್ತು.
ಅದನ್ನು ನೋಡಿದ ತಕ್ಷಣ ಅಪಾರ್ಟ್ಮೆಂಟಿನ ನಾಲ್ಕು ಗೋಡೆಗಳ ಜೈಲೆಂಬ ವಾಸಸ್ಥಾನದಿಂದ ನಮ್ಮಹಳ್ಳಿಯ ಸ್ವಚ್ಚಂದ ಪರಿಸರಕ್ಕೆ ಅದೇ ದಿನ ರಾತ್ರಿ ಎದ್ದೆವೋ ಬಿದ್ದೆವೋ ಎಂದು ಹಾರಿ ಬಂದು, ಸ್ವಸ್ಥಾನವನ್ನು ಸೇರಿಕೊಂಡಿದ್ದೆವು.
ಬಂದ ನಾಲ್ಕಾರು ದಿನಗಳು ಎಲ್ಲವೂ ಸರಿಯಾಗಿಯೇ ಇದ್ದವು. ಆದರೆ ಟಿವಿಯಲ್ಲಿ ಯಾವುದೇ ಧಾರಾವಾಹಿಗಳಿಲ್ಲದೆ, ಹೊರಗೆಲ್ಲಿಯೂ ಹೋಗಲಿಕ್ಕಾಗದೆ ಬೇಸರ ಶುರುವಾಯಿತು. ಆಗ ನನ್ನನ್ನು ಎಚ್ಚರಿಸಿದ್ದು ನನ್ನ ಗತ ಜೀವನದ ಚಟುವಟಿಕೆಗಳು.

ನಗರಕ್ಕೆ ಹೋಗಿ ನೆಲೆಸಿದ ನಂತರ ಹಳ್ಳಿಯಲ್ಲಿದ್ದಾಗ ನಾನು ಮಾಡುತ್ತಿದ್ದ ಕೆಲಸಗಳಿಗೆಲ್ಲಾ ಪೂರ್ಣವಿರಾಮ ಬಿದ್ದಿತ್ತು. ಒಂದು ಜಾಗದ ಕೊರತೆ ಇರಬಹುದು,ಇನ್ನೊಂದು ಸಮಯದ ಅಭಾವವೂ ಇರಬಹುದು,ಮತ್ತೊಂದು ನಮಗೆ ಬೇಕಿದ್ದೆಲ್ಲಾ ಅಂಗಡಿಯಲ್ಲಿ ಕೊಳ್ಳುವಂಥ ಸಾಮರ್ಥ್ಯವೂ ಬಂದಿರಬಹುದು.
ಅಲ್ಲಿಯವರೆಗೂ ಒಂದು ವರ್ಷಕ್ಕೆ ಮನೆಗೆ ಬೇಕಾಗುವಷ್ಟು ಹಪ್ಪಳ, ಸೆಂಡಿಗೆ, ಉಪ್ಪಿನಕಾಯಿಗಳನ್ನೆಲ್ಲಾ ನಾನೇ ಮಾಡುತಿದ್ದೆ.ಈಗ ನಿಂತುಹೋಗಿದ್ದ ಅವುಗಳಿಗೆಲ್ಲ ಪುನಶ್ಚೇತನ ಬಂದಿತು. ಮಾರ್ಚ್, ಏಪ್ರಿಲ್ ತಿಂಗಳ ಬಿಸಿಲು ಕೈ ಬೀಸಿ ಕರೆಯುತ್ತಿತ್ತು. ಅದನ್ನು ವ್ಯರ್ಥಗೊಳಿಸಲು ಇಷ್ಟವಾಗದೆ ಕಾರ್ಯನಿರತಳಾದೆ.
ಮನೆಯಲ್ಲಿಯೇ ಬೆಳೆದ ಮಾವಿನಕಾಯಿಯ ಮಿಡಿ ಉಪ್ಪಿನಕಾಯಿ, ಹಲಸಿನ ಕಾಯಿಯ ಹಪ್ಪಳ, ಅಕ್ಕಿ ಹಪ್ಪಳ, ಸಂಡಿಗೆಗಳೆಲ್ಲ ಕೆಲವೇ ದಿನಗಳಲ್ಲಿ ತಯಾರಾದವು. ಅದರಿಂದಾದ ತೃಪ್ತಿ, ಆನಂದವನ್ನು ಪದಗಳಲ್ಲಿ ಬಣ್ಣಿಸಲಾಗದು.ಹೇಳಿ ಕೇಳಿ ನಮ್ಮದು ಕರಾವಳಿ ತೀರ.

ಹೇರಳವಾಗಿದ್ದ ತೆಂಗಿನ ಮರದ ಗರಿಗಳಿಂದ ಒಂದಷ್ಟು ಕಸಗುಡಿಸುವ ಪೊರಕೆಗಳು ತಯಾರಿಸಲ್ಪಟ್ಟವು. ಮನೆಗೂ ಉಪಯೋಗವಾಗುವದರ ಜೊತೆಗೆ ನಾಲ್ಕಾರು ಕಾಸು ಕೈಗೂ ಸೇರಿತು. ಸ್ವಸಂಪಾದನೆ ಮತ್ತೆ ಶುರುವಾಗಿತ್ತು. ಹೊರಗಡೆ ಹೋಗುವ ಅವಕಾಶವೇ ಇಲ್ಲದಾದಾಗ ದೇವರ ಮೇಲಿನ ಭಕ್ತಿಯು ಹೆಚ್ಚಿ, ಸಮಯ ಕೊಲ್ಲಲು, ದೇವರ ಸ್ತೋತ್ರಗಳ ಮೊರೆ ಹೋಗಬೇಕಾಯಿತು.
ದೇವರಿಗೆ ದೀಪ ಹಚ್ಚಲು ಬತ್ತಿಗಳ ಅಭಾವ ಕಂಡು ಬಂದಾಗ, ಹತ್ತಿರದಲ್ಲಿ ಅಂಗಡಿಗಳೂ ಇಲ್ಲದಿದ್ದುದರಿಂದ ಸ್ವಪ್ರಯತ್ನದಿಂದ ಬತ್ತಿ ಮಾಡುವುದನ್ನು ಕಲಿತೆ. ಈಗ ಒಂದು ದಿನದಲ್ಲಿ ನೂರಾರು ಬತ್ತಿಗಳನ್ನು ಮಾಡುವ ಸಾಮರ್ಥ್ಯ ಬಂದಿದೆ. ಬತ್ತಿಗಾಗಿ ವ್ಯಯ ಮಾಡುತ್ತಿದ್ದ ಹಣವೂ ಉಳಿಯುತ್ತಿದೆ.
'ಮನಸಿದ್ದರೆ ಮಾರ್ಗ 'ಎಂಬಂತೆ ಎಲ್ಲವನ್ನೂ ನಾವೇ ಕಲಿತು ಮಾಡಬಹುದು ಎಂಬ ಆತ್ಮವಿಶ್ವಾಸ ನನ್ನಲ್ಲಿ ಮೂಡಿದೆ. ಏನೇ ಆಗಲಿ ಗತ ಜೀವನದ ನೆನಪುಗಳನ್ನು ಮರಳಿಸಿದ, ಸೂಕ್ಷ್ಮತೆ, ಸ್ವಾವಲಂಬನೆ, ಸ್ವಪ್ರಯತ್ನಕ್ಕೆ ಇಂಬುಕೊಟ್ಟ ಲಾಕ್ ಡೌನ್ ಗೆ ಒಂದು ದೀರ್ಘ ನಮಸ್ಕಾರ.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ












Click it and Unblock the Notifications