ಹುಕ್ಕೇರಿ ಕ್ಷೇತ್ರ ಪರಿಚಯ : ಮಾಜಿ ಸಚಿವರುಗಳ ನಡುವೆ ಸಮರ
ಶಾಸಕ ವಿಶ್ವನಾಥ್ ಮಲ್ಲಪ್ಪ ಕತ್ತಿ ಅವರ ಅಕಾಲಿಕ ಮರಣ(1985)ದ ನಂತರ ಅವರ ಪುತ್ರ ಉಮೇಶ್ ಕತ್ತಿ ಅವರು ಚುನಾವಣಾ ರಾಜಕೀಯ ಪ್ರವೇಶಿಸಿ, ವಿವಿಧ ಪಕ್ಷಗಳಿಂದ ಭಾರಿ ಅಂತರದಿಂದ ಗೆದ್ದಿದ್ದಾರೆ.
ಜನತಾದಳ, ಜೆಡಿಎಸ್ ನಿಂದ ಗೆದ್ದು ನಂತರ 2008ರಲ್ಲಿ ಆಪರೇಷನ್ ಕಮಲದ ಫಲವಾಗಿ ರಾಜೀನಾಮೆ ನೀಡಿದ ಕತ್ತಿ ಮತ್ತೊಮ್ಮೆ ಬಿಜೆಪಿಯಿಂದ ಸ್ಪರ್ಧಿಸಿ ಭಾರಿ ಅಂತರದಿಂದ ಗೆದ್ದಿದ್ದರು. ಸಂಕೇಶ್ವರ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದ ಮಾಜಿ ಸಚಿವ ಎ.ಬಿ ಪಾಟೀಲ್ ಅವರು 2018ರಲ್ಲಿ ಹುಕ್ಕೇರಿಯಿಂದ ಸ್ಪರ್ಧಿಸಿ ಸೋಲು ಕಂಡರು.
ಈ ಮತ್ತೊಮ್ಮೆ ಮಾಜಿ ಸಚಿವರಾದ ಉಮೇಶ್ ಕತ್ತಿ ಹಾಗೂ ಎ.ಬಿ ಪಾಟೀಲರ ನಡುವೆ ಪೈಪೋಟಿ ಕಾಣಬಹುದು. ಕತ್ತಿ ಅವರ ಬೆಂಬಲಕ್ಕೆ ಅವರ ಒಡೆತನದ ಸಕ್ಕರೆ ಕಾರ್ಖಾನೆ, ಸಹಕಾರಿ ಸಂಸ್ಥೆಗಳಿದ್ದರೆ, ಎ.ಬಿ ಪಾಟೀಲರ ಬೆಂಬಲಕ್ಕೆ ಶಿಕ್ಷಣ ಹಾಗೂ ಸಹಕಾರಿ ಸಂಘಗಳಿವೆ.

ಲಿಂಗಾಯತ, ಮುಸ್ಲಿಮ್, ಮರಾಠ, ಎಸ್ ಸಿ, ಎಸ್ಟಿ ಮತಗಳೇ ಇಲ್ಲಿ ನಿರ್ಣಾಯಕ. ಈ ಬಾರಿ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಪ್ರತ್ಯೇಕ ರಾಜ್ಯಕ್ಕೆ ಸಿಎಂ ಆಗುವ ಕನಸು ಹೊತ್ತುಕೊಂಡಿದ್ದಾರೆ ಉಮೇಶ್ ಕತ್ತಿ.
2013ರ ಫಲಿತಾಂಶ:
ಹುಕ್ಕೇರಿಯಲ್ಲಿ 2013ರಲ್ಲಿ ಒಟ್ಟು 10 ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಒಬ್ಬರ ನಾಮಪತ್ರ ತಿರಸ್ಕೃತಗೊಂಡಿತ್ತು. 2 ನಾಮಪತ್ರ ಹಿಂಪಡೆದಿದ್ದರು. 7 ಮಂದಿ ಸ್ಪರ್ಧಿಗಳ ಪೈಕಿ 5 ಮಂದಿ ಠೇವಣಿ ಕಳೆದುಕೊಂಡಿದ್ದರು.
ಒಟ್ಟು ಶೇ 75.87 ರಷ್ಟು ಮತದಾನವಾಗಿದ್ದು, 132961 ಮತಗಳ ಪೈಕಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಉಮೇಶ್ ವಿಶ್ವನಾಥ್ ಕತ್ತಿ ಅವರು 81810 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದರು. ಕಾಂಗ್ರೆಸ್ ಸ್ಪರ್ಧಿ ರವಿ ಬಸವರಾಜ್ ಕರಾಳೆ ಅವರು 24484 ಮತಗಳನ್ನು ಗಳಿಸಿ, ಸೋಲು ಕಂಡರು. 57326ಮತಗಳ (ಶೇ 43.11) ಅಂತರದಿಂದ ಉಮೇಶ್ ಕತ್ತಿ ಜಯ ದಾಖಲಿಸಿದ್ದರು.
ಈ ಬಾರಿ ಕಣದಲ್ಲಿ ಬಿಜೆಪಿಯಿಂದ ಉಮೇಶ್ ಕತ್ತಿ, ಕಾಂಗ್ರೆಸ್ಸಿನಿಂದ ಎ.ಬಿ ಪಾಟೀಲ್ ಹಾಗೂ ಜೆಡಿಎಸ್ ನಿಂದ ಎಂಬಿ ಪಾಟೀಲ ಸ್ಪರ್ಧಿಸುತ್ತಿದ್ದಾರೆ.
ಕಳೆದ ಬಾರಿ ಉಮೇಶ್ ಕತ್ತಿ 81810 ಮತಗಳು (ಶೇ 61.53), ರವಿ ಬಸವರಾಜ್ ಕರಾಳೆ 24484 ಮತಗಳು (ಶೇ 18.41) ಹಾಗೂ ಜೆಡಿಎಸ್ ನ ಬಸವರಾಜ್ ಕಾಶಪ್ಪ ಮಟಗಾರ್ 19501 ಮತಗಳು (ಶೇ 14.67) ಪಡೆದಿದ್ದರು.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications