ಕನ್ನಡ 2500 ವರ್ಷ ಇತಿಹಾಸ ಇರುವ ಭಾಷೆ, ನಟ ಶಿವಣ್ಣ ಬಗ್ಗೆ ಮುಖ್ಯಮಂತ್ರಿ... Shiva Rajkumar

ಕನ್ನಡ ಕಂಠೀರವ, ಕನ್ನಡ ಕುಲ ತಿಲಕ, ಕನ್ನಡ ಭಾಷೆಯ ಸಾಂಸ್ಕೃತಿ ರಾಯಭಾರಿ ನಮ್ಮ ಡಾ. ರಾಜ್‌ಕುಮಾರ್... ಹೀಗೆ ಕನ್ನಡಿಗರು ಡಾ. ರಾಜ್‌ಕುಮಾರ್ ಅವರನ್ನ ಗೌರವಿಸಿ & ಪ್ರೀತಿ ಕೊಡುತ್ತಾರೆ. ಅಲ್ಲದೆ ಡಾ. ರಾಜ್‌ಕುಮಾರ್ ಅವರ ಮನೆಯನ್ನ ದೊಡ್ಮನೆ ಅಂತಾನೂ ಭಾರಿ ಪ್ರೀತಿ & ಗೌರವದಿಂದ ನಡೆದುಕೊಳ್ಳುತ್ತಾರೆ. ಆದರೆ ಇದೀಗ ಡಾ. ರಾಜ್‌ಕುಮಾರ್ ಅವರ ಮಗ ನಟ ಶಿವರಾಜ್‌ಕುಮಾರ್ ಅವರ ವಿರುದ್ಧ ಕನ್ನಡಿಗರು ಅಸಮಾಧಾನ ಹೊರ ಹಾಕುತ್ತಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಇದೇ ಸಮಯದಲ್ಲಿ ಕನ್ನಡ 2500 ವರ್ಷ ಇತಿಹಾಸ ಇರುವ ಭಾಷೆ, ನಟ ಶಿವಣ್ಣ ಬಗ್ಗೆ ಮುಖ್ಯಮಂತ್ರಿ...

ಶಿವಣ್ಣ ಕನ್ನಡಿಗರ ಪ್ರೀತಿಯ ನಟ ಮಾತ್ರವಲ್ಲ, ಎಷ್ಟೋ ಜನರಿಗೆ ಅಣ್ಣ... ಅದೆಷ್ಟೋ ಜನರ ಬೆನ್ನಿಗೆ ನಿಂತ ರಕ್ಷಕ... ಲೆಕ್ಕವಿಲ್ಲದಷ್ಟು ಜನ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಯಲು ಸಹಾಯ ಮಾಡಿದ ಸ್ಟಾರ್ ಅಂದ್ರೆ ಅದು ಡಾ. ಶಿವರಾಜ್‌ಕುಮಾರ್ ಅವರು ಅಂತ ಅವರ ಅಭಿಮಾನಿಗಳು ಹೇಳುತ್ತಾರೆ. ಆದರೆ ಶಿವಣ್ಣ ಅವರು ಈಗ ದೊಡ್ಡ ವಿವಾದ ಚರ್ಚೆಯ ಕೇಂದ್ರ ಬಿಂದು ಆಗಿದ್ದು, ತಮಿಳು ನಟ ಕಮಲ್ ಹಾಸನ್ ಕನ್ನಡ ಭಾಷೆ ಬಗ್ಗೆ ಮಾತನಾಡಿರುವ ಮಾತುಗಳು ಇದೀಗ ಬೆಂಕಿ ಹೊತ್ತಿಸಿದೆ...

Shiva Rajkumar Issue On Trend And This Is What Mukhyamantri Chandru Is Said

ಶಿವಣ್ಣ & ಕಮಲ್ ಹಾಸನ್ ಬಗ್ಗೆ...

ಹೌದು, ಕನ್ನಡ ಭಾಷೆಯ ಬಗ್ಗೆ ನಟ ಕಮಲ್ ಹಾಸನ್ ಬಾಯಿಗೆ ಬಂದ ರೀತಿ ಮಾತನಾಡಿ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪ ಇದೆ. ಹೀಗೆ ತಮಿಳು ನಟ ಕಮಲ್ ಹಾಸನ್ ವಿರುದ್ಧ ಕರ್ನಾಟಕದ ಮೂಲೆ ಮೂಲೆಯಲ್ಲೂ ಇದೀಗ ಆಕ್ರೋಶದ ಕಹಳೆ ಮೊಳಗಿರುವಾಗ, ವರನಟ ಡಾ. ರಾಜ್‌ಕುಮಾರ್ ಪುತ್ರ ಶಿವಣ್ಣ ಬಗ್ಗೆಯೂ ಚರ್ಚೆ ಶುರುವಾಗಿದೆ. ಹೀಗಿದ್ದಾಗಲೇ, ಕನ್ನಡ 2500 ವರ್ಷ ಇತಿಹಾಸ ಇರುವ ಭಾಷೆ, ನಟ ಶಿವಣ್ಣ ಬಗ್ಗೆ ಮುಖ್ಯಮಂತ್ರಿ...

ಕನ್ನಡದ ಬಗ್ಗೆ ಯಾರೂ ಹೀಗೆ...

ಕನ್ನಡ ಭಾಷೆ ಬಗ್ಗೆ ಕೀಳಾಗಿ ಮಾತನಾಡಿರುವ ಆರೋಪ ಹೊತ್ತಿರುವ ತಮಿಳು ನಟ ಕಮಲ್ ಹಾಸನ್ ವಿರುದ್ಧ ಕನ್ನಡಿಗರು ಹೋರಾಟ ಶುರು ಮಾಡಿದ್ದಾರೆ. ಇದೀಗ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಕೂಡ ತಯಾರಿ ಸಾಗುತ್ತಿದೆ. ಇಂತಹ ಸಮಯದಲ್ಲೇ, ವರನಟ ಡಾ. ರಾಜ್‌ಕುಮಾರ್ ಪುತ್ರ ಶಿವಣ್ಣ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಆರಂಭ ಆಗಿದೆ. ಹೀಗಿದ್ದಾಗಲೇ, ಮುಖ್ಯಮಂತ್ರಿ ಚಂದ್ರು ಅವರು ಕೂಡ ನಟ ಕಮಲ್ ಹಾಸನ್ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದು. ಶಿವಣ್ಣ ಅವರ ಬಗ್ಗೆಯೂ ಖಾಸಗಿ ಸಂದರ್ಶನ ಒಂದರಲ್ಲಿ ಪ್ರತಿಕ್ರಿಯೆ ನೀಡಿರುವುದು ಈಗ ವೈರಲ್ ಆಗುತ್ತಿದೆ. ಅದರಲ್ಲೂ ಕನ್ನಡದ ಬಗ್ಗೆ ಯಾರೂ ಹೀಗೆ ಮಾತನಾಡಬಾರದು ಅಂತಾ ಇದೀಗ ಕನ್ನಡಿಗರು ಆಗ್ರಹ ಮಾಡುತ್ತಿದ್ದು, ನಟ ಶಿವಣ್ಣ ಅವರು ಕಮಲ್ ಹಾಸನ್ ಹೇಳಿಕೆ ಖಂಡಿಸಬೇಕು ಎಂದು ನೆಟ್ಟಿಗರು ಆಗ್ರಹ ಮಾಡುತ್ತಿದ್ದಾರೆ.

ಕನ್ನಡದ ಬಗ್ಗೆ ತಮಿಳು ನಟನ...

ತಮಿಳು ನಟ ಕಮಲ್ ಹಾಸನ್ ಕನ್ನಡಿಗರ ಬಳಿ ಕ್ಷಮೆ ಕೇಳದೇ ಹೋದರೆ, ಕನ್ನಡ ಭಾಷೆಯ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿರುವ ಹೇಳಿಕೆ ಸರಿ ಮಾಡಿಕೊಳ್ಳದೇ ಹೊದರೆ ಇದೀಗ ದೊಡ್ಡ ಸಮಸ್ಯೆ ಎದುರಾಗಲಿದೆ ಎಂಬ ಆರೋಪ ಇದೆ. ಯಾಕಂದ್ರೆ ಕನ್ನಡ ಹುಟ್ಟಿದ್ದೇ ತಮಿಳು ಭಾಷೆಗೆ ಅನ್ನೋ ರೀತಿ ಮಾತನಾಡಿರುವ ತಮಿಳು ನಟ ಕಮಲ್ ಹಾಸನ್ ಕನ್ನಡಿಗರ ಕೋಪ ಕೆರಳುವಂತ ಮಾಡಿದ್ದಾರೆ. ತಮಿಳು ನಟ ಕಮಲ್ ಹಾಸನ್ ತಮ್ಮ ಚಿತ್ರದ ಪ್ರಚಾರಕ್ಕೆ ಹೀಗೆಲ್ಲಾ ಮಾಡುತ್ತಿದ್ದಾರೆ ಅಂತಲೂ ಕನ್ನಡಿಗರು ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಕೂಡಲೇ ಕ್ಷಮೆ ಕೇಳಿ, ಕನ್ನಡಿಗರ ಬಳಿ ತಾವು ಮಾಡಿದ್ದು ತಪ್ಪು ಅನ್ನೋದನ್ನು ಒಪ್ಪಿಕೊಳ್ಳಬೇಕಿದೆ ತಮಿಳು ನಟ ಕಮಲ್ ಹಾಸನ್.

ತಮಿಳು ನಟ ಕಮಲ್ ಹಾಸನ್ ತಪ್ಪು ಒಪ್ಪಿಕೊಳ್ಳದೇ ಇದ್ರೆ ಜೂನ್ 2 ಸೋಮವಾರ ಕರ್ನಾಟಕ ಬಂದ್ ಬಹುತೇಕ ಫಿಕ್ಸ್ ಆಗುತ್ತಿದ್ದು, ಶನಿವಾರದ ಒಳಗೆ ಕರ್ನಾಟಕ ಬಂದ್ ದಿನಾಂಕ ಫಿಕ್ಸ್ ಆಗಲಿದೆ. ಕನ್ನಡಪರ ಸಂಘಟನೆಗಳ ಮುಖಂಡರು ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಕರ್ನಾಟಕ ಬಂದ್ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದ್ದು, ಈಗ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಜೂನ್ 2 ಸೋಮವಾರ ಕರ್ನಾಟಕ ಬಂದ್ ಬಹುತೇಕ ಫಿಕ್ಸ್ ಎನ್ನಲಾಗಿದೆ. ಹೀಗಾಗಿ ಅದೇ ದಿನ ಕರ್ನಾಟಕದ ಶಾಲೆ & ಕಾಲೇಜುಗಳಿಗೆ ರಜೆ ಸಾಧ್ಯತೆ ಇದೆ.

ಜೂನ್ 3 ಮಂಗಳವಾರ ರಜೆ ಘೋಷಣೆ?

ಕರ್ನಾಟಕ ಬಂದ್ ಬಗ್ಗೆ ಕನ್ನಡಪರ ಸಂಘಟನೆಗಳು ಕೂಡ ಚರ್ಚೆ ಮಾಡುತ್ತಿದ್ದು, ಜೂನ್ 2 ಸೋಮವಾರ ಬದಲಿ ಜೂನ್ 3 ಮಂಗಳವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ಇದೆ. ಇನ್ನು ಈ ಕುರಿತು ಚರ್ಚೆ ಕೂಡ ನಡೆಯುತ್ತಿದೆ ಎನ್ನಲಾಗಿದ್ದು, ಕನ್ನಡಪರ ಸಂಘಟನೆ ಮುಖಂಡರಲ್ಲಿ ಈ ಬಗ್ಗೆ ಚಿಂತನೆ ನಡೆದಿದೆ. ಅಲ್ಲದೆ, ತಮಿಳು ನಟ ಕಮಲ್ ಹಾಸನ್ ಸಿನಿಮಾ ಕರ್ನಾಟಕ ರಾಜ್ಯದಲ್ಲಿ ರಿಲೀಸ್ ಆಗುವುದೇ ಅನುಮಾನ ಎನ್ನುವಂತೆ ಆಗಿದ್ದು, ಈಗ ಜೂನ್ 3 ಮಂಗಳವಾರ ಕರ್ನಾಟಕದಲ್ಲಿ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗುತ್ತಾ? ಜೂನ್ 3 ಮಂಗಳವಾರ ಕರ್ನಾಟಕ ಬಂದ್ ಆಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+