ಬಿಜೆಪಿ ಅಭ್ಯರ್ಥಿ, ಕ್ರಿಕೆಟಿಗ ಗೌತಮ್ ಗಂಭೀರ್ ಒಟ್ಟು ಆಸ್ತಿ ಎಷ್ಟು?
ನವದೆಹಲಿ, ಏಪ್ರಿಲ್ 24: ಕ್ರಿಕೆಟಿಗ ಗೌತಮ್ ಗಂಭಿರ್ ಬಿಜೆಪಿ ಸೇರ್ಪಡೆಯಾಗಿ ಈಗ ಚುನಾವಣಾ ಕಣಕ್ಕೂ ಧುಮುಕಿದ್ದಾರೆ.
ಅವರು ಪೂರ್ವ ದೆಹಲಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ನಿನ್ನೆಯಷ್ಟೆ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಸೇರ್ಪಡೆಯಾದ ಕೇವಲ ಒಂದು ತಿಂಗಳಲ್ಲಿ ಅವರು ಬಿಜೆಪಿ ಟಿಕೆಟ್ ಧಕ್ಕಿಸಿಕೊಂಡಿದ್ದಾರೆ.
ಕ್ರಿಕೆಟಿಗರಾಗಿ ಸಾಕಷ್ಟು ಯಶಸ್ಸು ಗಳಿಸಿದ್ದ ಗೌತಮ್ ಗಂಭೀರ್ ಅವರು ರಾಜಕಾರಣಿಯಾಗಿ ಯಶಸ್ಸು ಗಳಿಸಬಲ್ಲರೆ ಎಂದು ಕಾದು ನೋಡಬೇಕಿದೆ.
ಗೌತಮ್ ಗಂಭೀರ್ ಅವರು ನಿನ್ನೆ ನಾಮಪತ್ರ ಸಲ್ಲಿಸಿದ್ದು, ನಾಮಪತ್ರದ ಜೊತೆಗೆ ನಿಯಮದಂತೆ ತಮ್ಮ ಆಸ್ತಿ ವಿವರ, ಶೈಕ್ಷಣಿಕ ವಿವರ ಮತ್ತು ಇತರೆ ವಿವರಗಳನ್ನು ಸಲ್ಲಿಸಿದ್ದಾರೆ.
ಗೌತಮ್ ಗಂಭೀರ್ ಅವರು 2017-18ನೇ ಸಾಲಿನಲ್ಲಿ 12.40 ಕೋಟಿ ರೂಪಾಯಿ ಆದಾಯ ತೆರಿಗೆ ಕಟ್ಟಿದ್ದಾರೆ. ಅವರ ಪತ್ನಿ ನತಾಶಾ ಅವರು ಇದೇ ಸಾಲಿನಲ್ಲಿ 6.15 ಲಕ್ಷ ಆದಾಯ ತೆರಿಗೆ ಕಟ್ಟಿದ್ದಾರೆ. ಗಂಭೀರ್ ಅವರ ಬಳಿ 72,000 ನಗದು ಇದೆ, ಪತ್ನಿ ಬಳಿ 28,000 ನಗದು ಇದೆ.

ಗಂಭೀರ್ ಬ್ಯಾಂಕ್ ಖಾತೆಯಲ್ಲಿ ಎಷ್ಟಿದೆ?
ಗೌತಮ್ ಗಂಭೀರ್ ಅವರ ವಿವಿಧ ಬ್ಯಾಂಕ್ ಖಾತೆಯಲ್ಲಿ 1.88 ಕೋಟಿ ರೂಪಾಯಿ ಹಣವಿದೆ. ಅವರು ವಿವಿರ ಷೇರು, ಡಿಬೆಂಚರ್ ಹಾಗೂ ಸರ್ಕಾರಿ ಎನ್ಎಸ್ಎಸ್, ಪೋರ್ಟಲ್ಗಳಲ್ಲಿ 28 ಕೋಟಿ ಹೂಡಿಕೆ ಮಾಡಿದ್ದಾರೆ. ಗಂಭೀರ್ ಅವರು ಒಟ್ಟು 87.24 ಕೋಟಿ ಹಣವನ್ನು ವಿವಿಧ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಸಾಲವಾಗಿ ನೀಡಿದ್ದಾರೆ.

ಗೌತಿ ಬಳಿ ಇರುವ ಕಾರುಗಳು ಎಷ್ಟು?
ಗೌತಮ್ ಗಂಭೀರ್ ಅವರ ಬಳಿ ಐದು ಕಾರು ಮತ್ತು ಒಂದು ಬೈಕ್ ಇದೆ. ಬಿಎಂಡಬ್ಲು, ಆಡಿ ಮತ್ತು ಮಾರುತಿ ಬೊಲೆನೋ ಕಾರನ್ನು ಅವರು ಖರೀದಿಸಿದ್ದಾರೆ ಇವುಗಳ ಒಟ್ಟು ಮೌಲ್ಯ 1.27 ಕೋಟಿ. ಮಾರುತಿ ಎಸ್ಎಕ್4, ಬೊಲೆನೊ ಮತ್ತು ಕೆಟಿಎಂ ಬೈಕ್ ಉಡುಗೊರೆಯಾಗಿ ಅವರಿಗೆ ಸಿಕ್ಕಿದೆ.

ಗಂಭೀರ್ ಬಳಿ ಇರುವ ಆಸ್ತಿ ಎಷ್ಟು?
ಗೌತಮ್ ಗಂಭೀರ್ ಅವರ ಹೆಸರಿನಲ್ಲಿ ಯಾವುದೇ ಕೃಷಿ ಜಮೀನು ಇಲ್ಲ. ಆದರೆ ಕೃಷಿಯೇತರ ಜಮೀನು ಇದೆ. ಅವರ ಹೆಸರಿನಲ್ಲಿ 5 ಕೋಟಿ ಮೌಲ್ಯದ ಕೃಷಿಯೇತರ ಜಮೀನಿದೆ. ಗಂಭೀರ್ ಅವರ ಹೆಸರಿನಲ್ಲಿ 16 ಕೋಟಿ ಮೌಲ್ಯದ ವಸತಿ ಗೃಹಗಳಿವೆ. ಗಂಭೀರ್ ಅವರ ಬಳಿ ಯಾವುದೇ ವಾಣಿಜ್ಯ ಕಟ್ಟಡಗಳಿಲ್ಲ.

ಗಂಭಿರ್ ಅವರಿಗಿರುವ ಸಾಲವೆಷ್ಟು?
ಗಂಭೀರ್ ಅವರಿಗೆ 34.15 ಕೋಟಿ ಸಾಲವಿದೆ. ಜೊತೆಗೆ 1.32 ಕೋಟಿ ಸರ್ಕಾರಿ ಶುಲ್ಕ ಬಾಕಿ ಉಳಿಸಿಕೊಂಡಿದ್ದಾರೆ. ಗಂಭೀರ್ ಅವರ ಬಳಿ 5.21 ಲಕ್ಷ ಮೌಲ್ಯದ ಚಿನ್ನಾಭರಣ ಇದೆ. ಗಂಭಿರ್ ಪತ್ನಿ ಬಳಿ 23.98 ಲಕ್ಷ ಮೌಲ್ಯದ ಆಭರಣಗಳಿವೆ.

ಗೌತಮ್ ಗಂಭೀರ್ ಅವರ ಒಟ್ಟು ಆಸ್ತಿ ಎಷ್ಟು?
ಗೌತಮ್ ಗಂಭೀರ್ ಅವರ ಒಟ್ಟು ಚರಾಸ್ತಿ 116.38 ಕೋಟಿ, ಅವರ ಪತ್ನಿ ಅವರ ಒಟ್ಟು ಚರಾಸ್ತಿ 1.15 ಕೋಟಿ. ಗಂಭೀರ್ ಅವರ ಒಟ್ಟು ಸ್ಥಿರಾಸ್ತಿ 21 ಕೋಟಿ. ಒಟ್ಟು 137.38 ಕೋಟಿ ಆಸ್ತಿಯನ್ನು ಗಂಭೀರ್ ಹೊಂದಿದ್ದಾರೆ. ಜೊತೆಗೆ ಅವರ ಹೆಸರಿನಲ್ಲಿ 34.20 ಕೋಟಿ ಸಾಲ ಇದೆ. ಗಂಭೀರ್ ಅವರಿಗೆ ಕ್ರಿಕೆಟ್ ವೀಕ್ಷಕ ವಿವರಣೆ ನೀಡುವುದರಿಂದ, ಹೂಡಿಕೆ ಮೇಲಿನ ಬಡ್ಡಿ ಮತ್ತು ವ್ಯವಹಾರದಿಂದ ಆದಾಯ ಬರುತ್ತಿದೆ.
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications