ಬಿಜೆಪಿ ಅಭ್ಯರ್ಥಿ, ಕ್ರಿಕೆಟಿಗ ಗೌತಮ್ ಗಂಭೀರ್ ಒಟ್ಟು ಆಸ್ತಿ ಎಷ್ಟು?
ನವದೆಹಲಿ, ಏಪ್ರಿಲ್ 24: ಕ್ರಿಕೆಟಿಗ ಗೌತಮ್ ಗಂಭಿರ್ ಬಿಜೆಪಿ ಸೇರ್ಪಡೆಯಾಗಿ ಈಗ ಚುನಾವಣಾ ಕಣಕ್ಕೂ ಧುಮುಕಿದ್ದಾರೆ.
ಅವರು ಪೂರ್ವ ದೆಹಲಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ನಿನ್ನೆಯಷ್ಟೆ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಸೇರ್ಪಡೆಯಾದ ಕೇವಲ ಒಂದು ತಿಂಗಳಲ್ಲಿ ಅವರು ಬಿಜೆಪಿ ಟಿಕೆಟ್ ಧಕ್ಕಿಸಿಕೊಂಡಿದ್ದಾರೆ.
ಕ್ರಿಕೆಟಿಗರಾಗಿ ಸಾಕಷ್ಟು ಯಶಸ್ಸು ಗಳಿಸಿದ್ದ ಗೌತಮ್ ಗಂಭೀರ್ ಅವರು ರಾಜಕಾರಣಿಯಾಗಿ ಯಶಸ್ಸು ಗಳಿಸಬಲ್ಲರೆ ಎಂದು ಕಾದು ನೋಡಬೇಕಿದೆ.
ಗೌತಮ್ ಗಂಭೀರ್ ಅವರು ನಿನ್ನೆ ನಾಮಪತ್ರ ಸಲ್ಲಿಸಿದ್ದು, ನಾಮಪತ್ರದ ಜೊತೆಗೆ ನಿಯಮದಂತೆ ತಮ್ಮ ಆಸ್ತಿ ವಿವರ, ಶೈಕ್ಷಣಿಕ ವಿವರ ಮತ್ತು ಇತರೆ ವಿವರಗಳನ್ನು ಸಲ್ಲಿಸಿದ್ದಾರೆ.
ಗೌತಮ್ ಗಂಭೀರ್ ಅವರು 2017-18ನೇ ಸಾಲಿನಲ್ಲಿ 12.40 ಕೋಟಿ ರೂಪಾಯಿ ಆದಾಯ ತೆರಿಗೆ ಕಟ್ಟಿದ್ದಾರೆ. ಅವರ ಪತ್ನಿ ನತಾಶಾ ಅವರು ಇದೇ ಸಾಲಿನಲ್ಲಿ 6.15 ಲಕ್ಷ ಆದಾಯ ತೆರಿಗೆ ಕಟ್ಟಿದ್ದಾರೆ. ಗಂಭೀರ್ ಅವರ ಬಳಿ 72,000 ನಗದು ಇದೆ, ಪತ್ನಿ ಬಳಿ 28,000 ನಗದು ಇದೆ.

ಗಂಭೀರ್ ಬ್ಯಾಂಕ್ ಖಾತೆಯಲ್ಲಿ ಎಷ್ಟಿದೆ?
ಗೌತಮ್ ಗಂಭೀರ್ ಅವರ ವಿವಿಧ ಬ್ಯಾಂಕ್ ಖಾತೆಯಲ್ಲಿ 1.88 ಕೋಟಿ ರೂಪಾಯಿ ಹಣವಿದೆ. ಅವರು ವಿವಿರ ಷೇರು, ಡಿಬೆಂಚರ್ ಹಾಗೂ ಸರ್ಕಾರಿ ಎನ್ಎಸ್ಎಸ್, ಪೋರ್ಟಲ್ಗಳಲ್ಲಿ 28 ಕೋಟಿ ಹೂಡಿಕೆ ಮಾಡಿದ್ದಾರೆ. ಗಂಭೀರ್ ಅವರು ಒಟ್ಟು 87.24 ಕೋಟಿ ಹಣವನ್ನು ವಿವಿಧ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಸಾಲವಾಗಿ ನೀಡಿದ್ದಾರೆ.

ಗೌತಿ ಬಳಿ ಇರುವ ಕಾರುಗಳು ಎಷ್ಟು?
ಗೌತಮ್ ಗಂಭೀರ್ ಅವರ ಬಳಿ ಐದು ಕಾರು ಮತ್ತು ಒಂದು ಬೈಕ್ ಇದೆ. ಬಿಎಂಡಬ್ಲು, ಆಡಿ ಮತ್ತು ಮಾರುತಿ ಬೊಲೆನೋ ಕಾರನ್ನು ಅವರು ಖರೀದಿಸಿದ್ದಾರೆ ಇವುಗಳ ಒಟ್ಟು ಮೌಲ್ಯ 1.27 ಕೋಟಿ. ಮಾರುತಿ ಎಸ್ಎಕ್4, ಬೊಲೆನೊ ಮತ್ತು ಕೆಟಿಎಂ ಬೈಕ್ ಉಡುಗೊರೆಯಾಗಿ ಅವರಿಗೆ ಸಿಕ್ಕಿದೆ.

ಗಂಭೀರ್ ಬಳಿ ಇರುವ ಆಸ್ತಿ ಎಷ್ಟು?
ಗೌತಮ್ ಗಂಭೀರ್ ಅವರ ಹೆಸರಿನಲ್ಲಿ ಯಾವುದೇ ಕೃಷಿ ಜಮೀನು ಇಲ್ಲ. ಆದರೆ ಕೃಷಿಯೇತರ ಜಮೀನು ಇದೆ. ಅವರ ಹೆಸರಿನಲ್ಲಿ 5 ಕೋಟಿ ಮೌಲ್ಯದ ಕೃಷಿಯೇತರ ಜಮೀನಿದೆ. ಗಂಭೀರ್ ಅವರ ಹೆಸರಿನಲ್ಲಿ 16 ಕೋಟಿ ಮೌಲ್ಯದ ವಸತಿ ಗೃಹಗಳಿವೆ. ಗಂಭೀರ್ ಅವರ ಬಳಿ ಯಾವುದೇ ವಾಣಿಜ್ಯ ಕಟ್ಟಡಗಳಿಲ್ಲ.

ಗಂಭಿರ್ ಅವರಿಗಿರುವ ಸಾಲವೆಷ್ಟು?
ಗಂಭೀರ್ ಅವರಿಗೆ 34.15 ಕೋಟಿ ಸಾಲವಿದೆ. ಜೊತೆಗೆ 1.32 ಕೋಟಿ ಸರ್ಕಾರಿ ಶುಲ್ಕ ಬಾಕಿ ಉಳಿಸಿಕೊಂಡಿದ್ದಾರೆ. ಗಂಭೀರ್ ಅವರ ಬಳಿ 5.21 ಲಕ್ಷ ಮೌಲ್ಯದ ಚಿನ್ನಾಭರಣ ಇದೆ. ಗಂಭಿರ್ ಪತ್ನಿ ಬಳಿ 23.98 ಲಕ್ಷ ಮೌಲ್ಯದ ಆಭರಣಗಳಿವೆ.

ಗೌತಮ್ ಗಂಭೀರ್ ಅವರ ಒಟ್ಟು ಆಸ್ತಿ ಎಷ್ಟು?
ಗೌತಮ್ ಗಂಭೀರ್ ಅವರ ಒಟ್ಟು ಚರಾಸ್ತಿ 116.38 ಕೋಟಿ, ಅವರ ಪತ್ನಿ ಅವರ ಒಟ್ಟು ಚರಾಸ್ತಿ 1.15 ಕೋಟಿ. ಗಂಭೀರ್ ಅವರ ಒಟ್ಟು ಸ್ಥಿರಾಸ್ತಿ 21 ಕೋಟಿ. ಒಟ್ಟು 137.38 ಕೋಟಿ ಆಸ್ತಿಯನ್ನು ಗಂಭೀರ್ ಹೊಂದಿದ್ದಾರೆ. ಜೊತೆಗೆ ಅವರ ಹೆಸರಿನಲ್ಲಿ 34.20 ಕೋಟಿ ಸಾಲ ಇದೆ. ಗಂಭೀರ್ ಅವರಿಗೆ ಕ್ರಿಕೆಟ್ ವೀಕ್ಷಕ ವಿವರಣೆ ನೀಡುವುದರಿಂದ, ಹೂಡಿಕೆ ಮೇಲಿನ ಬಡ್ಡಿ ಮತ್ತು ವ್ಯವಹಾರದಿಂದ ಆದಾಯ ಬರುತ್ತಿದೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications