ಅಮೆರಿಕದ ಜನರಿಗೆ ಕುಡಿಯುವ ನೀರು ಸಿಗಲ್ಲ! ಬರ ಪರಿಸ್ಥಿತಿ ಮತ್ತಷ್ಟು ಭೀಕರ!
ಕೊರೊನಾ, ಅಫ್ಘಾನಿಸ್ತಾನ, ಚುನಾವಣೆ, ಕಾಡ್ಗಿಚ್ಚು, ಬಿಸಿಗಾಳಿ ಹೀಗೆ ತನ್ನದೇ ಸಮಸ್ಯೆಗಳನ್ನ ಎದುರಿಸುತ್ತಿರುವ ಅಮೆರಿಕದಲ್ಲಿ ಹೊಸ ತಲೆನೋವು ಶುರುವಾಗಿದೆ. ಅಮೆರಿಕದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಹನಿಹನಿ ನೀರಿಗೂ ಜನ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ಯಾಲಿಫೋರ್ನಿಯಾ ಸೇರಿದಂತೆ ಪಶ್ಚಿಮ ಭಾಗದ ರಾಜ್ಯಗಳಿಗೆ ಜೀವಜಲದ ಮೂಲವಾಗಿದ್ದ ಕೊಲೊರಾಡೋ ನದಿ ಬತ್ತಿ ಹೋಗಿದೆ. ಹಲವು ವರ್ಷಗಳಿಂದಲೂ ಎದುರಾಗುತ್ತಿರುವ ಕಾಡ್ಗಿಚ್ಚು, ಮಳೆ ಕೊರತೆ.
ಗಾಯದ ಮೇಲೆ ಉಪ್ಪು ಸುರಿದಂತೆ ವಾತಾವರಣ ಬದಲಾವಣೆ ಎಲ್ಲವೂ ಅಮೆರಿಕವನ್ನ ಹೈರಾಣಾಗಿಸಿದೆ. ಇಂತಹ ಹೊತ್ತಲ್ಲೇ ಇದೇ ಮೊಟ್ಟಮೊದಲ ಬಾರಿಗೆ ಕೊಲೊರಾಡೋ ನದಿಗೆ ಕಟ್ಟಿದ್ದ ಡ್ಯಾಂನಲ್ಲಿ ನೀರಿಲ್ಲ ಎಂದು ಘೋಷಣೆ ಮಾಡಲಾಗಿದೆ. ನೆವಾಡಾ ಮತ್ತು ಅರಿಜೋನ ಗಡಿಯಲ್ಲಿ ನಿರ್ಮಿಸಿರುವ ಹೂವರ್ ಡ್ಯಾಂನಲ್ಲಿ ನೀರು ಡೆಡ್ ಸ್ಟೋರೇಜ್ ತಲುಪಿದ್ದು ಸುಮಾರು 40 ಲಕ್ಷ ಅಮೆರಿಕನ್ನರು ಹನಿಹನಿ ನೀರಿಗೂ ಪರದಾಡಬೇಕಿದೆ. ಅಧಿಕಾರಿಗಳು ಈ ಬಗ್ಗೆ ಅಧಿಕೃತ ಘೋಷಣೆ ಹೊರಡಸಿದ್ದು, ಕೊರೊನಾ 4ನೇ ಅಲೆಯ ಭೀತಿ ನಡುವೆ ಜೀವಜಲಕ್ಕೂ ಜನ ಬಡಿದಾಡಬೇಕಿದೆ. ಡೊನಾಲ್ಡ್ ಟ್ರಂಪ್ಗೆ ಮಣ್ಣುಮುಕ್ಕಿಸಿ ಅಧಿಕಾರ ಹಿಡಿದಿರುವ ಜೋ ಬೈಡನ್ ಆಡಳಿತ ಹೊಸ ಸವಾಲು ಎದುರಾಗಿದೆ.

ಕರೆಂಟ್ ಕೂಡ ಸಿಗೋದಿಲ್ಲ..!
ಒಂದು ಕಡೆ ನೀರಿಗೆ ಸಮಸ್ಯೆ ಎದುರಾಗಿದ್ದರೆ, ಇನ್ನೊಂದು ಕಡೆ ವಿದ್ಯುತ್ ತಯಾರಿಕೆಗೂ ತೊಂದರೆಯಾಗಿದೆ. ಡ್ಯಾಂನಲ್ಲಿ ನೀರು ಇಲ್ಲದೆ ಏನನ್ನೂ ಮಾಡಲು ಆಗಲ್ಲ. ಹೀಗಾಗಿ ಕ್ಯಾಲಿಫೋರ್ನಿಯಾ, ನೆವಾಡಾ, ಅರಿಜೋನ, ಕೊಲೊರಾಡೋ, ಉತಾಹ್, ನಿವ್ ಮೆಕ್ಸಿಕೋ ರಾಜ್ಯಗಳಲ್ಲಿ ವಿದ್ಯುತ್ ಅಭಾವ ಎದುರಾಗಲಿದೆ. ಅಮೆರಿಕದ ಅಧಿಕಾರಿಗಳು ಜನರಿಗೆ ಈ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಿದ್ದು, ನೀರು ಹಾಗೂ ವಿದ್ಯುತ್ ಬಳಕೆಗೆ ನೀವೇ ಮಿತಿ ಹಾಕಿಕೊಳ್ಳಿ ಎಂದಿದ್ದಾರೆ. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ.

ಕೃಷಿಗೆ ನೀರು ಬೀಡುತ್ತಿಲ್ಲ..!
ಈಗಿನ ಪರಿಸ್ಥಿತಿ ನೋಡಿದ್ರೆ ಮುಂದೆ ಅಮೆರಿಕದ ಹಲವು ರಾಜ್ಯಗಳಲ್ಲಿ ಕುಡಿಯುವ ನೀರಿಗೂ ಬರ ಎದುರಾಗಿ, ಜನರು ನರಳುವ ಭೀತಿ ಕಾಡುತ್ತಿದೆ. ಹೀಗಾಗಿ ಕೃಷಿಗೆ ಕೊಡುತ್ತಿದ್ದ ನೀರು ನಿಲ್ಲಿಸಿದೆ ಸರ್ಕಾರ. ಇದರ ಪರಿಣಾಮ ಕೈಗೆ ಬಂದ ತುತ್ತು, ಬಾಯಿಗೆ ಬರಲಿಲ್ಲ ಎಂಬಂತಾಗಿದೆ ಅಮೆರಿಕ ರೈತರ ಪರಿಸ್ಥಿತಿ. ಸದ್ಯದಲ್ಲೇ ಮಳೆಯಾಗುವ ಲಕ್ಷಣಗಳು ಕೂಡ ಇಲ್ಲ. ಹೀಗಾಗಿ ನೀರಿನ ಕೊರತೆ ಮತ್ತಷ್ಟು ಹೆಚ್ಚಲಿದೆ, ಸಮಸ್ಯೆ ಬಗೆಹರಿಸಲು ಈ ಕೂಡಲೇ ಕ್ರಮ ಕೈಗೊಳ್ಳಬೇಕಿದೆ ಎಂಬ ಎಚ್ಚರಿಕೆ ನೀಡಲಾಗಿದೆ. ಹೂವರ್ ಡ್ಯಾಂ ನೀರಿನ ಮಟ್ಟ ಬರೋಬ್ಬರಿ 35 ಅಡಿಗೆ ಕುಸಿತ ಕಂಡಿದ್ದು, ದಿನದಿಂದ ದಿನಕ್ಕೆ ನೀರಿನ ಮಟ್ಟ ಇಳಿಯುತ್ತಾ ಸಾಗಿದೆ.

1400 ವರ್ಷದಲ್ಲೇ ಭೀಕರ ಬರಗಾಲ
ಕಳೆದ 20 ವರ್ಷಗಳಿಂದಲೂ ಕ್ಯಾಲಿಫೋರ್ನಿಯಾದ ಡ್ಯಾಂಗಳಲ್ಲಿ ನೀರಿನ ಪ್ರಮಾಣ ಇಳಿಕೆ ಕಾಣುತ್ತಿದೆ. ಆದರೆ ಈ ಬಾರಿ 1400 ವರ್ಷದಲ್ಲೇ ಕಾಣದಷ್ಟು ಬರಗಾಲ ಎದುರಾಗಿದೆ. ಕೃಷಿ ಭೂಮಿ ಒಣಗಿ ನಿಂತಿದ್ದರೂ ನೀರನ್ನು ಸರಬರಾಜು ಮಾಡಲು ಆಗುತ್ತಿಲ್ಲ. ಇದನ್ನ ಬಿಡಿ ಮುಂದಿನ ದಿನಗಳಲ್ಲಿ ಕ್ಯಾಲಿಫೋರ್ನಿಯಾ ರಾಜ್ಯದ ಜನರಿಗೆ ಕುಡಿಯುವ ನೀರು ಸಿಗೋದೆ ಅನುಮಾನವಾಗಿದೆ. ಹೀಗಾಗಿ ಬೈಡನ್ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ. ಈಗ ನಿರ್ಲಕ್ಷ್ಯ ಮಾಡಿದ್ರೆ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಲಿದೆ.

ಕೃಷಿಕರ ಬದುಕು ಬೀದಿಗೆ
ನೀವು ಕೇಳಿರಬಹುದು ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಬೆಳೆಯುವ ಬಾದಾಮಿಗೆ ಭಾರಿ ಡಿಮ್ಯಾಂಡ್ ಇದೆ. ಈ ಬಾದಾಮಿ ಬೆಳೆಗೆ ತನ್ನದೇ ಮಾನ್ಯತೆ ಹಾಗೂ ವೈಶಿಷ್ಟ್ಯತೆ ಕೂಡ ಇದೆ. ಅದರಲ್ಲೂ ಕ್ಯಾಲಿಫೋರ್ನಿಯಾ ರಾಜ್ಯದ ಬಾದಾಮಿ ಬೆಳೆಗಾರರು, ತಮ್ಮ ತಮ್ಮಲ್ಲಿ ಸಾಕಷ್ಟು ನಿಯಮ ಹಾಕಿಕೊಂಡಿದ್ದಾರೆ. ಬಾದಾಮಿ ಬೆಳೆಯಲು ಇದೇ ನೀರನ್ನು ಬಳಸಬೇಕು, ಕುಡಿಯುವ ನೀರನ್ನೇ ಉಪಯೋಗಿಸಬೇಕು. ಗುಣಮಟ್ಟ ಕೆಡದಂತೆ ಕಾಪಾಡಿಕೊಂಡು ಬರಬೇಕು. ಹೀಗೆ ಹಲವು ನಿಯಮ ಹಾಕಿಕೊಂಡು ಉತ್ತಮವಾಗಿ 'ಬಾದಾಮಿ' ಬೆಳೆಯುತ್ತಾರೆ. ಹೀಗಾಗಿಯೇ ಕ್ಯಾಲಿಫೋರ್ನಿಯಾ ಬಾದಾಮಿಗೆ ಜಗತ್ತಿನಾದ್ಯಂತ ಭಾರಿ ಬೇಡಿಕೆ ಇದೆ. ಆದ್ರೆ ಈ ಬಾರಿ ಎದುರಾದ ಬರಗಾಲ ಸುಮಾರು ಅರ್ಧಲಕ್ಷ ಕೋಟಿ ಅಂದರೆ 50 ಸಾವಿರ ಕೋಟಿ ರೂಪಾಯಿಯಷ್ಟು ನಷ್ಟ ಉಂಟುಮಾಡಿದೆ.

ಕುಡಿವ ನೀರಿಗೂ ಪರದಾಟ
ಅಮೆರಿಕ ಹೆಸರಿಗೆ ಮಾತ್ರ ಶ್ರೀಮಂತ ರಾಷ್ಟ್ರ, ಆದರೆ ದೊಡ್ಡ ದೊಡ್ಡ ನಗರಗಳನ್ನ ಬಿಟ್ಟು ಸಣ್ಣಪುಟ್ಟ ಪ್ರದೇಶಗಳ ಪಾಡು ಹೇಳತೀರದು. ಕುಡಿಯುವ ನೀರಿನ ವ್ಯವಸ್ಥೆ ಗಬ್ಬೆದ್ದು ಹೋಗಿದೆ. ಜನವಸತಿ ಪ್ರದೇಶಕ್ಕೆ ಸಪ್ಲೈ ಆಗುವ ನೀರಲ್ಲಿ ಹಾವು, ಕಪ್ಪೆ ಹೀಗೆ ನಾನಾ ಅತಿಥಿಗಳ ಹೆಣ ಮನೆ ಕೊಳಾಯಿ ಮೂಲಕ ಬಂದು ಬೀಳುತ್ತಿದೆ. ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಿದುಳು ತಿನ್ನುವ ಅಮೀಬಾ ಸೇರಿದಂತೆ ಹಲವು ಕಂಟಕಗಳು ಅಮೆರಿಕದ ನಿವಾಸಿಗಳನ್ನ ಕಾಡುತ್ತಿದೆ. ಹಾಳಾಗಿ ಹೋಗಲಿ ಅದೇ ಕೊಳಕು ನೀರನ್ನ ಬಳಸೋಣ ಅಂದ್ರೂ, ಈಗ ಅದಕ್ಕೂ ಕಲ್ಲು ಹಾಕಿದ್ದಾನೆ ಮಳೆರಾಯ.

ರಸ್ತೆ, ನೀರಿಗೆ 1.7 ಟ್ರಿಲಿಯನ್..!
ಮೂಲ ಸೌಕರ್ಯ ಅಂದ್ರೆ ಮನುಷ್ಯ ಬದುಕಲು ಅತ್ಯಗತ್ಯವಾಗಿರುವ ಕುಡಿಯುವ ನೀರು, ಉತ್ತಮ ರಸ್ತೆಗಳ ನಿರ್ಮಾಣ ಹೀಗೆ ಹಲವು ವಿಭಾಗಗಳಿಗೆ ಬಜೆಟ್ನಲ್ಲಿ ಹೆಚ್ಚು ಹಣ ನೀಡಲು ಜೋ ಬೈಡನ್ ನಿರ್ಧರಿಸಿದ್ದಾರೆ. ಬೈಡನ್ ಲೆಕ್ಕಾಚಾರದ ಪ್ರಕಾರ ಮೂಲ ಸೌಕರ್ಯ ಕ್ಷೇತ್ರಕ್ಕೆ 1.7 ಟ್ರಿಲಿಯನ್ ಡಾಲರ್ಗೆ ಫಿಕ್ಸ್ ಆಗಿದೆ. ಈ ಮೂಲಕ ಇಡೀ ಅಮೆರಿಕದ ಇತಿಹಾಸದಲ್ಲೇ ಮೂಲ ಸೌಕರ್ಯ ಮತ್ತೊಮ್ಮೆ ಅತ್ಯುನ್ನತ ಮಟ್ಟಕ್ಕೆ ಏರಿಸೋಕೆ ತಯಾರಿ ನಡೆಸಿದ್ದಾರೆ ಬೈಡನ್. ಆದರೆ ಇದೀಗ ಬರಗಾಲ ಎದುರಾಗಿದ್ದು, ಇದನ್ನೆಲ್ಲಾ ಸರಿಯಾಗಿ ನಿಭಾಯಿಸಿ, ಅಮೆರಿಕನ್ನರ ದಾಹ ತೀರಿಸಬೇಕಾದ ಜವಾಬ್ದಾರಿ ಬೈಡನ್ ಮೇಲಿದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications