Mobile Alert: ಕೇಂದ್ರ ಸರ್ಕಾರದಿಂದ ದಿಢೀರ್ ಮೊಬೈಲ್ನಲ್ಲಿ ಎಚ್ಚರಿಕೆಯ ಸಂದೇಶ, ಏನಿದೆ - ಯಾಕೆ ಇದು
Mobile
Alert: ಭಾರತ ಸರ್ಕಾರವು ಮಹತ್ವದ ಅಲರ್ಟ್ ಸಿಸ್ಟಂ ಸಂದೇಶವನ್ನು ಇಂದು ಹಂಚಿಕೊಂಡಿದೆ. ದೇಶದಲ್ಲಿ ಭೂಕಂಪ, ಪ್ರವಾಹ, ಅತಿವೃಷ್ಟಿ ಹಾಗೂ ಭೂಕುಸಿ ಸೇರಿದಂತೆ ಮಳೆ ಅನಾಹುತ ಸಂಭವಿಸುವ ಸಂದರ್ಭದಲ್ಲಿ ಹಾಗೂ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಮೊಬೈಲ್ಗೆ ನೇರವಾಗಿ ಎಚ್ಚರಿಕೆಯ ಸಂದೇಶವನ್ನು ಕಳುಹಿಸುವ "ಸೆಲ್ ಬ್ರಾಡ್ ಕಾಸ್ಟಿಂಗ್ ಅಲರ್ಟ್" ಸಿಸ್ಟಂ ಇದಾಗಿದೆ. ಈಗಾಗಲೇ ಇದು ಗಲ್ಫ್ ದೇಶಗಳು ಸೇರಿದಂತೆ ಮುಂದುವರಿದ ದೇಶಗಳಲ್ಲಿ ಇದೆ. ಯುದ್ಧದ ಸಂದರ್ಭಗಳಲ್ಲಿ ಆಯಾ ದೇಶಗಳಲ್ಲಿ ಈ ಮಾದರಿಯನ್ನು ಅನುಸರಿಸಲಾಗುತ್ತಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಕೇಂದ್ರ
ಸರ್ಕಾರ
ಪ್ರಯೋಗಿಕವಾಗಿ
ಹಂಚಿಕೊಂಡ
ಸಂದೇಶದಲ್ಲಿ
ಏನಿದೆ
?
ಕರ್ನಾಟಕವೂ
ಸೇರಿದಂತೆ ದೇಶದಾದ್ಯಂತ ಈ ಮಾದರಿಯ ಸಂದೇಶವನ್ನು ಹಂಚಿಕೊಳ್ಳಲಾಗಿದೆ. "ಭಾರತ ಸರ್ಕಾರವು ತನ್ನ ನಾಗರಿಕರಿಗೆ ತ್ವರಿತ ವಿಪತ್ತು ಮುನ್ನೆಚ್ಚರಿಕೆ ಸೇವೆಯನ್ನು ಒದಗಿಸಲು ದೇಶಿಯ ತಂತ್ರಜ್ಞಾನವನ್ನು ಬಳಸಿಕೊಂಡು ಸೆಲ್ ಬ್ರಾಡ್ಕಾಸ್ಟ್ ವ್ಯವಸ್ಥೆಯನ್ನು ಪ್ರಾರಂಭಿಸುತ್ತಿದೆ. ಜಾಗೃತ ನಾಗರಿಕರು, ಸುರಕ್ಷಿತ ರಾಷ್ಟ್ರ. ಈ ಸಂದೇಶವು ಬಂದಾಗ ಸಾರ್ವಜನಿಕರು ಯಾವುದೇ ಕ್ರಮ ತೆಗೆದುಕೊಳ್ಳುವ ಅಗತ್ಯವಿರುವುದಿಲ್ಲ. ಇದು ಕೇವಲ ಪ್ರಾಯೋಗಿಕ ಪರೀಕ್ಷಾರ್ಥ ಸಂದೇಶವಾಗಿದೆ. - ಭಾರತ ಸರ್ಕಾರ" ಎನ್ನುವ ಸಂದೇಶವನ್ನು ಬೆಂಗಳೂರು - ಕರ್ನಾಟಕ ಸೇರಿದಂತೆ ದೇಶದಾದ್ಯಂತ ಆಯಾ ರಾಜ್ಯಗಳ ಸ್ಥಳೀಯ ಭಾಷೆ ಹಾಗೂ ಇಂಗ್ಲಿಷ್ನಲ್ಲಿ ಹಂಚಿಕೊಳ್ಳಲಾಗಿದೆ. id='are-slot-2' class='oiad oi-axt oiadv'>












Click it and Unblock the Notifications