Darshan Thoogudeepa: ‘ಡಿ-ಬಾಸ್ ದರ್ಶನ್ ತೂಗುದೀಪ್ ಜೀವನ ಪೂರ್ತಿ ಜೈಲಿನಲ್ಲಿ ಕೊಳೆಯಬೇಕಾಗುತ್ತೆ...’

ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಶಿವಾ ಅಂತಾ ಬಳ್ಳಾರಿ ಜೈಲಿನಿಂದ ಜಾಮೀನನ್ನ ಪಡೆದು, ಕೆಲವು ದಿನಗಳ ಹಿಂದಷ್ಟೇ ಹೊರಗಡೆ ಬಂದಿದ್ದಾರೆ. ಆದರೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಶತ್ರುಗಳು & ವಿರೋಧಿಗಳು ಇದೀಗ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮತ್ತೆ ಯಾವಾಗ ಬಳ್ಳಾರಿ ಜೈಲಿಗೆ ಹೊಗುತ್ತಾರೆ? ಅಂತಾ ಯೋಚನೆ ಮಾಡುತ್ತಿದ್ದಾರೆ. ಇದು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ರಕ್ತ ಕೊತ ಕೊತ ಕುದಿಯುವ ರೀತಿ ಮಾಡುತ್ತಿದೆ....

ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮಾಡದ ತಪ್ಪಿಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ ಎಂಬುದು ಡಿ-ಬಾಸ್ ದರ್ಶನ್ ತೂಗುದೀಪ್ ಫ್ಯಾನ್ಸ್ ಆರೋಪ. ಪರಿಸ್ಥಿತಿ ಹೀಗಿದ್ದಾಗಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಚಿಂತೆಯು ಶುರುವಾಗಿದೆ.

Darshan Thoogudeepa May Be Face The Jagadish Challenge

ಬಾಕ್ಸ್ ಆಫೀಸ್ ಸುಲ್ತಾನ ಅಂತಾನೇ ಬಿರುದು ಪಡೆದು, ಡಿ-ಬಾಸ್ ಅಂತಾನೇ ಅಭಿಮಾನಿಗಳ ಬಾಯಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೀಗ ಒಬ್ಬರು ಮಹತ್ವದ ಚಾಲೆಂಜ್ ಹಾಕಿದ್ದು 'ಡಿ-ಬಾಸ್ ದರ್ಶನ್ ತೂಗುದೀಪ್ ಜೀವನ ಪೂರ್ತಿ ಜೈಲಿನಲ್ಲಿ ಕೊಳೆಯಬೇಕಾಗುತ್ತೆ...' ಮುಂದೆ ಓದಿ...

'ಡಿ-ಬಾಸ್ ದರ್ಶನ್ ತೂಗುದೀಪ್ ಜೀವನ ಪೂರ್ತಿ...'

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾ ಅಂದರೆ ದೊಡ್ಡ ಕ್ರೇಜ್ ಇರುತ್ತೆ & ಅಭಿಮಾನಿಗಳು ಹಲವು ವರ್ಷಗಳ ಕಾಲ ಕಾದು ಕೂತು ಸಿನಿಮಾ ನೋಡುತ್ತಾರೆ ಕೂಡ. ಹೀಗಿದ್ದಾಗಲೇ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲು & ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬಂದಿದ್ದಾರೆ.

ಹೀಗಾಗಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹಲವು ಸಿನಿಮಾಗಳಿಗೆ ಅಡ್ಡಿಯಾಗುತ್ತಿದೆ. ಈ ಸಮಯದಲ್ಲೇ, 'ಡಿ-ಬಾಸ್ ದರ್ಶನ್ ತೂಗುದೀಪ್ ಜೀವನ ಪೂರ್ತಿ ಜೈಲಲ್ಲಿ ಕೊಳೆಯುವ ರೀತಿ ಆಗುತ್ತೆ' ಅಂತಾ ಚಾಲೆಂಜ್ ಹಾಕಲಾಗಿದೆ. ಇಂತಹ ಚಾಲೆಂಜ್ ಹಾಕಿರುವುದು ಬೇರೆ ಯಾರೂ ಅಲ್ಲ, ಹಲವು ದಿನಗಳಿಂದ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ಜೊತೆಗೆ ನೇರವಾಗಿ ಯುದ್ಧಕ್ಕೆ ಇಳಿದಿರುವ ಕನ್ನಡಿಗ ಲಾಯರ್ ಜಗದೀಶ್ ಅವರು.

ಲಾಯರ್ ಜಗದೀಶ್ ಅವರು ಹೇಳಿದ್ದೇನು?

ಅಂದಹಾಗೆ ಲಾಯರ್ ಜಗದೀಶ್ ಅವರು ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ & ಅವರ ಅಭಿಮಾನಿಗಳಿಗೆ ಚಾಲೆಂಜ್ ಹಾಕಿದ್ದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಜೀವನ ಪೂರ್ತಿ ಜೈಲಿನಲ್ಲಿ ಕೊಳೆಯುವ ಪರಿಸ್ಥಿತಿ ಬರಲಿದೆ ಅಂತಾ ಹೇಳಿದ್ದಾರೆ. ಈ ವಿಡಿಯೋ ಇದೀಗ ಫುಲ್ ವೈರಲ್ ಆಗುತ್ತಿದ್ದು, ಮತ್ತೊಮ್ಮೆ ಲಾಯರ್ ಜಗದೀಶ್ ಅವರು & ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ನಡುವೆ ಫೈಟಿಂಗ್ ಶುರುವಾಗಿದೆ.

ಒಟ್ನಲ್ಲಿ ಇದು ದೊಡ್ಡ ಮಟ್ಟಿಗೆ ತಿರುವು ಪಡೆಯುತ್ತಿದ್ದು, ಜಗಳ ಕೂಡ ಜಾಸ್ತಿ ಆಗುತ್ತಿದೆ. ಅಲ್ಲದೆ ಒಂದು ಕಡೆ ಲಾಯರ್ ಜಗದೀಶ್ ಪರವಾಗಿ ಒಂದಷ್ಟು ಜನಗಳು ನಿಂತರೆ, ಲಾಯರ್ ಜಗದೀಶ್ ವಿರುದ್ಧ ಇನ್ನೊಂದಷ್ಟು ಜನರು ಮಾತನಾಡುತ್ತಿದ್ದಾರೆ. ಹೀಗಾಗಿ ಕನ್ನಡ ಸಿನಿಮಾ ಇಂಡಸ್ಟ್ರಿ ಇದೀಗ ಜಗಳದ ಗೂಡಾಗುತ್ತಿದೆ ಅಂತಾ ಕನ್ನಡ ಸಿನಿಮಾ ಅಭಿಮಾನಿಗಳು ಬೇಸರ ಹೊರ ಹಾಕುತ್ತಿದ್ದಾರೆ.

ದರ್ಶನ್ ತೂಗುದೀಪ್ ಅವರ ಬೇಲ್ ಕ್ಯಾನ್ಸಲ್?

ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹವಾ ಜೋರಾಗಿದ್ದು, ಬಳ್ಳಾರಿ ಜೈಲಿನಿಂದ ಹೊರ ಬಂದು ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಬೆನ್ನು ಮೂಳೆಯಲ್ಲಿ ಸಮಸ್ಯೆ ಇರುವ ಕಾರಣಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಬೆಂಗಳೂರಿನ ಬಹುದೊಡ್ಡ ಖಾಸಗಿ ಆಸ್ಪತ್ರೆಯಲ್ಲಿ ಐಷಾರಾಮಿ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ಸಮಯದಲ್ಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಹೊಸ ಟೆನ್ಷನ್ ಶುರುವಾಗಿದ್ದು, ದರ್ಶನ್ ತೂಗುದೀಪ್ ಜಾಮೀನು ಅಂದ್ರೆ ಬೇಲ್ ಕ್ಯಾನ್ಸಲ್ ಆಗುತ್ತಾ? ಎಂಬ ಪ್ರಶ್ನೆ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+