ಕಾರ್ಟೂನ್: ನಾಯಕರೇ, ಪ್ರಜೆಗಳ ಬಗ್ಗೆ ಕಾಳಜಿವಹಿಸಿ...
ಅಂತೂ ಚುನಾವಣೆ ಮುಗಿದಿದೆ. ಇಡಿ ದೇಶವೂ ಕಾತರದಿಂದ ಕಾಯುತ್ತಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 12 ರಂದು ಮತದಾನ ನಡೆದಿದೆ. ಹಲವು ಕಾರಣದಿಂದ ಈ ಮತದಾನ ಪ್ರಕ್ರಿಯೆ ಮಹತ್ವದ್ದೆನ್ನಿದೆ.
ತಾಯಿ ಸಾವಿನ ನೋವಲ್ಲೂ ಮಕ್ಕಳು, ಮೊಮ್ಮಕ್ಕಳ ಮತ, ಮತಗಟ್ಟೆಯಲ್ಲಿ ಹೆರಿಗೆ ನೋವು, ಅಂಬುಲೆನ್ಸ್ ನಲ್ಲಿ ಮತಹಾಕಿದವರು, ಮತದಾನಕ್ಕೆ ತೆರಳುತ್ತಿದ್ದಾಗ ಅಪಘಾತ. ಹಕ್ಕು ಚಲಾಯಿಸಿ ಇಹಲೋಕ ತ್ಯಜಿಸಿದರು.... ಇತ್ಯಾದಿ ಸುದ್ದಿಗಳು ಪತ್ರಿಕೆಗಳಲ್ಲಿ ರಾರಾಜಿಸಿವೆ. ಇಷ್ಟೆಲ್ಲ ಕಷ್ಟಪಟ್ಟು ನಿಮ್ಮನ್ನು ಆಯ್ಕೆ ಮಾಡಲು ಪರಿತಪಿಸಿದ ಪ್ರಜೆಗಳ ಬಗ್ಗೆ ಕಾಳಜಿ ವಹಿಸಿ, ಇನ್ನೂ ಪ್ರಜ್ಞಾವಂತರಾಗಿ, ನಿಯತ್ತಾಗಿ ಎಂದು ರಾಜಕಾರಣಿಗಳನ್ನು ಕಾರ್ಟೂನ್ ಮೂಲಕ ಕೇಳಿಕೊಂಡಿದ್ದಾರೆ ಕಾರ್ಟೂನಿಸ್ಟ್ ಶಂಕರ್.

ಕಾಫಿ ಮಾರಿ ದುಡಿಮೆ ಮಾಡುತ್ತಿರುವ ಶಂಕರ್ ಕಾರ್ಟೂನಿಸ್ಟ್ ಅವರಿಗೆ ವ್ಯಂಗ್ಯಚಿತ್ರ ಬರೆಯುವುದು ಪ್ರವೃತ್ತಿ. ವಕ್ರ ರೇಖೆಗಳ ಮೂಲಕವೇ ಸಮಾಜದ ಡೊಂಕನ್ನು, ರಾಜಕಾರಣಿಗಳ ಕೊಂಕನ್ನು ತೋರಿಸುವ ಈ ಅರ್ಥಗರ್ಭಿತ ವ್ಯಂಗ್ಯಚಿತ್ರ ನಿಮಗಾಗಿ ಇಲ್ಲಿದೆ.












Click it and Unblock the Notifications