Darshan Thoogudeepa: ಪವಿತ್ರಾ ಗೌಡ ಮನೆಯಲ್ಲಿ ದರ್ಶನ್ ತೂಗುದೀಪ್ ತನ್ನ ಒಳ ಉಡುಪು ಇಡುತ್ತಿದ್ದರು ಏಕೆ?
ನಟ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಒಬ್ಬರನ್ನು ಮತ್ತೊಬ್ಬರು ಬಿಟ್ಟು ಇರುತ್ತಿರಲಿಲ್ಲ. ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಎಷ್ಟು ಆತ್ಮೀರಾಗಿದ್ದರು ಎನ್ನುವುದು ಈಗ ಪ್ರಪಂಚಕ್ಕೆ ಗೊತ್ತಾಗಿದೆ. ಪವಿತ್ರಾ ಗೌಡ ಅವರು ಪ್ರೀತಿಯಿಂದ ದರ್ಶನ್ ತೂಗುದೀಪ್ನ ಸುಬ್ಬ ಅಂತಲೇ ಕರೆಯುತ್ತಿದ್ದರು. ಹಾಗೇ ದರ್ಶನ್ ತೂಗುದೀಪ್ ಕೂಡ ಪ್ರೀತಿಯಿಂದ ಪವಿತ್ರಾ ಗೌಡ ಅವರನ್ನ ಹೆಂಡ್ತಿ ಅಂತಾ ಕರೆಯುತ್ತಿದ್ದರು ಎಂಬುದು ಇಡೀ ಜಗತ್ತಿಗೆ ಗೊತ್ತಾಗಿದೆ. ಹಾಗಾದ್ರೆ ಪವಿತ್ರಾ ಗೌಡ ಮನೆಯಲ್ಲಿ ದರ್ಶನ್ ತೂಗುದೀಪ್ ತನ್ನ ಒಳ ಉಡುಪು ಇಡುತ್ತಿದ್ದರು ಏಕೆ?
ದರ್ಶನ್ ತೂಗುದೀಪ್ ಅವರಿಗೆ ಪವಿತ್ರಾ ಗೌಡ ಕಂಡರೆ ಎಷ್ಟೊಂದು ಪ್ರೀತಿ? ಅನ್ನೋ ಪ್ರಶ್ನೆಗೆ ಈಗಾಗಲೇ ಸಾಕ್ಷ್ಯಗಳು ಸಿಕ್ಕಿವೆ. ಇಬ್ಬರು ಒಬ್ಬರನ್ನ ಮತ್ತೊಬ್ಬರು ಜೀವಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದರು ಎಂಬುದಕ್ಕೆ ಪ್ರೂಫ್ ಸಿಕ್ಕಿದೆ. ಹೀಗೆ ದರ್ಶನ್ ತೂಗುದೀಪ್ ಲವ್ಸ್ ಪವಿತ್ರಾ ಗೌಡ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ ಕೆಲವರು. ಹೀಗಿದ್ದಾಗಲೇ, ನಟ ದರ್ಶನ್ ತೂಗುದೀಪ್ ಅವರ ಕೆಲವು ಸಾಕ್ಷ್ಯಗಳು ಅಂದ್ರೆ ಒಳ ಉಡುಪುಗಳು & ಬಟ್ಟೆಗಳು ಇದೀಗ ಪವಿತ್ರಾ ಗೌಡ ಮನೆಯಲ್ಲಿ ಪತ್ತೆ ಆಗಿವೆ. ಹಾಗಾದ್ರೆ ಪವಿತ್ರಾ ಗೌಡ ಮನೆಯಲ್ಲಿ ದರ್ಶನ್ ತೂಗುದೀಪ್ ತನ್ನ ಒಳ ಉಡುಪು ಇಡುತ್ತಿದ್ದರು ಏಕೆ? ಬನ್ನಿ ತಿಳಿಯೋಣ.

ಪ್ರೀತಿಯ ಸಂಕೇತವಾಗಿ ಒಳ ಉಡು...
ದರ್ಶನ್ ತೂಗುದೀಪ್ ತಮ್ಮ ಮನೆಗಿಂತ ಹೆಚ್ಚಾಗಿ ಪವಿತ್ರಾ ಗೌಡ ಮನೆಯಲ್ಲೇ ಇರುತ್ತಿದ್ದರು ಎಂಬ ಮಾತು ಇದೆ. ಇದಕ್ಕೆ ಸಾಕ್ಷಿಯಾಗಿ ದರ್ಶನ್ ತೂಗುದೀಪ್ ಅವರ ಒಳ ಉಡುಪುಗಳು & ಹಾಸಿಗೆ ಮೇಲೆ ದರ್ಶನ್ ತೂಗುದೀಪ್ ಅವರ ಕೂದಲು ಇದೀಗ ಪವಿತ್ರಾ ಗೌಡ ಮನೆಯಲ್ಲಿ ಪತ್ತೆ ಆಗಿವೆ. ಹೀಗಿದ್ದಾಗ ನಮ್ ಬಾಸ್ ಏನ್ ಮಾಡಿದ್ರೂ ಸೂಪರ್ ಅಂತಾ ಕೆಲವರು ಇದೇ ವಿಚಾರಕ್ಕೆ ಸಂಬಂಧಿಸಿದ ಪೋಸ್ಟ್ಗಳಿಗೆ ಕಮೆಂಟ್ ಹಾಕುತ್ತಿದ್ದಾರೆ. ಇನ್ನೂ ಕೆಲವು ದರ್ಶನ್ ಅವರ ಅಭಿಮಾನಿಗಳು, ಬಾಸ್ ಹಿಂಗೆಲ್ಲಾ ಮಾಡಬಾರದಿತ್ತು ಅಂತಾ ಬುದ್ಧಿ ಹೇಳುತ್ತಿದ್ದಾರೆ. ಹೀಗೆ ಬುದ್ಧಿ ಹೇಳುವವರಿಗೆ, ಸುಮ್ಮನೆ ಇರೋ ನಿನ್ನ ಕೂಡ ಶೆಡ್ಗೆ ಎತ್ತಾಕ್ಕೊಂಡು ಹೋಗಿ ಬಿಡ್ತಾರೆ ಅಂತಾ ಕೆಲವರು ಕಾಲು ಎಳೆಯುತ್ತಿದ್ದಾರೆ!
ಪವಿತ್ರಾ ಗೌಡ ಪ್ರೇಮಕ್ಕೆ ಕುರುಹು?
ದರ್ಶನ್ ತೂಗುದೀಪ್ ಪರಿಸ್ಥಿತಿ ಬಿಸಿ ತುಪ್ಪ ಬಾಯಲ್ಲಿ ಇಟ್ಟುಕೊಂಡಂತೆ ಆಗಿದೆ. ಯಾಕಂದ್ರೆ ತನ್ನ ಪ್ರಿಯತಮೆ ಪವಿತ್ರಾ ಗೌಡಾಳ ಕಾರಣಕ್ಕೆ ರೇಣುಕಾಸ್ವಾಮಿ ಎಂಬ ವ್ಯಕ್ತಿ ಕೊಲೆಯನ್ನು ಮಾಡಿರುವ ಆರೋಪ ದರ್ಶನ್ ತೂಗುದೀಪನ ವಿರುದ್ಧ ಕೇಳಿ ಬಂದಿದೆ. ಇದೇ ಕಾರಣಕ್ಕೆ ಈ ನಟ ಬಳ್ಳಾರಿ ಜೈಲು ಸೇರಿ ಪರದಾಡುತ್ತಿದ್ದಾನೆ ಎಂಬುದು ದರ್ಶನ್ ಅವರ ವಿರೋಧಿಗಳು, ಇದೀಗ ಮಾಡುತ್ತಿರುವ ಗಂಭೀರ ಆರೋಪವಾಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಒಳಗಡೆ, ಸಿಗರೇಟು, ಎಣ್ಣೆ & ಬಿರಿಯಾನಿ ಅಂತಾ ಮಜಾ ಮಾಡಿಕೊಂಡು ಬದುಕಿದ್ದ ದರ್ಶನ್ ತೂಗುದೀಪ್ ಎಂಬ ಆರೋಪ ಇತ್ತು. ಅಲ್ಲದೆ ದರ್ಶನ್ ತೂಗುದೀಪ್ ಪರಪ್ಪನ ಅಗ್ರಹಾರದ ಜೈಲಿನ ಕೋಣೆಗಳಲ್ಲಿ ಮಜಾ ಮಾಡುತ್ತಿರುವ ವಿಡಿಯೋಸ್ & ಫೋಟೋ ವೈರಲ್ ಆಗಿತ್ತು. ಇದೇ ಕಾರಣಕ್ಕೆ ದರ್ಶನ್ ತೂಗುದೀಪ್ ಬಳ್ಳಾರಿಗೆ ಎತ್ತಂಗಡಿ ಆಗಿದ್ದರು. ಈಗ ನೋಡಿದರೆ ಈ ಇಬ್ಬರ ನಡುವೆ ಅಂದ್ರೆ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ನಡುವಿನ ಪ್ರೇಮಕ್ಕೂ ಪೊಲೀಸರಿಗೆ ಕುರುಹು ಸಿಗುತ್ತಿದೆ ಎಂಬ ಆರೋಪ ಈಗ ಕೇಳಿಬಂದಿದೆ.












Click it and Unblock the Notifications