Bollywood: ಬಾಲಿವುಡ್ ನಟ ಗೋವಿಂದನಿಗೆ ಬಿದ್ದೇ ಬಿಡ್ತು ಗುಂಡು: ಐಸಿಯುನಲ್ಲಿ..
ರಜನಿಕಾಂತ್ ಅವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ಸೇರಿದ ಹಿನ್ನೆಲೆಯಲ್ಲಿ ಸಿನಿಮಾ ರಂಗದಲ್ಲಿ ಆತಂಕ ಮನೆ ಮಾಡಿದ್ದರೆ, ಮತ್ತೊಂದು ಕಡೆ ಬಾಲಿವುಡ್ ಕೂಡ ಇಂದು ಶೇಕ್ ಆಗಿದೆ. ಯಾಕಂದ್ರೆ ದಿಢೀರ್ ಅಂತಾ ಬಾಲಿವುಡ್ ಅಂಗಳದಿಂದ ಒಂದು ಸುದ್ದಿ ಈಗ ಹೊರ ಬಿದ್ದಿದ್ದು, ಅಭಿಮಾನಿಗಳು ಅತಂಕದಲ್ಲಿ ಮೊಬೈಲ್ ತೆಗೆದು ಬ್ರೌಸ್ ಮಾಡುವ ಪರಿಸ್ಥಿತಿಯೇ ನಿರ್ಮಾಣ ಆಗಿದೆ. ಅಂದಹಾಗೆ, ಬಾಲಿವುಡ್ ನಟ ಗೋವಿಂದಗೆ ಗುಂಡು ಬಿದ್ದಿದ್ದು, ಇದೀಗ ಐಸಿಯುನಲ್ಲಿ...
ಎಂದೆಂದೂ ನಿನ್ನನು ಮರೆತು ಬದುಕಿರಲಾರೆ.. ಅಂತಾ ಕನ್ನಡಿಗರ ಹಾಡನ್ನು ಹಾಡುತ್ತಾ, ಕನ್ನಡ ಸಿನಿಮಾ ಪ್ರಿಯರ ಮನಸ್ಸು ಗೆದ್ದಿದ್ದ ನಟ ಗೋವಿಂದ ಅವರ ಅಭಿಮಾನಿಗಳಿಗೆ ಈ ದಿನ ದೊಡ್ಡ ಆಘಾತ ಎದುರಾಗಿದೆ. ಅಂದಹಾಗೆ ಕೂಲಿ ನಂ 1, ಸಾಜನ್ ಚಲೇ ಸಸುರಾಲ್, 'ರಾಜಾ ಬಾಬು', 'ರಜನಿ', 'ಪಾರ್ಟ್ನರ್', 'ಹಸೀನಾ ಮಾನ್ ಜಾಯೇಗಿ' ರೀತಿಯ ಬ್ಲಾಕ್ ಬಸ್ಟರ್ ಸಿನಿಮಾ ನೀಡಿರುವ ನಟ ಗೋವಿಂದ ಅವರಿಗೆ ಇಂದು ಗುಂಡು ತಗುಲಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಅಷ್ಟಕ್ಕು ಬಾಲಿವುಡ್ ನಟ ಗೋವಿಂದಗೆ ಗುಂಡು ಬಿದ್ದಿದ್ದು, ಇದೀಗ ಐಸಿಯುನಲ್ಲಿ...

ಐಯ್ಯಯ್ಯೋ ಹಿಂಗೆಲ್ಲಾ ಆಗೋಯ್ತಾ?
ಹೌದು, ತಮ್ಮ ಕಾಮಿಡಿ ಮೂಲವೇ ನಟ ಗೋವಿಂದ ಅವರು ಕೋಟಿ ಕೋಟಿ ಅಭಿಮಾನಿ ಬಳಗವನ್ನು ಸಂಪಾದನೆ ಮಾಡಿಕೊಂಡಿದ್ದಾರೆ. ಇಂತಿಪ್ಪ ನಟ ಗೋವಿಂದ ಅವರಿಗೆ ಇಂದು ಗುಂಡು ತಗುಲಿದೆ. ಗೋವಿಂದ ಅವರ ಬಳಿ ಇರುವ ಲೈಸೆನ್ಸ್ಡ್ ರಿವಾಲ್ವರ್ನಿಂದ ಅಚಾನಕ್ ಆಗಿ ಗುಂಡು ಹಾರಿ ಕಾಲಿಗೆ ತಗುಲಿಬಿಟ್ಟಿದೆ. ಹೀಗಾಗಿ ಕೂಡಲೇ ನಟ ಗೋವಿಂದ ಅವರನ್ನ ಈಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ 4.45ಕ್ಕೆ ಈ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಆತಂಕ ಮನೆ ಮಾಡಿದೆ.
ಗೋವಿಂದ 90ರ ದಶಕದ ಸೂಪರ್ ಸ್ಟಾರ್
90ರ ದಶಕದಲ್ಲಿ ಗೋವಿಂದ ಅಂದ್ರೆ ಬಾಲಿವುಡ್ ಟು ಸ್ಯಾಂಡಲ್ವುಡ್ ಒಂದು ದೊಡ್ಡ ಕ್ರೇಜ್ ಇತ್ತು. ಹೀಗೆ 90ರ ದಶಕದಲ್ಲಿ ನಟ ಗೋವಿಂದ ಅವರು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳ ರಾಶಿಯನ್ನೇ ನೀಡಿದ್ದರು. ಹೀಗಿದ್ದಾಗ 2007ರ ನಂತರ ಗೋವಿಂದ ನಟಿಸಿದ ಸಿನಿಮಾಗಳೆಲ್ಲಾ ಬಾಕ್ಸ್ ಆಫಿಸ್ನಲ್ಲಿ ತೋಪೆದ್ದು ಹೋದವು. ಇದೇ ಕಾರಣಕ್ಕೆ ನಟ ಗೋವಿಂದ ಅವರು ಮುಂದೆ ರಾಜಕೀಯ ಅಖಾಡಕ್ಕೆ ನುಗ್ಗಿದ್ದರು.
ಹೀಗಿದ್ದಾಗಲೇ, ಇಂದು ಕೊಲ್ಕತ್ತಾಗೆ ಹೊರಡಲು ಸಜ್ಜಾಗಿದ್ದ ನಟ ಗೋವಿಂದ ಅವರಿಗೆ ಆಕಸ್ಮಿಕ ಅವರದ್ದೇ ರಿವಾಲ್ವರ್ನಿಂದ ಗುಂಡು ಹಾರಿ ತಗುಲಿಬಿಟ್ಟಿದೆ ಎನ್ನಲಾಗಿದೆ. ತಕ್ಷಣವೇ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ನಟ ಗೋವಿಂದ ಅವರ ಆರೋಗ್ಯ ಸ್ಥಿರವಾಗಿದೆ. ಗೋವಿಂದ ಅವರ ಮೊಣಕಾಲಿನ ಸಮೀಪ ಗುಂಡು ತಗುಲಿದೆ. ತಜ್ಞ ವೈದ್ಯರಿಂದ ಇದೀಗ ಚಿಕಿತ್ಸೆ ನಡೆಯುತ್ತಿದ್ದು, ಶೀಘ್ರದಲ್ಲೇ ಗುಣಮುಖರಾಗುವ ನಿರೀಕ್ಷೆ ಇದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ












Click it and Unblock the Notifications