ಇದ್ದರೆ ತುಲಾ ರಾಶಿ ಸ್ತ್ರೀಯಂತೆ ಇರಬೇಕು!

* ಧವಳ
ವೃಷಭ ರಾಶಿ ಪುರುಷ - ತುಲಾ ರಾಶಿ ಸ್ತ್ರೀ :
ತುಲಾ ರಾಶಿ ಸ್ತ್ರೀಯರಲ್ಲಿ ಅತಿ ಹೆಚ್ಚಿನ ನಿಗೂಢತೆ ಇರುತ್ತದೆ. ಯಾವಾಗ ಏನು ಮಾಡ್ತಾರೋ ಎನ್ನುವ ಸಂಗತಿ ಯಾರಿಗೂ ತಿಳಿಯದು. ಹೇಗೆ ಮಾಡ್ತಾರೋ ಎನ್ನುವ ವಿಷಯ ಉಹುಂ ಯಾರಿಗೂ ಗೊತ್ತೇ ಇರಲ್ಲ. ಕಷ್ಟಪಟ್ಟು ಯಾರ ಸಹಾಯ ಇಲ್ಲದೆ ತಾವೇ ತಮ್ಮ ದಾರಿಯನ್ನು ಆಯ್ಕೆ ಮಾಡಿಕೊಂಡು ಅದರಂತೆ ನಡೆಯುತ್ತಾರೆ. ವೃಷಭ ರಾಶಿ ಪುರುಷರ ವಿಷಯಕ್ಕೆ ಬರುವುದಾದರೆ ಯಾವುದೇ ನಿರ್ಣಯ ಕೈಗೊಳ್ಳಬೇಕಾದರೂ ಆಲೋಚಿಸಿ ಮುಂದಡಿ ಇಡ್ತಾರೆ. ಇವರು ಒತ್ತಡಕ್ಕೆ ಒಳಗಾದಾಗ ತುಲಾ ರಾಶಿ ಸ್ತ್ರೀ ಇವರ ಸಮಸ್ಯೆಯನ್ನು ದೂರಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಪತಿಯ ಮನಸನ್ನು ನಾರ್ಮಲ್ ಸ್ಥಿತಿಗೆ ತರುವ ಶಕ್ತಿ ಈ ರಾಶಿಯ ಸ್ತ್ರೀಗೆ ಮಾತ್ರ ಇರುತ್ತದೆ. ಎಲ್ಲಾ ಸಮಸ್ಯೆಯನ್ನು ಪ್ರೀತಿಯ ಮೂಲಕ ಬಗೆ ಹರಿಸುತ್ತಾರೆ. ಕೋಪಕ್ಕಿಂತ ಪ್ರೀತಿ ಅತಿ ಬಲಿಷ್ಠವಾದ ಅಸ್ತ್ರ ಅಲ್ವೆ? ಈ ಅಂಶವು ಈ ದಂಪತಿಗಳ ಬದುಕನ್ನು ಸದಾ ಸಂತೋಷದಲ್ಲಿ ಇಟ್ಟಿರುತ್ತದೆ.
ವೃಷಭ ರಾಶಿ ಸ್ತ್ರೀ - ವೃಶ್ಚಿಕ ರಾಶಿ ಪುರುಷ :
ವೃಶ್ಚಿಕ ರಾಶಿ ಪುರುಷ ನಿರ್ದಯಿ. ಕಲ್ಲು ಹೃದಯದವನು ಎನ್ನುವ ಆತಂಕ ವೃಷಭ ರಾಶಿ ಸ್ತ್ರೀಗೆ ಸದಾ ಕಾಡುತ್ತಿರುತ್ತದೆ. ಆತನಿಗೆ ಸ್ತ್ರೀಸಾಂಗತ್ಯದ ವಿಷಯದಲ್ಲಿ ಹೆಚ್ಚು ಆಸಕ್ತಿ ಎನ್ನುವ ಭಯ ಆಕೆಯಲ್ಲಿ ನೆಲೆಯೂರಿರುತ್ತದೆ. ಆದರೆ ಕಾಮ ಆತನ ಬದುಕಿನ ಅತಿ ಮುಖ್ಯ ಅಂಶವಲ್ಲ. ಆ ರಾಶಿಯವರು ಶತ್ರುಗಳನ್ನು ಸರಿಯಾದ ಕ್ರಮದಲ್ಲಿ ಮಟ್ಟ ಹಾಕುತ್ತಾರೆ. ಕಷ್ಟಪಡುವವರನ್ನು ಕಂಡರೆ ಹೃದಯ ಹಿಂಡುತ್ತದೆ. ಇತರರ ಸಮಸ್ಯೆಗಳಿಗೆ ಮರುಗುತ್ತಾ ಕೂರದೆ ತಮ್ಮ ಕೈಲಾದ ಸಹಾಯ ಮಾಡುವ ಉತ್ತಮ ವ್ಯಕ್ತಿತ್ವದವರು. ಅಕಸ್ಮಾತ್ ತಿಳಿಯದೆ ಆಗುವ ತಪ್ಪು, ಆಕಸ್ಮಿಕವಾಗಿ ಉಂಟಾಗುವ ಅವಘಡ ಇವುಗಳನ್ನು ಕ್ಷಮಿಸುವ ಉದಾರತೆಯನ್ನು ಹೊಂದಿರುತ್ತಾರೆ. ಕ್ಷಮಾಗುಣ ಎಲ್ಲರಿಗೂ ಸಿದ್ಧಿಸಿರಲ್ಲ. ಇಂತಹ ಅಪರೂಪದ ಗುಣವು ಈ ರಾಶಿಯ ಪುರುಷರಲ್ಲಿ ಇರುತ್ತದೆ. ಇಂತಹ ಅಂಶಕ್ಕೆ ವೃಷಭ ರಾಶಿ ಸ್ತ್ರೀ ಸಹ ಇಂಥ ಗುಣಕ್ಕೆ ಹೆಸರುವಾಸಿ. ಇವರನ್ನು ನೋಡಿ ಉಳಿದವರು ಸಾಕಷ್ಟು ಕಲಿಯುವುದು ಇದೆ. ಒಂದರ್ಥದಲ್ಲಿ ಸಮಾಜಕ್ಕೆ ಮಾದರಿ ಅನ್ನಿಸುವ ಜೋಡಿ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ)
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications