'ಕೂಲಿ' ಸಿನಿಮಾದಲ್ಲಿ ನಟಿಸಿದ್ದು ದೊಡ್ಡ ತಪ್ಪು ಅಂದ್ರಾ ನಟ ಅಮೀರ್ ಖಾನ್?
ಬಾಲಿವುಡ್ ನಟ ಅಮೀರ್ ಖಾನ್ ಅವರು ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅವರ ಪಾತ್ರದ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಆದರೆ ಕೂಲಿ ಸಿನಿಮಾದಲ್ಲಿ ನಟಿಸಿದ ವಿಚಾರವಾಗಿ ಅಮೀರ್ ಖಾನ್ ಅಸಮಾಧಾನ ಹೊರಹಾಕಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಅಮೀರ್ ಖಾನ್ ಸ್ಪಷ್ಟನೆ ನೀಡಿದ್ದಾರೆ. ಅಮೀರ್ ಕೂಲಿ ಚಿತ್ರ ಹಾಗೂ ತಮ್ಮ ಪಾತ್ರ ನಿರ್ವಹಣೆಯನ್ನು ಟೀಕಿಸಿದ್ದಾರೆ ಎಂಬ ಊಹಾಪೋಹಗಳು ಆನ್ಲೈನ್ನಲ್ಲಿ ಹರದಾಡಿತ್ತು.
ಕೂಲಿ ಬಿಡುಗಡೆಗೂ ಮುನ್ನ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ಒಂದು ಅತಿಥಿ ಪಾತ್ರವನ್ನು ಅಮೀರ್ ಖಾನ್. ಆದರೆ ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು "ತಪ್ಪು" ಎಂದು ಅಮೀರ್ ಸ್ವತಃ ಒಪ್ಪಿಕೊಂಡಿದ್ದಾರೆ. ಅಲ್ಲದೆ ತಮ್ಮ ಪಾತ್ರವನ್ನು ಕೆಟ್ಟದಾಗಿ ಬರೆಯಲಾಗಿದೆ ಎಂದು ಹೇಳಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

'ರಜನಿ ಅವರಿಗಾಗಿ ನಾನು ಅತಿಥಿ ಪಾತ್ರವನ್ನು ಒಪ್ಪಿಕೊಂಡೆ. ನಿಜ ಹೇಳಬೇಕೆಂದರೆ, ನನ್ನ ಪಾತ್ರ ಏನು ಮಾಡಬೇಕೆಂದು ನನಗೆ ಇನ್ನೂ ಅರ್ಥವಾಗುತ್ತಿಲ್ಲ. ನಾನು ಒಳಗೆ ಹೋಗಿ ಒಂದು ಅಥವಾ ಎರಡು ಸಾಲುಗಳನ್ನು ಹೇಳಿ ಕಣ್ಮರೆಯಾದಂತೆ ಭಾಸವಾಯಿತು. ಅದರ ಹಿಂದೆ ನಿಜವಾದ ಉದ್ದೇಶವಿರಲಿಲ್ಲ, ಯಾವುದೇ ಆಲೋಚನೆ ಇರಲಿಲ್ಲ. ಅದನ್ನು ಕೆಟ್ಟದಾಗಿ ಬರೆಯಲಾಗಿತ್ತು' ಎಂದು ಅಮೀರ್ ಖಾನ್ ಹೇಳಿದ್ದಾರೆ ಎನ್ನಲಾಗಿದೆ.
'ನಾನು ಕ್ರಿಯೇಟಿವ್ ಆಗಿ ತೊಡಗಿಸಿಕೊಂಡಿರಲಿಲ್ಲ. ಆದ್ದರಿಂದ ಅಂತಿಮ ದೃಶ್ಯಗಳು ಹೇಗೆ ಬರುತ್ತೆ ಅನ್ನೋದು ತಿಳಿದಿರಲಿಲ್ಲ. ಇದು ಕಾಮಿಡಿ ಪ್ರದರ್ಶನವಾಗಿರುತ್ತದೆ ಎಂದು ನಾನು ಭಾವಿಸಿದೆ. ಆದರೆ ಸ್ಪಷ್ಟವಾಗಿ ಅದು ಯಶಸ್ವಿಯಾಗಲಿಲ್ಲ. ಜನರು ಏಕೆ ನಿರಾಶೆಗೊಂಡರು ಎಂದು ನನಗೆ ಆ ಮೇಲೆ ಅರ್ಥವಾಯಿತು. ಆ ದೃಶ್ಯವು ಕೆಲಸ ಮಾಡಲಿಲ್ಲ. ಈ ತಪ್ಪಿನಿಂದ ಪಾಠ ಕಲಿತಿದ್ದೇನೆ, ಭವಿಷ್ಯದಲ್ಲಿ ನಾನು ತುಂಬಾ ಜಾಗರೂಕರಾಗಿರುತ್ತೇನೆ' ಎಂದಿದ್ದಾರಂತೆ.
'ನೆಗೆಟಿವ್ ಕಾಮೆಂಟ್ ಮಾಡಿಲ್ಲ'
ಕೂಲಿ ಚಿತ್ರದಲ್ಲಿನ ತಮ್ಮ ಅತಿಥಿ ಪಾತ್ರಕ್ಕೆ ಅಮೀರ್ ಖಾನ್ ಬೇಸರ ಹಂಚಿಕೊಂಡಿದ್ದಾರೆ ಎಂಬ ವದಂತಿಗಳಿಗೆ ಅವರ ತಂಡವು ಸ್ಪಷ್ಟೀಕರಣ ನೀಡಿದೆ. 'ಖಾನ್ ಅವರು ಚಿತ್ರದ ಬಗ್ಗೆ ಯಾವುದೇ ನೆಗೆಟಿವ್ ಕಾಮೆಂಟ್ ಮಾಡಿಲ್ಲ ಎಂದು ನಿರಾಕರಿಸಿದೆ. ರಜನಿಕಾಂತ್, ಲೋಕೇಶ್ ಮತ್ತು ಇಡೀ ಕೂಲಿ ತಂಡದ ಬಗ್ಗೆ ಅಮೀರ್ ಅವರಿಗೆ ಅಪಾರ ಗೌರವವಿದೆ' ಎಂದು ಹೇಳಿದೆ.
'ಅಮೀರ್ ಖಾನ್ ಅವರು ಕೂಲಿ ಚಿತ್ರದ ಬಗ್ಗೆ ಯಾವುದೇ ಸಂದರ್ಶನ ನೀಡಿಲ್ಲ. ಯಾವುದೇ ನೆಗೆಟಿವ್ ಕಾಮೆಂಟ್ಗಳನ್ನು ಮಾಡಿಲ್ಲ. ರಜನಿಕಾಂತ್, ಲೋಕೇಶ್ ಮತ್ತು ವಾಸ್ತವವಾಗಿ ಕೂಲಿ ಚಿತ್ರದ ಸಂಪೂರ್ಣ ತಂಡದ ಬಗ್ಗೆ ಅಮೀರ್ ಖಾನ್ ಅವರಿಗೆ ಹೆಚ್ಚು ಗೌರವವಿದೆ. ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ 500 ಕೋಟಿಗೂ ಹೆಚ್ಚು ಗಳಿಸಿದ್ದು, ಇದೇ ನಿಜ ಏನೆಂದು ಹೇಳುತ್ತದೆ' ಎಂದು ಅಮೀರ್ ಖಾನ್ ಅವರ ತಂಡ ಸ್ಪಷ್ಟನೆ ನೀಡಿದೆ. ಸೋಷಿಯಲ್ ಮೀಡಿಯಾದಲ್ಲಿ ಅಮೀರ್ ಖಾನ್ ಮಾತನಾಡಿರುವ ವಿಡಿಯೋಗಳು ಕೂಡ ವೈರಲ್ ಆಗಿವೆ.
-
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ












Click it and Unblock the Notifications