Krishnam Pranaya Sakhi: ಹವಾ ಸೃಷ್ಟಿಸಿದ 'ದ್ವಾಪರ ದಾಟುತಾ' ಹಾಡು, ಎಲ್ಲೆಲ್ಲೂ ಹಾಡಿನ ಮೋಡಿ
ಬೆಂಗಳೂರು, ಜುಲೈ 30: ಕನ್ನಡ ಚಿತ್ರರಂಗದಲ್ಲಿನ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದ ಮಧ್ಯೆ ಏಕ ಭಾಷೆಯಲ್ಲಿ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ 'ಕೃಷ್ಣಂ ಪ್ರಣಯ ಸಖಿ' (Krishnam Pranaya Sakhi) ಇದೇ ಆಗಸ್ಟ್ 15ರಂದು ತೆರೆಗೆ ಬರಲಿದೆ. ಇದಕ್ಕು ಮೊದಲೇ ಈ ಸಿನಿಮಾ ಹಾಡು ಸಖತ್ ಹವಾ ಸೃಷ್ಟಿ ಮಾಡುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ 'ಕೃಷ್ಣಂ ಪ್ರಣಯ ಸಖಿ' ಸಿನಿಮಾದ 'ದ್ವಾಪರಾ ದಾಟುತ' ಹಲಚಲ್ ಎಬ್ಬಿಸಿದೆ. ಅನೇಕರು ರೀಲ್ ಮಾಡಿ ಅಪ್ಲೋಡ್ ಮಾಡುತ್ತಿದ್ದಾರೆ. ಹೊಸ ಹೊಸ ವಿಡಿಯೋಗಳಲ್ಲಿ ಈ ಹಾಡಿಗೆ ಅಗ್ರಸ್ಥಾನ ಧಕ್ಕುತ್ತಿದೆ. ಆಮಟ್ಟಿನಗೆ ಜನರಿಗೆ ಮೋಡಿ ಮಾಡಿದೆ. ಇನ್ಸ್ಸ್ಟಾಗ್ರಾಮ್ ನಲ್ಲಿ ಈ ಹಾಡು ಟ್ರೆಂಡಿಂಗ್ ನಲ್ಲಿದೆ.

ಸೋಷಿಯಲ್ ಮಿಡಿಯಾ ಹೊರತಾಗಿ ಯಾವುದೇ ವೇದಿಕೆಗಳ ಮೇಲೆ ನೋಡಿದರೂ ಈ ಹಾಡಿನ ಗುನು ಗುನು ಶುರುವಾಗಿದೆ. ಅಷ್ಟರ ಮಟ್ಟಿಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಅಭಿನಯಿಸಿರುವ ಸಿನಿಮಾದ ಹಾಡು ಇಷ್ಟವಾಗಿದೆ. ಈ ಹಾಡು ಸಹ ನಟ ಗಣೇಶ್ ಅವರ ಹಿಟ್ ಲಿಸ್ಟ್ಗೆ ಸೇರಿದೆ.
ನಟ ಗಣೇಶ್ ಹಿಟ್ ಲಿಸ್ಟ್ಗೆ ಮತ್ತೊಂದು ಹಾಡು
ನಟ ಗಣೇಶ್ ಅವರ 'ಮುಂಗಾರು ಮಳೆ, ಅರಮನೆ, ಹುಡುಗಾಟ, ಗಾಳಿಪಟ, ಮಳೆಯಲಿ ಜೊತೆಯಲಿ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಹಾಡುಗಳೇ ಹೈಲೈಟ್. ಈ ಹಾಡು ಸಹ ಸಿನಿ ರಸಿಕರನ್ನು ರಂಜಿಸಿ ಹೊಸ ದಾಖಲೆ ಸೃಷ್ಟಿಸುತ್ತಿದೆ. ಯುಟ್ಯೂನ್ನಲ್ಲಿ ಆನಂದ್ ಆಡಿಯೋ ಈ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿದ್ದು, ಅತೀ ಕಡಿಮೆ ಅವಧಿಯಲ್ಲಿ 01 ಮಿಲಿಯನ್ ವೀಕ್ಷಣೆ ಸಮೀಪಿಸಿದೆ.

ಸುಮಧುರ ಹಾಡಿಗೆ ಅಭಿಮಾನಿಗಳು ಫಿದಾ
ಶ್ರೀನಿವಾಸ ರಾಜು ನಿರ್ದೇಶನ ಈ ಸಿನಿಮಾದ 'ದ್ವಾಪರಾ ದಾಟುತ' ಹಾಡಿಗೆ ವಿ.ನಾಗೇಂದ್ರ ಪ್ರಸಾದ್ ಈ ಹಾಡಿಗೆ ಸಾಹಿತ್ಯ ಬರೆದರೆ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇನ್ನೂ 'ಸರಿಗಮಪ' ಶೋ ನಲ್ಲಿ ಹಾಡು ಹಾಡಿದ್ದ ಪಂಜಾಬ್ ರಾಜ್ಯದ ಯುವ ಗಾಯಕ 'ಜಸ್ಕರಣ್ ಸಿಂಗ್' ಅವರು ಹಾಡಿಗೆ ಧ್ವನಿಯಾಗಿದ್ದಾರೆ. ಅವರ ಸುಮಧುರ ಕಂಠಕ್ಕೆ ಗಣೇಶ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಗಣೇಶ್ ಜೊತೆಗೆ ಪರಭಾಷಾ ನಟಿ ಮಾಳ್ವಿಕಾ ನಾಯರ್ ಬಣ್ಣ ಹಚ್ಚಿದ್ದಾರೆ.
ಜನರು ಮೇಲಿಂದ ಮೇಲೆ ಈ ಹಾಡು ಕೇಳುತ್ತಿದ್ದಾರೆ. ಆಗಸ್ಟ್ 15ರಂದು ಫ್ಯಾಮಿಲಿ ಸಮೇತರಾಗಿ ತೆರಳಿ ಸಿನಿಮಾ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications