Nrega scheme: ಗೋಮಾಳಗಳಲ್ಲಿ ಬಹುವಾರ್ಷಿಕ ಹುಲ್ಲಿನ ಬೀಜಗಳನ್ನು ಬಿತ್ತನೆ ಕಾರ್ಯ ಭರ
ರಾಯಚೂರು ಜುಲೈ 10: ರಾಯಚೂರು ತಾಲ್ಲೂಕಿನಲ್ಲಿ ಪಶುಪಾಲನೆಯಲ್ಲಿ ತೊಡಗಿಸಿಕೊಂಡ ಭೂ ರಹಿತರಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮೇವಿನ ಬೀಜ ಬಿತ್ತನೆಗೆ ಅನುಕೂಲ ಮಾಡಿಕೊಟ್ಟಿದ್ದು ಮಂದಹಾಸ ಮೂಡಿಸಿದೆ.
ಗ್ರಾಮೀಣಾ ಭೂ ರಹಿತರು ಪಶುಪಾಲನೆಯಲ್ಲಿ ತೊಡಗಿಕೊಂಡು ಅರ್ಥಿಕವಾಗಿ ಸದೃಡಗೊಳಿಸುವ ದೃಷ್ಟಿಯಿಂದ ರಾಜ್ಸ ಸರಕಾರ 2023-24 ನೇ ಸಾಲಿನ ಆಯವ್ಯಯದಲ್ಲಿ ರಾಜ್ಸದಲ್ಲಿ 5 ಸಾವಿರ ಗೋಮಾಳಗಳನ್ನು ಅಭಿವೃದ್ಧಿ ಪಡಿಸುವುದಾಗಿ ಘೋಷಿಸಲಾಗಿರುತ್ತದೆ.

ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮೂಲಕ ಪಶುಸಂಗೋಪನೆ ಸಂರಕ್ಷಣೆಗಾಗಿ ಅವಕಾಶಗಳನ್ನು ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಗೋಮಾಳ ಅಭಿವೃದ್ಧಿಗಾಗಿ ಗೋಮಾಳ ಅಂಚಿನ ಸುತ್ತಲು ಕಂದಕ ಬದು ನಿರ್ಮಾಣ ಮಾಡುವುದು, ಗೋಮಾಳ ಪ್ರದೇಶದಲ್ಲಿ ಜಲಾನಯನ ಪರಿಕಲ್ಪನೆಯಲ್ಲಿ ಅನುಷ್ಠಾನಿಸುವುದು, ಬಹು ವಾರ್ಷಿಕ ಮೇವಿನ ಮರಗಳು, ಹಣ್ಣಿನ ಗಿಡಗಳನ್ನು ಬೆಳೆಸುವುದು, ಬಹು ವಾರ್ಷಿಕ ಹುಲ್ಲಿನ ಬೀಜಗಳನ್ನು ಬಿತ್ತನೆ ಮಾಡುವುದು, ಗೋಮಾಳದಲ್ಲಿ ಜಾನುವಾರುಗಳಿಗೆ ನೀರಿನ ಲಭ್ಯತೆಗಾಗಿ ಗೋಕಟ್ಟೆಗಳನ್ನು ನಿರ್ಮಾಣ ಮಾಡುವುದಾಗಿದೆ.
ಈಗಾಗಲೇ ತಾಲೂಕಿನ ವಿವಿದೆಡೆ ಮಳೆಯಾಗಿದ್ದು, ಗೋಮಾಳ ಪ್ರದೇಶದಲ್ಲಿ ಮಣ್ಣಿನಲ್ಲಿ ತೇವಾಂಶ ಇರುವುದರಿಂದ ವಿವಿಧ ತಳಿಯ ಮೇವಿನ,ಹುಲ್ಲಿನ ಬೀಜಗಳನ್ನು ಬಿತ್ತನೆ ಮಾಡಲಾಗುತ್ತಿದೆ.ಅವುಗಳಲ್ಲಿ ಜೋಳದ ಬಹವಾರ್ಷಿಕ ಮೇವಿನ ಬೀಜ ಹಾಗೂ ಮೆಕ್ಕೆ ಜೋಳದ (ಅಪ್ರೀಕನ್ ಟಾಲ್ ಮೇಜ್ ) ಸಿಒಎಪ್ಎಸ್ 31 ಬಹುವಾರ್ಷಿಕ ಮೇವಿನ ಬೀಜಗಳನ್ನು ತಾಲೂಕಿನ ಮಾಡಮಾನದೊಡ್ಡಿ, ಗಟ್ಟು ಬಿಚಾಲಿ, ಹಂಚಿನಾಳ, ಗಾಣಧಾಳ್ ಇನ್ನೂ ಮುಂತಾದ ಗ್ರಾಮಗಳ ಗೋಮಾಳಗಳಲ್ಲಿ ಬಹು ವಾರ್ಷಿಕ ಹುಲ್ಲಿನ ಬೀಜಗಳು ಬಿತ್ತುವ ಕಾರ್ಯ ಚುರಕಾಗಿ ನಡೆಯುತ್ತಿದೆ.

ಗ್ರಾಮ ಪಂಚಾಯತಿ ಗೋಮಾಳ ಪ್ರದೇಶದವನ್ನು ವಿವಿಧ ಅನುಷ್ಠಾನ (ಪಶುಸಂಗೋಪನೆ, ಆರಣ್ಯ, ಕೃಷಿ, ತೋಟಗಾರಿಕೆ ಮತ್ತು ಕಂದಾಯ) ಇಲಾಖೆಗಳೊಂದಿಗೆ ಒಗ್ಗೂಡಿಸುವಿಕೆಯಡಿ ಅಭಿವೃದ್ಧಿ ಪಡಿಸಲು ಕಾರ್ಯಕ್ರಮ ರೂಪಿಸಲಾಗಿರುತ್ತದೆ.
ರಾಯಚೂರು ತಾಲೂಕಿನ ಆತ್ಕೂರು, ಬಿಚ್ಚಾಲಿ, ಬಿಜನಗೇರಾ, ಚಂದ್ರಬಂಡ, ಗಾಣಧಾಳ್, ಎನ್ ಮಲ್ಕಾಪೂರು, ಗಿಲ್ಲೇಸೂಗುರು, ಗುಂಜಳ್ಳಿ, ಹಿರಾಪೂರು, ಇಡಪನೂರು, ಜೇಗರಕಲ್, ಜಾ.ವೆಂಕಟಪೂರು, ಕಮಲಾಪೂರು, ಎಲ್.ಕೆ.ದೊಡ್ಡಿ, ಮಮದಾಪೂರ, ಮಿಟ್ಟಿಮಲ್ಕಾಪೂರು, ಯದ್ಲಾಪೂರು ಮತ್ತು ಯಾಪಲದಿನ್ನಿ ಗ್ರಾಮ ಪಂಚಾಯತಿಗಳಲ್ಲಿ ಈಗಾಗಲೇ ಗೋಮಾಳ ಪ್ರದೇಶಗಳನ್ನು ಗುರುತಿಸಲಾಗಿದೆ.
ಸಾವಿರ ಖಾಲಿ ಇರುವ ಪ್ರದೇಶದಲ್ಲಿ ಭೂ ಕಬಳಿಕೆಯಡಿ ಒತ್ತುವರಿಯಾಗುವ ಚಿಂತೆಯಿದ ಮುಕ್ತವಾಗಲು ಸರ್ಕಾರ ಆ ಯವ್ಯಯದಲ್ಲಿ ಮಂಡಿಸಿದತೆ ಗೋಮಾಳ ಪ್ರದೇಶಗಳ ಸದ್ಭಳಕೆ ಮುಂದಾಗಿದ್ದು ಅದರ ಭಾಗವಾಗಿ ಭೂಮಿ ಇಲ್ಲದೆ ಇರುವ ಪಶುಪಾಲನೆ ಮಾಡುವ ರೈತರಿಗೆ ಮೇವಿನ ಬೀಜ ಬಿತ್ತನೆ ಮಾಡುವ ಮೂಲಕ ಅವರಿಗೆ ಪ್ರೋತ್ಸಾಹ ನೀಡುವ ಈ ನಿರ್ಧಾರ ವರದಾನವಾಗಿದ್ದರೂ ಇಲಾಖೆಗಳ ಸಮನ್ವಯತೆಯೂ ಸವಾಲಾಗಿದ್ದು ಎಷ್ಟ ಮಟ್ಟಿಗೆ ಕಾರ್ಯಸಾಧುವಾಗಲಿದೆ ಕಾದು ನೋಡಬೇಕಿದೆ.

ಗೋಮಾಳ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಗೋಮಾಳ ಅಭಿವೃದ್ಧಿ ಮಾಡುವುದರಿಂದ ಭೂ ರಹಿತ ಕುಟುಂಬಗಳಿಗೆ ಪಶುಸಂಗೋಪನೆ ಉಪ ಕಸುಬುಗಳಾಗಿ ಸುಸ್ಥೀರ ಜೀವನ ಸಾಗಿಸಲು ಒಂದು ವರದಾನವಾಗಲಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಚಂದ್ರಶೇಖರ ಪವಾರ್ ಹೇಳಿದರು.
ನರೇಗಾ ಯೋಜನೆಯಡಿ ಹುಲ್ಲುಗಾವಲು ಅಭಿವೃದ್ಧಿ ಪಡಿಸುವುದರಿಂದ ಪಶು ಸಂಗೋಪನೆಗೆ ಉತ್ತೇಜನ ನೀಡಿ, ಸುಸ್ಥೀರ ಜೀವನ ಸಾಗಿಸಲು ಅನುಕೂಲವಾಗಲಿದೆ ಎಂದು ನರೇಗಾ ಯೋಜನೆಯ ತಾಲ್ಲೂಕಿನ ಸಹಾಯಕ ನಿರ್ದೇಶಕ ಹನುಮಂತ ಹೇಳಿದರು.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications