2021 ರಿಂದ 2029ರ ವರೆಗಿನ ಪ್ರಧಾನಿ ಮೋದಿ ಕುಂಡಲಿ ಭವಿಷ್ಯ: ಆರೋಗ್ಯದಲ್ಲಿ ಏರುಪೇರು ಸಾಧ್ಯತೆ!
ಜ್ಯೋತಿಷ್ಯ, ಭವಿಷ್ಯ ಮುಂತಾದವುಗಳನ್ನು ಕೆಲವೊಂದು ಜನರು ಎಷ್ಟೇ ತಮಾಷೆಯಾಗಿ ತೆಗೆದುಕೊಂಡರೂ, ಅದನ್ನು ನಂಬುವವರ ಸಂಖ್ಯೆ ಮತ್ತು ಯಾವುದರಿಂದಲೂ ಸಿಗದ ಪರಿಹಾರ ಈ ಮೂಲಕ ಸಿಗಬಹುದು ಎನ್ನುವವರ ಸಂಖ್ಯೆಗೇನೂ ಕೊರತೆಯಿಲ್ಲ.
ದೇಶ ಎದುರಿಸಬೇಕಾದ ಪ್ರಾಕೃತಿಕ ವಿಕೋಪ, ಯುದ್ದ, ರೋಗರುಜಿನಗಳ ಬಗ್ಗೆ ಹಲವು ಜ್ಯೋತಿಷಿಗಳು, ಸ್ವಾಮೀಜಿಗಳು ಈಗಾಗಲೇ ಹಲವು ಭವಿಷ್ಯವನ್ನು ಹೇಳಿಯಾಗಿದೆ. ಈ ಪಟ್ಟಿಗೆ ಇನ್ನೊಂದು ಸೇರ್ಪಡೆಯಾಗಿದೆ.
ಕಳೆದ ಅಂದರೆ 2014ರಿಂದ ಒಂದಲ್ಲಾ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಆಚಾರ್ಯ ಸಲೀಲ್ ಕುಮಾರ್ ಎನ್ನುವವರು ಭವಿಷ್ಯವೊಂದನ್ನು ನುಡಿದಿದ್ದಾರೆ.
ಇವರು, ಕೊರೊನಾ, ಭಾರತ-ಚೀನಾ ಗಡಿವಿವಾದದ ಬಗ್ಗೆಯೂ ಹಿಂದೆ ಭವಿಷ್ಯವನ್ನು ನುಡಿದಿದ್ದರು. ಸಲೀಲ್ ಅವರು 2021 ರಿಂದ 2029ರ ಅವಧಿಯಲ್ಲಿ ಮೋದಿಯ ಕುಂಡಲಿ ಯಾವರೀತಿ ಇರಲಿದೆ ಎನ್ನುವುದರ ವಿವರಣೆಯನ್ನು ನೀಡಿದ್ದಾರೆ.

ಶನಿ ಮಹಾದೆಸೆ
ಶನಿ ಮಹಾದೆಸೆಯಲ್ಲಿ ಮೋದಿಯವರ ಜನ್ಮವಾಗಿದೆ. ಇದಾದ ನಂತರ ಬುಧ, ಕೇತು, ಮತ್ತು ಸೂರ್ಯ ದೆಶೆ ಹಾದು ಬಂದಿದ್ದಾರೆ. ಹಾಗಾಗಿ, ತಮ್ಮ ಜೀವನದಲ್ಲಿ ಸಾಕಷ್ಟು ಏರಿಳಿತವನ್ನು ಮೋದಿಯವರು ಕಂಡಿದ್ದಾರೆ. ಸದ್ಯ ಅವರ ಕುಂಡಲಿ ಚಂದ್ರ ದೆಶೆಯಲ್ಲಿದೆ. ಡಿಸೆಂಬರ್ 2020ರಿಂದ ಮಂಗಳ ಮಹಾದೆಶೆ ಆರಂಭವಾಗಿದೆ. ಇದು ಮುಂದಿನ ಸಾರ್ವತ್ರಿಕ ಚುನಾವಣೆಯವರೆಗೂ ಈ ದೆಶೆ ಇರಲಿದೆ.

ಬಿಜೆಪಿಗೆ ಇರುವ ದೌರ್ಬಾಗ್ಯ
ಬಿಜೆಪಿಗೆ ಇರುವ ದೌರ್ಬಾಗ್ಯ ಏನಂದರೆ ಮೋದಿಗೆ ಪರ್ಯಾಯವಾಗಿ ಯಾವ ನಾಯಕನು ಇಲ್ಲದೇ ಇರುವುದು. ಸರಕಾರದ ಎಲ್ಲಾ ಒತ್ತಡ ಮೋದಿ ಮತ್ತು ಅಮಿತ್ ಶಾ ಅವರ ಮೇಲಿದೆ. ಅಮಿತ್ ಶಾ ಅವರಿಗೆ ಆರೋಗ್ಯ ಸಮಸ್ಯೆ ಎದುರಾಗಲಿದೆ ಎಂದು ಹಿಂದೆನೇ ಹೇಳಿದ್ದೆ, ಆದರೆ, ಅವರ ಜಾತಕ ತುಂಬಾ ಪವರ್ಫುಲ್ ಆಗಿದೆ. ಶನಿಗೋಚರ ಮೋದಿಯವರ ಕುಂಡಲಿಯಲ್ಲಿ ಪ್ರಭಾವಿಯಾಗಿ ಮುಂದುವರಿಯಲಿದೆ.

ಆಚಾರ್ಯ ಸಲೀಲ್ ಕುಮಾರ್ ಎನ್ನುವವರ ಭವಿಷ್ಯ
2022ರ ವರೆಗೆ ಮೋದಿಯವರ ಜಾತಕದಲ್ಲಿನ ಶನಿಪ್ರಭಾವ ಚೆನ್ನಾಗಿ ಇರಲಿದೆ. 2022ರ ಅಂತ್ಯದಿಂದ ಮುಂದಿನ ಒಂದು ವರ್ಷ ಮೋದಿಯವರು ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕಿದೆ. ಮುಂದಿನ ಚುನಾವಣೆಯ ವೇಳೆ ಶನಿಯು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಅವಧಿಯಲ್ಲಿ ಮೋದಿಗೆ ಆರೋಗ್ಯ ಸಮಸ್ಯೆ ಎದುರಾಗಬಹುದು ಮತ್ತು ಅವರ ಭದ್ರತೆಯವರೂ ಇನ್ನೂ ಅಲರ್ಟ್ ಆಗಿ ಇರಬೇಕಾಗುತ್ತದೆ.

ಮೋದಿ ಜಯಭೇರಿ ಬಾರಿಸುವ ಸಾಧ್ಯತೆ
ಮುಂದಿನ ಚುನಾವಣೆಯಲ್ಲೂ ಮೋದಿ ಜಯಭೇರಿ ಬಾರಿಸುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಬಿಜೆಪಿಯವರು ಗೆಲುವಿಗಾಗಿ ಭಾರೀ ಪರಿಶ್ರಮ ಪಡಬೇಕಾಗಿದೆ. ಮೋದಿಯವರ ರಾಜಯೋಗ ಇನ್ನೂ ಮುಂದುವರಿಯಲಿದೆ. 2021ಕ್ಕೆ ದೇಶಕ್ಕೆ ಸಂಘರ್ಷದ ಸಮಯವಾಗಿದೆ. ಅಂತರಾಷ್ಟ್ರೀಯವಾಗಿ ಮೋದಿಯವರ ಹೆಸರು ಇನ್ನೂ ಜನಪ್ರಿಯಗೊಳ್ಳಲಿದೆ. ಬಿಜೆಪಿಯವರು ಸಾಕಷ್ಟು ನಾಯಕರನ್ನು ತಯಾರು ಮಾಡಿಕೊಂಡರೆ ಪಕ್ಷಕ್ಕೆ ಒಳ್ಳೆಯದು. ಮೋದಿ ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು.
-
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ












Click it and Unblock the Notifications