ರಾಜ್ಯ ಸರಕಾರಕ್ಕೆ ಆತಂಕ ತರಲಿದೆಯೇ ಬಜೆಟ್ ಮಂಡನೆ ಮುಹೂರ್ತ?
Recommended Video

ನಾನು ಮುಖ್ಯಮಂತ್ರಿ ಆಗುವುದಕ್ಕೆ ಆ ದೈವ ಅನುಗ್ರಹವೂ ಕಾರಣ ಎನ್ನುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಜ್ಯೋತಿಷ್ಯದ ರೀತಿ ಬಲ ಸಿಗುತ್ತಿಲ್ಲವೆ? ಗುರುವಾರ ಬಜೆಟ್ ಮಂಡನೆ ಆರಂಭಿಸಿದ ಸಮಯ ಹಲವು ಸುಳಿವುಗಳನ್ನು ನೀಡುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು. ಅಂಥದ್ದು ಆಗಿದ್ದಾದರೂ ಏನು ಅನ್ನೋ ಪ್ರಶ್ನೆ ಮೂಡುವುದು ಸಹಜ.
ಇನ್ನು ಉಡುಪಿ ಮೂಲದ ಜ್ಯೋತಿಷಿಯೊಬ್ಬರು ಕುಮಾರಸ್ವಾಮಿ ಅವರಿಗೆ ಯಾರೋ ಸರಿಯಾಗಿ ದಾರಿ ತಪ್ಪಿಸುತ್ತಿದ್ದಾರೆ ಎಂದೇ ಅಭಿಪ್ರಾಯ ಪಡುತ್ತಾರೆ. ಜುಲೈ ಐದರಂದು ಒಳ್ಳೆ ದಿನ ಅನ್ನೋದರ ಬಗ್ಗೆ ಅನುಮಾನ ಬೇಡ. ಆದರೆ ಬಜೆಟ್ ಮಂಡನೆ ಆರಂಭ ಮಾಡಿದ ಲಗ್ನದ ಬಗ್ಗೆಯೇ ಭಾರೀ ಬೇಸರ ಆಗುತ್ತದೆ ಎನ್ನುತ್ತಾರೆ ಅವರು.
ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಆರಂಭ ಮಾಡಿದ್ದು ಸಿಂಹ ಲಗ್ನದಲ್ಲಿ. ಆ ಲಗ್ನಕ್ಕೆ ಈಗ ಐದನೇ ಮನೆಯಲ್ಲಿ ಶನಿ, ತೃತೀಯದಲ್ಲಿ ಗುರು, ಹನ್ನೆರಡರಲ್ಲಿ ರಾಹು ಇದೆ. ಇದರಿಂದ ಹೇಳಬಹುದಾದದ್ದು ಏನೆಂದರೆ, ಈ ಬಜೆಟ್ ಸರಕಾರದ ಪಾಲಿಗೆ ಭಾರೀ ಆತಂಕವನ್ನು, ಅಲ್ಲೋಲ- ಕಲ್ಲೋಲವನ್ನು ಸೃಷ್ಟಿಸುತ್ತದೆ.

ಸಿಂಹ ಲಗ್ನಕ್ಕೆ ಶನಿ ಚೆನ್ನಾಗಿಲ್ಲ
ಸಿಂಹ ಲಗ್ನಕ್ಕೆ ಪಂಚಮದಲ್ಲಿರುವ ಶನಿ ಯಾವ ಒಳ್ಳೆಯದನ್ನೂ ಮಾಡುವುದಕ್ಕೆ ಬಿಡುವುದಿಲ್ಲ. ಮೊದಲೇ ಇದು ಮೈತ್ರಿ ಸರಕಾರ. ಈಗಿರುವ ಅಸಮಾಧಾನ ತಗ್ಗಿಸಬೇಕಾದಂಥ ಅನಿವಾರ್ಯ ಇರುವ ಸನ್ನಿವೇಶದಲ್ಲಿ ಅದಕ್ಕೆ ಮತ್ತಷ್ಟು ಬೆಂಕಿ ಬೀಳುವಂಥ ಲಗ್ನದಲ್ಲೇ ಬಜೆಟ್ ಮಂಡನೆ ಆರಂಭಿಸಿದ್ದಾರೆ ಕುಮಾರಸ್ವಾಮಿ.

ಪದೇಪದೇ ಹೀಗೇಕೆ ಆಗುತ್ತಿದೆ?
ಈಗ ಎರಡೂ ಪಕ್ಷಗಳ ಮಧ್ಯೆ ಬೂದಿ ಮುಚ್ಚಿದ ಕೆಂಡದಂತಿರುವ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ದೇವರು-ಜ್ಯೋತಿಷ್ಯದಲ್ಲಿ ನಂಬಿಕೆ ಇರುವ ಕುಮಾರಸ್ವಾಮಿ, ನಡೆದಾಡುವ ಪಂಚಾಂಗದಂತೆ ಇರುವ ಎಚ್.ಡಿ.ರೇವಣ್ಣ...ಹೀಗಿದ್ದರೂ ಏಕೆ ಮುಹೂರ್ತದ ವಿಚಾರದಲ್ಲಿ ಹೀಗಾಗುತ್ತಿದೆ ಎಂಬ ಪ್ರಶ್ನೆ ಮೂಡುವುದು ಸಹಜ.

ಇದ್ದುದರಲ್ಲೇ ಒಳ್ಳೆ ದಿನ ಹುಡುಕುತ್ತಿದ್ದಾರೆ
ಅದಕ್ಕೆ ಉತ್ತರ ಕೂಡ ನಮಗೇ ಸಿಕ್ಕಿಹೋಗುತ್ತದೆ. ಸ್ವತಃ ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ಆಯಾ ದಿನದಲ್ಲಿ ಇರುವ ಉತ್ತಮ ಮುಹೂರ್ತ ಅಥವಾ ಇದ್ದುದರಲ್ಲೇ ಉತ್ತಮವಾದ ದಿನವನ್ನು ಆಯ್ದುಕೊಳ್ಳುವುದಕ್ಕಷ್ಟೇ ಸಾಧ್ಯವಾಗುತ್ತಿದೆ ವಿನಾ ಅತ್ಯುತ್ತಮ ಎನಿಸುವ ದಿನ, ಮುಹೂರ್ತ, ಲಗ್ನವನ್ನು ಆರಿಸಿಕೊಳ್ಳಲು ಆಗುತ್ತಿಲ್ಲ.

ಪಂಚಾಂಗ ನೋಡಿಯೇ ಆಡಳಿತ ನಡೆಸುವುದಕ್ಕಾಗುತ್ತಾ?
ಸರಕಾರದ ಎಲ್ಲ ಕೆಲಸ ಹೀಗೆ ಪಂಚಾಂಗ ನೋಡಿ ಮಾಡುತ್ತಾ ಹೋದರೆ ರಾಜ್ಯ ಉದ್ಧಾರ ಆಗುತ್ತಾ ಎಂದು ಪ್ರಶ್ನೆ ಇಟ್ಟರೆ, ಒಂದು ರಾಜ್ಯಕ್ಕೆ ಬಜೆಟ್ ಎಂಬುದು ಬಹಳ ಮುಖ್ಯ. ಭವಿಷ್ಯದ ಮುನ್ಸೂಚಿ ಅದು. ಅಂಥದ್ದರಲ್ಲಾದರೂ ಅಥವಾ ಅಂಥದ್ದರ ಬಗ್ಗೆ ಮಾತ್ರ ಗಮನ ವಹಿಸಲಿ ಅನ್ನೋದು ನಮ್ಮ ತಿಳಿವಳಿಕೆ ಮಿತಿಯೊಳಗಿನ ಸಲಹೆ ಎನ್ನುತ್ತಾರೆ ಜ್ಯೋತಿಷಿಗಳು.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications