ಕರಾಳ ವರ್ಷವನ್ನು ಅರಗಿಸಿಕೊಂಡ ಸಂಭ್ರಮ

ಇತಿಹಾಸದ ಪುಟಗಳಿಗೆ ಜಾರಿಹೋಗಲು ಸಜ್ಜಾಗಿರುವ ದುರುಳ 2008 ಅನೇಕ ಉಪಟಳಗಳನ್ನು ನೀಡಿ ಇದೀಗ ಇಲ್ಲಿಂದ ತೊಲಗುವುದಕ್ಕೆ ಹಾಸಿಗೆ ಟ್ರಂಕು ಕಟ್ಟಿಕೊಂಡು ರೆಡಿ ಆಗಿದ್ದಾನೆ. ಕಳೆದ 364 ದಿವಸಗಳಲ್ಲಿ ಆತ ಕೊಟ್ಟ ನಾನಾ ಬಗೆಯ ಹಿಂಸೆಗಳನ್ನು ಸಹಿಸಿಕೊಂಡೂ ಮುಗುಳುನಗೆ ಬೀರಿದವರಿಗೆ ದಟ್ಸ್ ಕನ್ನಡ ಬಳಗದ ಶುಭಾಶಯಗಳು.
ನಷ್ಟವನ್ನು,ದುಃಖವನ್ನು, ಬಂಧುಬಾಂಧವರನ್ನು ಕಳಕೊಂಡ ನೋವುಗಳನ್ನು ಭರಿಸುವುದು ಹೇಗೆ? ಅನುಭವಿಸಿಯೇ ತೀರಬೇಕಾ? ಯಾರೊಬ್ಬರು ಪಕ್ಕದಲ್ಲಿ ಕುಳಿತೋ, ಕೈಯಲ್ಲಿ ಕೈಯಿಟ್ಟೋ, ಕಣ್ಣಲ್ಲಿ ಕಣ್ಣಿಟ್ಟೋ ಸಮಾಧಾನಿಸಿ, ಕಣ್ಣೊರೆಸಲಾರರಾ? ಹೊಸ ಕನಸಿನ ಕಥೆಗಳನ್ನು ಹೇಳಲಾರರಾ?
ಪರಂತು, ಸಂತೋಷ ಪಡುವ ರೀತಿನೀತಿಗಳನ್ನು, ಉಲ್ಲಾಸದ ಕ್ಷಣಗಳನ್ನು ತಮ್ಮದಾಗಿಸಿಕೊಳ್ಳುವ ಮನೋಸ್ಥಿತಿಯನ್ನು ವರ್ಣಿಸುವುದು ನಮಗಂತೂ ಸಾಧ್ಯವಿಲ್ಲ. ಸಂತಸದ ಹಣೆಬರಹವೇ ಹಾಗೆ, ತಿಳಿಯ ಹೇಳಲಾಗದು. ದುಃಖಕ್ಕೆ ಒಂದು ಮುಖವಾದರೆ, ಸಂತೋಷಪಡುವ ಮನಸ್ಸಿಗೆ ನೂರಾರು ಬಾಗಿಲುಗಳು.

ಇವತ್ತು ರಾತ್ರಿ ರಂಗೋಲಿ ಬಿಡಿಸಿ ಆನಂದಿಸುವರೆಷ್ಟೋ, ಏಳು ಬಣ್ಣದ ಬಲೂನುಗಳಿಗೆ ಗಾಳಿ ಊದಿ ನಲಿಯುವವರೆಷ್ಟೋ. ಹೌದು, ಗೋಡೆಯಂತೂ ಹೊಸ ಕ್ಯಾಲೆಂಡರ್ ಸಿದ್ಧಗೊಳ್ಳುತ್ತಿದೆ. ವಾರ ತಿಥಿ ದಿನಾಂಕಗಳನ್ನು ತಪ್ಪದೆ ಎಣಿಸಲು ಟೊಂಕ ಕಟ್ಟಿನಿಂತಿದೆ. ಕಾಲವಂತೂ ಹಿಂದೋಡುವುದಿಲ್ಲವಷ್ಟೆ. ಹಾಗಾದರೆ ಇಂದೇನು? ಮುಂದೇನು?
ಸಾಧ್ಯವಾದರೆ ಕೆಲವು ಒಲವು ನಿಲವುಗಳನ್ನು ನಮ್ಮಷ್ಟಕ್ಕೆ ನಾವೇ ಪರಿಷ್ಕರಣೆಗೆ ಒಡ್ಡಿಕೊಳ್ಳುವ ಸಂಧಿಕಾಲವಿದು ಎಂದುಕೊಳ್ಳೋಣವಾ. ವೈಯಕ್ತಿಕ ಸಾಮ್ರಾಜ್ಯದಲ್ಲಿ, ಸಾಮಾಜಿಕ ಬದುಕಿನ ಸ್ತರಗಳಲ್ಲಿ ಏನೋ ಒಂದು ಬದಲಾವಣೆಯನ್ನು ಆಶಿಸುತ್ತಲೇ ನಿತ್ಯ ಮೌನಕ್ಕೆ ಜಾರುತ್ತಿರುವ ಮನಸ್ಸುಗಳಿಗೆ ಬಯಸಿದ್ದನ್ನು ಬರಮಾಡಿಕೊಳ್ಳುವ ಕ್ಷಣ ಬೇಗ ಬರಲಿ ಎಂಬ ಆಶಾಭಾವನೆ ಇಟ್ಟುಕೊಳ್ಳೋಣ.
ಕಳೆದುಹೋದದ್ದು ಮತ್ತು ದಕ್ಕಿಸಿಕೊಳ್ಳಬೇಕಾದುದನ್ನು ವ್ಯಾಖ್ಯಾನ ಮಾಡುವುದಕ್ಕೆ ಬಿಡುವೇ ಕೊಡದಂಥ ಈ ರಾತ್ರಿ ಇಣುಕಿ ಹೋಗಲಿ. ಕಡೆಯಪಕ್ಷ ಒಬ್ಬ ವ್ಯಕ್ತಿಯ ನೋವನ್ನು ನೀಗಿಸಿ ಅವರ ಜೀವನವನ್ನು ಸಹನೀಯವಾಗಿಸುವ ನಿಟ್ಟಿನಲ್ಲಿ ನಮ್ಮ ಗೊತ್ತು ಗುರಿಗಳು 2009ರಲ್ಲಿ ಕೇಂದ್ರೀಕೃತವಾದರೆ, ಅಷ್ಟು ಸಾಕು.
ದಟ್ಸ್ ಕನ್ನಡ ಓದುಗರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications