Get Updates
Get notified of breaking news, exclusive insights, and must-see stories!

Pavithra Gowda Makeup: ಪೊಲೀಸ್ ಸ್ಟೇಷನ್‌ನಲ್ಲಿ ಪವಿತ್ರಾ ಗೌಡಗೆ ಮೇಕಪ್, ಲಿಪ್​​ಸ್ಟಿಕ್ ತಂದು ಕೊಟ್ಟಿದ್ಯಾರು?

ಬೆಂಗಳೂರು, ಜೂನ್. 18: ನಟ ದರ್ಶನ್ ಮತ್ತು ಆತನ ಆಪ್ತ ಸ್ನೇಹಿತೆ ಪವಿತ್ರಾ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವುದು ಗೊತ್ತೆ ಇದೆ. ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಆರೋಪಿಗಳ ವಿರುದ್ಧ ಪೊಲೀಸರು ಹೆಚ್ಚು ಹೆಚ್ಚು ಸಾಕ್ಷಿಗಳನ್ನು ಕಲೆ ಹಾಕುತ್ತಿದ್ದಾರೆ. ಇದೆ ವೇಳೆ ಆರೋಪಿಗಳನ್ನು ಮಹಜರಿಗಾಗಿ ಕರೆದುಕೊಂಡು ಹೋಗಿದ್ದಾರೆ.

ಕೊಲೆ ಆರೋಪಿಗಳು ಯಾರೇ ಆಗಿರಲಿ ಸ್ಥಳ ಮಹಜರಿಗೆ, ನ್ಯಾಯಾಲಯಕ್ಕೆ ಬಂದಾಗ ಮುಖ ಮುಚ್ಚಿಕೊಂಡಿರುವುದು, ಮುಖದಲ್ಲಿ ಕಳೆ ಇಲ್ಲದಿರುವುದನ್ನು ನೋಡುತ್ತೇವೆ. ಆದರೆ, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಮುಖದಲ್ಲಿ ಕಿಂಚಿತ್ತೂ ಪಶ್ಚಾತಾಪ ಕಾಣಿಸುತ್ತಿಲ್ಲ. ಹೌದು... ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರೇ, ಆರೋಪಿಗಳು ಇಲ್ಲಿ ಮೇಕಪ್ ಮಾಡಿಕೊಂಡು, ನಗುತ್ತಾ ಫೋಟೋಗೆ ಫೋಸ್ ನೀಡುತ್ತಿದ್ದಾರೆ.

Renukaswamy Murder case Pavitra Gowda Makeup Lipstick Sparks Controversy

ಮೇಕಪ್... ಲಿಪ್‌ಸ್ಟಿಕ್... ನಗು...!

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ ಮತ್ತು ಪವನ್‌ ಇಬ್ಬರನ್ನು ಪೊಲೀಸರು ಸ್ಥಳ ಮಹಜರಿಗಾಗಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಪಳ ಪಳ ಹೊಳೆಯುತ್ತಿರುವ ಪವಿತ್ರಾ ಗೌಡ ಮುಖ ನೋಡಿದ ಮಾಧ್ಯಮದವರು ಮತ್ತು ಸಾರ್ವಜನಿಕರು ಬೆರಗಾಗಿದ್ದಾರೆ.

ಪೊಲೀಸ್ ಕಸ್ಟಡಿಯಲ್ಲಿ ಇರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ೧ ಆರೋಪಿ ಪವಿತ್ರಾ ಗೌಡ. ಆದರೆ, ಆಕೆ ಜೈಲಿನಲ್ಲಿರುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಅರಾಮಾವಾಗಿ ಮನೆಯಲ್ಲಿಯೇ ಇರುವಂತೆ ಕಾಣಿಸುತ್ತಿದ್ದಾರೆ. ಮುಖದ ಮೇಲಿನ ನಗು ಮಾಸಿಲ್ಲ. ಮುಖದ ಮೇಲಿನ ಮೇಕಪ್ ಕೂಡ ಈಗ ತಾನೇ ಮಾಡಿದಂತಿದೆ. ಲಿಪ್‌ಸ್ಟಿಕ್ ಪಳ ಪಳ ಅನ್ನುತ್ತಿದೆ!.

ದರ್ಶನ್ ಪ್ರೇಯಸಿಗೆ ಮೇಕಪ್ ತಂದುಕೊಟ್ಟವರು ಯಾರು?

ಹೌದು... ಕೊಲೆ ಆರೋಪಿ ಪವಿತ್ರಾ ಗೌಡ ಮುಖದಲ್ಲಿನ ಮೇಕಪ್, ಎದ್ದು ಕಾಣಿಸುತ್ತಿರುವ ಲಿಪ್‌ಸ್ಟಿಕ್ ಹಲವು ಅನುಮಾನಗಳಿಗೆ ಕಾರಣವಾಗಿದೆ. ಜೈಲಿನಲ್ಲಿರುವ ದರ್ಶನ್ ಪ್ರೇಯಸಿಗೆ ಮೇಕಪ್ ತಂದುಕೊಟ್ಟವರು ಯಾರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಒಬ್ಬರ ಕೊಲೆ ಆರೋಪಿ ಇಷ್ಟು ಆರಾಮಾವಾಗಿ ನಗು ನಗುತ್ತಾ ಮೇಕಪ್ ಮಾಡಿಕೊಂಡು ಓಡಾಡಲು ಸಾಧ್ಯವೆ ಎಂಬ ಅನುಮಾನವನ್ನು ಮುಂದಿಡುತ್ತಿದ್ದಾರೆ.

Renukaswamy Murder case Pavitra Gowda Makeup Lipstick Sparks Controversy

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿಯಲ್ಲಿರುವ ಪವಿತ್ರಾ ಗೌಡಾಗೆ ಲಿಪ್​​ಸ್ಟಿಕ್ ತಂದು ಕೊಟ್ಟಿದ್ಯಾರು ಎಂಬಯನ್ನು ನೆಟ್ಟಿಗರು ಎತ್ತಿದ್ದಾರೆ. ಇಲ್ಲಿ ಆರೋಪಿಗಳಿಗೆ ಬ್ಯೂಟಿ ಪಾರ್ಲರ್ ಇದೆಯೇ...? ಆರೋಪಿಗಳನ್ನು ನ್ಯಾಯಾಲಯಕ್ಕೆ, ಸ್ಥಳ ಮಹಜರಿಗೆ ಕರೆತರುವಾಗ ಮೇಕಪ್ ಮಾಡಲಾಗುತ್ತದೆಯೇ ಎಂಬ ವ್ಯಂಗ್ಯ ಭರಿತ ಮಾತುಗಳ ಜೊತೆಗೆ ಪೊಲಿಸರ ವಿರುದ್ಧ ಆಕ್ರೋಶ ಹೊರಬಂದಿದೆ. ಪೊಲೀಸ್ ಠಾಣೆಯಲ್ಲಿ ದರ್ಶನ್ ಮತ್ತು ಗ್ಯಾಂಗ್‌ಗೆ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದೇ ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ

ಪವಿತ್ರಾ ಗೌಡ ಮನೆಯಲ್ಲಿ ಮಹಜರು ನಡೆಸುತ್ತಿದ್ದ ವೇಳೆ ಆರೋಪಿಗಳು ನಗು ಮುಖದಲ್ಲಿ ಓಡಾಡಿದ್ದಾರೆ. ಇದು ಮಾಧ್ಯಮಗಳಲ್ಲಿಯೂ ಪ್ರಸಾರವಾಗಿದೆ. ಪೊಲೀಸರು ಸ್ಥಳ ಮಹಜರಿಗೆ ಮನೆಗೆ ಕರೆತಂದ ವೇಳೆ ಆರೋಪಿಗಳಾದ ಪವಿತ್ರಾ ಗೌಡ ಮತ್ತು ಪವನ್‌ ನಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿ ಜನ ಬಾಯಿಗೆ ಬಂದಂತೆ ಉಗಿಯುತ್ತಿದ್ದಾರೆ. ಒಬ್ಬ ವ್ಯಕ್ತಿಯ ಕೊಲೆಗೆ ಕಾರಣರಾಗಿ ಅರೋಪಿಗಳಾಗಿ ಜೈಲಿನಲ್ಲಿರುವ ಇವರುಗಳು ಒಂದಷ್ಟು ಪಶ್ಚಾತಾಪ ಇಲ್ಲದೆ ಹೀಗೆ ಆರಾಮಾಗಿ ಇರಲು ಹೇಗೆ ಸಾಧ್ಯ ಎಂದು ಜನಸಾಮಾನ್ಯರು ತಲೆ ಕೆರೆದುಕೊಂಡು ಚಿಂತಿಸುವಂತಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+