Pushpa-2: ದಬ್ಬಾಕೊಂಡ ಪುಷ್ಪ: ಅಲ್ಲು ಅರ್ಜುನನ ಖೇಲ್ ಖತಂ, ಸುಕುಮಾರನ ನಾಟಕ್ ಬಂದ್ ಅಂತಾ ಕನ್ನಡಿಗರು...
'ಪುಷ್ಪ-2' ಸಿನಿಮಾ ನೋಡಿದ ಪ್ರೇಕ್ಷಕರು ರೊಚ್ಚಿಗೆದ್ದು ರಿಯಾಕ್ಷನ್ ಕೊಡುತ್ತಿದ್ದಾರೆ. ಹೀಗೆ ಸಿಕ್ಕಾಪಟ್ಟೆ ಬಿಲ್ಡಪ್ ಕೊಟ್ಟಿದ್ದ 'ಪುಷ್ಪ-2' ಡಮ್ಮಿ ಪೀಸ್ ಅಂತಾ ಆರೋಪ ಕೂಡ ಮಾಡ್ತಾ ಇದ್ದಾರೆ ಪ್ರೇಕ್ಷಕರು. ಈ ರೀತಿ 'ಪುಷ್ಪ-2' ಸಿನಿಮಾ ಸೋತಿರುವ ಬಗ್ಗೆ ಪ್ರೇಕ್ಷಕರು ರಿಯಾಕ್ಷನ್ ಕೊಟ್ಟಿರುವ ವಿಡಿಯೋಗಳು ಎಲ್ಲೆಲ್ಲೂ ವೈರಲ್ ಆಗ್ತಿವೆ. ಇಂಥ ಸಮಯದಲ್ಲೇ, ದಬ್ಬಾಕೊಂಡ ಪುಷ್ಪ: ಅಲ್ಲು ಅರ್ಜುನ ಖೇಲ್ ಖತಂ, ಸುಕುಮಾರನ ನಾಟಕ್ ಬಂದ್ ಅಂತಾ ಕನ್ನಡಿಗರು...
'ಪುಷ್ಪ-2' ನೋಡಿ ತೆಲುಗು ಸಿನಿಮಾ ಅಭಿಮಾನಿಗಳು & ಅಲ್ಲು ಅರ್ಜುನ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಮೂಲ ತೆಲುಗು ಅಭಿಮಾನಿಗಳೇ ಈ ರೀತಿ ತಿರುಗಿಬಿದ್ದರೆ, ಬೇರೆ ಬೇರೆ ಭಾಷೆ ಪ್ರೇಕ್ಷಕರು ಹೇಗೆ ಉತ್ತರ ಕೊಡಬೇಡ ಹೇಳಿ? ಹೌದು, ಇದೀಗ 'ಪುಷ್ಪ-2' ಸಿನಿಮಾ ಅಟ್ಟರ್ ಫ್ಲಾಪ್ ಆಗಿದೆ ಅಂತಾ ಪ್ರೇಕ್ಷಕರು ಹೇಳುತ್ತಿದ್ದಾರೆ. ಈ ಸಮಯದಲ್ಲೇ ಕನ್ನಡಿಗರೂ 'ಪುಷ್ಪ-2' ಬಗ್ಗೆ, ದಬ್ಬಾಕೊಂಡ ಪುಷ್ಪ: ಅಲ್ಲು ಅರ್ಜುನನ ಖೇಲ್ ಖತಂ, ಸುಕುಮಾರನ ನಾಟಕ್ ಬಂದ್ ಅಂತಾ...

ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹತ್ತಿರ ಹತ್ತಿರ 1 ಶತಮಾನ, ಅಂದ್ರೆ 100 ವರ್ಷಗಳ ಇತಿಹಾಸ ಇದೆ. ಇಂತಹ ಸಿನಿಮಾ ಇಂಡಸ್ಟ್ರಿಯ ಬಗ್ಗೆ ಮಾತನಾಡಿದ್ದ ಯಾರಿಗೇ ಆದರೂ ಕನ್ನಡಿಗರು ಪಾಠ ಕಲಿಸದೆ ಬಿಟ್ಟಿಲ್ಲ. ಅದರಲ್ಲೂ ಕನ್ನಡ ಸಿನಿಮಾ ಇಂಡಸ್ಟ್ರಿಯ ದೊಡ್ಡ ಹಿಟ್ ಸಿನಿಮಾ 'ಕೆಜಿಎಫ್' ಸಿನಿಮಾ ಸರಣಿಗೆ, 'ಪುಷ್ಪ' ತಂಡದ ಕಾರ್ಯಕ್ರಮದ ವೇಳೆ ಅವಮಾನ ಮಾಡಿ ತಪ್ಪು ಮಾಡಿದ್ದ ಗಂಭೀರ ಆರೋಪ ಕೇಳಿ ಬಂದಿತ್ತು.
'ಪುಷ್ಪ-2' ಮಕಾಡೆ ಮಲಗಿಬಿಟ್ಟಿದೆ!
ಈ ಆರೋಪ ಬಳಿಕ 'ಪುಷ್ಪ-2' ಈಗ ಮಕಾಡೆ ಮಲಗಿದೆ. ಇದೇ ಸಮಯದಲ್ಲಿ, ದಬ್ಬಾಕೊಂಡ ಪುಷ್ಪ.. ಅಲ್ಲು ಅರ್ಜುನನ ಖೇಲ್ ಖತಂ, ಸುಕುಮಾರನ ನಾಟಕ್ ಬಂದ್ ಅಂತಾ ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ & ಕಮೆಂಟ್ ಹಾಕುತ್ತಿದ್ದಾರೆ. ಹಾಗೇ ಈ ಸೋಲಿನ ಬಗ್ಗೆ ಸಾಕಷ್ಟು ಪ್ರೇಕ್ಷಕರು ವಿಮರ್ಶೆ ಮಾಡುತ್ತಿದ್ದು, ಅತಿಯಾದ ಆತ್ಮವಿಶ್ವಾಸದ ಪರಿಣಾಮ 'ಪುಷ್ಪ-2' ಸಿನಿಮಾ ಸೋತು ಹೋಯ್ತಾ? ಕಥೆಯಲ್ಲೇ ಎಡವಟ್ಟು ಆಯ್ತಾ? ಅನಾವಶ್ಯಕವಾಗಿ ಬಿಲ್ಡಪ್ ಕೊಟ್ಟು ಸಿನಿಮಾ ಸೋಲಿಸಿದ್ರಾ? ಎಂಬ ಅನುಮಾನಗಳು ಮೂಡಿವೆ.
ಕನ್ನಡಿಗರು ಹೇಳಿದ್ದು ಏನು ಗೊತ್ತೆ?
ಕನ್ನಡ ನೆಲದಲ್ಲಿ ಪರಭಾಷೆ ಸಿನಿಮಾಗಳ ಹಾವಳಿ ಹೆಚ್ಚಾಗಿದೆ ಅಂತಾ ಕನ್ನಡಿಗರು ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಹೀಗಿದ್ದಾಗಲೇ 'ಪುಷ್ಪ-2' ಸಿನಿಮಾಗೆ ದೊಡ್ಡ ಆಘಾತ ಸಿಕ್ಕಿದೆ. 'ಪುಷ್ಪ-2' ಸಿನಿಮಾ ಮಕಾಡೆ ಮಲಗಿದೆ & ನೋಡೋದಕ್ಕೆ ಧಾರಾವಾಹಿ ಅಂದ್ರೆ ಸೀರಿಯಲ್ ಥರ ಇದೆ ಅಂತಾ ಪ್ರೇಕ್ಷಕರು ಬೆಂಗಳೂರು ಸೇರಿದಂತೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಪ್ರತಿಕ್ರಿಯೆ ನೀಡುತ್ತಿದ್ದಾರೆ.












Click it and Unblock the Notifications