ಇದ್ದರೆ ತುಲಾ ರಾಶಿ ಸ್ತ್ರೀಯಂತೆ ಇರಬೇಕು!

* ಧವಳ
ವೃಷಭ ರಾಶಿ ಪುರುಷ - ತುಲಾ ರಾಶಿ ಸ್ತ್ರೀ :
ತುಲಾ ರಾಶಿ ಸ್ತ್ರೀಯರಲ್ಲಿ ಅತಿ ಹೆಚ್ಚಿನ ನಿಗೂಢತೆ ಇರುತ್ತದೆ. ಯಾವಾಗ ಏನು ಮಾಡ್ತಾರೋ ಎನ್ನುವ ಸಂಗತಿ ಯಾರಿಗೂ ತಿಳಿಯದು. ಹೇಗೆ ಮಾಡ್ತಾರೋ ಎನ್ನುವ ವಿಷಯ ಉಹುಂ ಯಾರಿಗೂ ಗೊತ್ತೇ ಇರಲ್ಲ. ಕಷ್ಟಪಟ್ಟು ಯಾರ ಸಹಾಯ ಇಲ್ಲದೆ ತಾವೇ ತಮ್ಮ ದಾರಿಯನ್ನು ಆಯ್ಕೆ ಮಾಡಿಕೊಂಡು ಅದರಂತೆ ನಡೆಯುತ್ತಾರೆ. ವೃಷಭ ರಾಶಿ ಪುರುಷರ ವಿಷಯಕ್ಕೆ ಬರುವುದಾದರೆ ಯಾವುದೇ ನಿರ್ಣಯ ಕೈಗೊಳ್ಳಬೇಕಾದರೂ ಆಲೋಚಿಸಿ ಮುಂದಡಿ ಇಡ್ತಾರೆ. ಇವರು ಒತ್ತಡಕ್ಕೆ ಒಳಗಾದಾಗ ತುಲಾ ರಾಶಿ ಸ್ತ್ರೀ ಇವರ ಸಮಸ್ಯೆಯನ್ನು ದೂರಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಪತಿಯ ಮನಸನ್ನು ನಾರ್ಮಲ್ ಸ್ಥಿತಿಗೆ ತರುವ ಶಕ್ತಿ ಈ ರಾಶಿಯ ಸ್ತ್ರೀಗೆ ಮಾತ್ರ ಇರುತ್ತದೆ. ಎಲ್ಲಾ ಸಮಸ್ಯೆಯನ್ನು ಪ್ರೀತಿಯ ಮೂಲಕ ಬಗೆ ಹರಿಸುತ್ತಾರೆ. ಕೋಪಕ್ಕಿಂತ ಪ್ರೀತಿ ಅತಿ ಬಲಿಷ್ಠವಾದ ಅಸ್ತ್ರ ಅಲ್ವೆ? ಈ ಅಂಶವು ಈ ದಂಪತಿಗಳ ಬದುಕನ್ನು ಸದಾ ಸಂತೋಷದಲ್ಲಿ ಇಟ್ಟಿರುತ್ತದೆ.
ವೃಷಭ ರಾಶಿ ಸ್ತ್ರೀ - ವೃಶ್ಚಿಕ ರಾಶಿ ಪುರುಷ :
ವೃಶ್ಚಿಕ ರಾಶಿ ಪುರುಷ ನಿರ್ದಯಿ. ಕಲ್ಲು ಹೃದಯದವನು ಎನ್ನುವ ಆತಂಕ ವೃಷಭ ರಾಶಿ ಸ್ತ್ರೀಗೆ ಸದಾ ಕಾಡುತ್ತಿರುತ್ತದೆ. ಆತನಿಗೆ ಸ್ತ್ರೀಸಾಂಗತ್ಯದ ವಿಷಯದಲ್ಲಿ ಹೆಚ್ಚು ಆಸಕ್ತಿ ಎನ್ನುವ ಭಯ ಆಕೆಯಲ್ಲಿ ನೆಲೆಯೂರಿರುತ್ತದೆ. ಆದರೆ ಕಾಮ ಆತನ ಬದುಕಿನ ಅತಿ ಮುಖ್ಯ ಅಂಶವಲ್ಲ. ಆ ರಾಶಿಯವರು ಶತ್ರುಗಳನ್ನು ಸರಿಯಾದ ಕ್ರಮದಲ್ಲಿ ಮಟ್ಟ ಹಾಕುತ್ತಾರೆ. ಕಷ್ಟಪಡುವವರನ್ನು ಕಂಡರೆ ಹೃದಯ ಹಿಂಡುತ್ತದೆ. ಇತರರ ಸಮಸ್ಯೆಗಳಿಗೆ ಮರುಗುತ್ತಾ ಕೂರದೆ ತಮ್ಮ ಕೈಲಾದ ಸಹಾಯ ಮಾಡುವ ಉತ್ತಮ ವ್ಯಕ್ತಿತ್ವದವರು. ಅಕಸ್ಮಾತ್ ತಿಳಿಯದೆ ಆಗುವ ತಪ್ಪು, ಆಕಸ್ಮಿಕವಾಗಿ ಉಂಟಾಗುವ ಅವಘಡ ಇವುಗಳನ್ನು ಕ್ಷಮಿಸುವ ಉದಾರತೆಯನ್ನು ಹೊಂದಿರುತ್ತಾರೆ. ಕ್ಷಮಾಗುಣ ಎಲ್ಲರಿಗೂ ಸಿದ್ಧಿಸಿರಲ್ಲ. ಇಂತಹ ಅಪರೂಪದ ಗುಣವು ಈ ರಾಶಿಯ ಪುರುಷರಲ್ಲಿ ಇರುತ್ತದೆ. ಇಂತಹ ಅಂಶಕ್ಕೆ ವೃಷಭ ರಾಶಿ ಸ್ತ್ರೀ ಸಹ ಇಂಥ ಗುಣಕ್ಕೆ ಹೆಸರುವಾಸಿ. ಇವರನ್ನು ನೋಡಿ ಉಳಿದವರು ಸಾಕಷ್ಟು ಕಲಿಯುವುದು ಇದೆ. ಒಂದರ್ಥದಲ್ಲಿ ಸಮಾಜಕ್ಕೆ ಮಾದರಿ ಅನ್ನಿಸುವ ಜೋಡಿ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ)
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications