5,00,00,000 ರೂಪಾಯಿ ರೇಣುಕಾಸ್ವಾಮಿ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಲು ಮಹತ್ವದ... Darshan Thoogudeepa
ಕಲಿಯುಗದ ಕರ್ಣ... ಕಲಿಯುಗದ ದಾನಶೂರ... ಲಕ್ಷಾಂತರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಾ ಇರುವ ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್... ಹಿಂಗೆ ಕೋಟಿ ಕೋಟಿ ಅಭಿಮಾನಿಗಳು ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಗ್ಗೆ ಎದೆ ತಟ್ಟಿಕೊಂಡು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅದರಲ್ಲೂ ಈ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ ಅತಿದೊಡ್ಡ ದಾನಿ ಅಂದ್ರೆ ಅದು ಡಿ-ಬಾಸ್ ದರ್ಶನ್ ತೂಗುದೀಪ್, ಅಂತಾ ಕೂಡ ಅಭಿಮಾನಿಗಳು ಹೇಳುತ್ತಾರೆ. ಹೀಗಿದ್ದಾಗಲೇ, 5,00,00,000 ರೂಪಾಯಿ ರೇಣುಕಾಸ್ವಾಮಿ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರ ಕೊಡಲು...
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ತಂದೆ ಕೂಡ ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ನಟರಾಗಿದ್ದರು. ಅಂದಹಾಗೆ ಡಿ-ಬಾಸ್ ದರ್ಶನ್ ತೂಗುದೀಪ್ ಕಳೆದ 25 ವರ್ಷಗಳಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಸಾಮ್ರಾಜ್ಯ ಕಟ್ಟಿಕೊಂಡು, ಕನ್ನಡ ಸಿನಿಮಾ ಲೋಕದಲ್ಲಿ ನಕ್ಷತ್ರ ರೀತಿ ಮಿಂಚುತ್ತಿದ್ದಾರೆ ಅಂತಾ ಅವರ ಕೋಟಿ ಕೋಟಿ ಅಭಿಮಾನಿಗಳು ಖುಷಿ ಖುಷಿಯಿಂದ ಹೇಳುತ್ತಾರೆ. ಈ ರೀತಿ ನಟ ದರ್ಶನ್ ತೂಗುದೀಪ್ ಅವರ ಬೆನ್ನಿಗೆ ನಿಂತು ಹಾರೈಸುತ್ತಾರೆ ಅಭಿಮಾನಿಗಳು. ಆದರೆ ಇಂತಹ ನಟನಿಗೆ ಈಗ ಒಂದಾದ ನಂತರ ಒಂದು ಆಘಾತ ಎದುರಾಗುತ್ತಿದ್ದು, ಮತ್ತೊಮ್ಮೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಜೈಲಿಗೆ ಹೋಗುತ್ತಾರಾ? ಅಂತಾ ಕೂಡ ದೊಡ್ಡ ಚರ್ಚೆ ಜೊತೆಗೆ ಸಂಚಲನ ಸೃಷ್ಟಿಯಾಗಿತ್ತು. ಇಂತಹ ಸಮಯದಲ್ಲೇ...

5,00,00,000 ರೂಪಾಯಿ ರೇಣುಕಾಸ್ವಾಮಿ ಕುಟುಂಬಕ್ಕೆ...
ಹೌದು ಡಿ-ಬಾಸ್ ದರ್ಶನ್ ತೂಗುದೀಪ್ 1,00,00,00,000 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಮಾಡಿದ್ದಾರೆ ಅನ್ನೋ ಮಾತು & ಚರ್ಚೆ ಪದೇ ಪದೇ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಾ ಇರುತ್ತದೆ. ಆದರೆ, ಈ ಬಗ್ಗೆ ಅಂದ್ರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆಸ್ತಿ ಬಗ್ಗೆ ಅಧಿಕೃತ ಹೇಳಿಕೆ & ಮಾಹಿತಿ ಇನ್ನೂ ಸಿಕ್ಕಿಲ್ಲ. ಹೀಗಿದ್ದಾಗಲೇ ಡೆವಿಲ್ ಸಿನಿಮಾ 10,00,00,00,000 ರೂಪಾಯಿ ಸಂಪಾದನೆ ಮಾಡುತ್ತೆ ಅಂತಾ ಅಭಿಮಾನಿಗಳು ಹೇಳುತ್ತಿದ್ದಾರೆ. ಹೀಗಿದ್ದಾಗಲೇ, 5,00,00,000 ರೂಪಾಯಿ ರೇಣುಕಾಸ್ವಾಮಿ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರ ಕೊಡಲು...
5,00,00,000 ರೂಪಾಯಿ ಪರಿಹಾರ ಘೋಷಿಸಲು...
ಯೆಸ್, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಇದೀಗ ನಟಿ ರಮ್ಯಾ ವಿಚಾರದಲ್ಲಿ ಭಾರಿ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಟ್ಟು 43 ಜನರ ವಿರುದ್ಧ ಇದೀಗ ನಟಿ ರಮ್ಯಾ ಅವರು ಪೊಲೀಸರಿಗೆ ದೂರು ನೀಡಿರುವ ಕಾರಣಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಒಬ್ಬೊಬ್ಬರಾಗಿ ಈ ಸಮಯದಲ್ಲಿ ಅರೆಸ್ಟ್ ಆಗಿ ಜೈಲು ಸೇರುತ್ತಿದ್ದಾರೆ. ಆದರೆ ಇದೇ ವಿಚಾರದ ಬಗ್ಗೆ ಇದೀಗ ದೊಡ್ಡ ಚರ್ಚೆ ನಡೆಯುತ್ತಿದ್ದು, ಹಿಂಗೆಲ್ಲಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳನ್ನ ಟಾರ್ಗೆಟ್ ಮಾಡುವ ಬದಲು ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡಿಸಿ ಅಂತಾ ನಟಿ ರಮ್ಯಾಗೆ ಡಿ-ಬಾಸ್ ಫ್ಯಾನ್ಸ್ ಈಗ ಸವಾಲು ಹಾಕುತ್ತಿದ್ದಾರೆ. ನಿಮಗೆ ಶಕ್ತಿ ಇದ್ದರೆ, 5,00,00,000 ರೂಪಾಯಿ ರೇಣುಕಾಸ್ವಾಮಿ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಲು ಮಹತ್ವದ ಆದೇಶ ಹೊರಡಿಸಲು ಒತ್ತಾಯ ಮಾಡಿ ನೋಡೋಣ... ಅಂತಾ ನಟಿ ರಮ್ಯಾಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸವಾಲು ಹಾಕಲಾಗುತ್ತಿದೆ.
ಶುಕ್ರವಾರ ಹೊರ ಬೀಳಲಿದೆಯಾ ತೀರ್ಪು?
ಕನ್ನಡ ಸಿನಿಮಾ ರಂಗದ ಚಾಲೆಂಜಿಂಗ್ ಸ್ಟಾರ್ & ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಇದೇ ಆಗಸ್ಟ್ 8 ಶುಕ್ರವಾರ ಭವಿಷ್ಯ ನಿರ್ಧಾರ ಮಾಡುವ ದಿನವಾಗಲಿದೆ. ಯಾಕಂದ್ರೆ ಆಗಸ್ಟ್ 8 ಶುಕ್ರವಾರ ಮಾನ್ಯ ಸುಪ್ರೀಂ ಕೋರ್ಟ್ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ತೂಗುದೀಪ್ ಅವರಿಗೆ ನೀಡಿದ ಜಾಮೀನು ಕುರಿತು ಮಹತ್ವದ ತೀರ್ಪು ಪ್ರಕಟಿಸುವ ನಿರೀಕ್ಷೆ ಇದೆ. ಬೆಂಗಳೂರು ಪೊಲೀಸರು ಸಲ್ಲಿಸಿದ ಮಹತ್ವದ ಅರ್ಜಿ ವಿಚಾರಣೆ ನಡೆಸಿರುವ ದೇಶದ ಅತ್ಯುನ್ನತ ನ್ಯಾಯಾಲಯವು, ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಇದೀಗ ನಟ ದರ್ಶನ್ ತೂಗುದೀಪ್ ಅವರೂ ಸೇರಿದಂತೆ ಪವಿತ್ರಾ ಗೌಡ ಹಾಗೇ ಇತರ ಆರೋಪಿಗಳ ಜಾಮೀನು ರದ್ದು ಮನವಿ ಅರ್ಜಿ ಬಗ್ಗೆ ಭಾರಿ ಮಹತ್ವದ ತೀರ್ಪು ಕಾಯ್ದಿರಿಸಿದೆ. ಹೀಗಾಗಿಯೇ ಆಗಸ್ಟ್ 8 ಶುಕ್ರವಾರ ದರ್ಶನ್ ತೂಗುದೀಪ್ ಅವರ ಭವಿಷ್ಯ ನಿರ್ಧಾರ ಆಗಲಿದೆ ಎನ್ನಲಾಗುತ್ತಿದೆ, ಈಗಾಗಲೇ ಹಲವು ದೇವಾಲಯಗಳಿಗೆ ದರ್ಶನ್ ತೂಗುದೀಪ್ ಅವರು ಕುಟುಂಬ ಸಮೇತ ಭೇಟಿ ನೀಡುತ್ತಿದ್ದಾರೆ.












Click it and Unblock the Notifications