ಬುಧವಾರದಿಂದ ಲಾಲ್ ಬಾಗ್ ನಲ್ಲಿ ತಾಜಾ ಹಣ್ಣಿನ ಮೇಳ
ಬೆಂಗಳೂರು,ಫೆಬ್ರವರಿ,23: ಸಸ್ಯಕಾಶಿ ಲಾಲ್ಬಾಗ್ ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ನಡೆದ ಪುಷ್ಪ ಪ್ರದರ್ಶನದಲ್ಲಿ ವೈವಿಧ್ಯಮಯ ಪುಷ್ಪಗಳ ಸೌಂದರ್ಯ ಕಂಡು ಕಣ್ಮನ ತುಂಬಿಕೊಂಡಿದ್ದೀರಿ. ಇದೀಗ ತಾಜಾ ಹಣ್ಣುಗಳ ಸಾಮ್ರಾಜ್ಯ ನೋಡಿ ಬರಲು ಸಿದ್ಧರಾಗಿ.
ಹಾಪ್ ಕಾಮ್ಸ್ (horticultural Producer's Cooperative Marketing and Processing Society Ltd) ಸಂಸ್ಥೆಯು ಫೆಬ್ರವರಿ 24ರಿಂದ 28ರವರೆಗೆ ಒಟ್ಟು ನಾಲ್ಕು ದಿನಗಳ ಕಾಲ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್ ಮರೀಗೌಡ ಅವರ ಜನ್ಮಶತಮಾನೋತ್ಸವದ ಪ್ರಯುಕ್ತ 'ದ್ರಾಕ್ಷಿ ಮತ್ತು ಕಲ್ಲಂಗಡಿ ಮೇಳ-2016' ಹಮ್ಮಿಕೊಂಡಿದ್ದು, ಜೊತೆಗೆ ನಾನಾ ಹಣ್ಣುಗಳ ಪ್ರಪಂಚವೂ ಇಲ್ಲಿ ಕಾಣಲಿದೆ.[ಇನ್ನುಮುಂದೆ ತರಕಾರಿ ಅಂಗಡಿ 'ಹಾಪ್ ಕಾಮ್ಸ್'ನಲ್ಲಿ ಕಿಚ್ಚ]

'ದ್ರಾಕ್ಷಿ ಮತ್ತು ಕಲ್ಲಂಗಡಿ ಮೇಳ-2016' ಮೇಳಕ್ಕೆ ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಚಾಲನೆ ನೀಡಲಿದ್ದು, ಇದರಲ್ಲಿ ವಿಜಯಪುರ, ಬಾಗಲಕೋಟೆ, ಕೊಪ್ಪಳ, ಗದಗ, ಬೆಳಗಾವಿ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ವಿವಿಧ ಜೆಲ್ಲೆಗಳ ರೈತರು ಬೆಳೆದ ಹಣ್ಣುಗಳಿಗೆ ವೇದಿಕೆ ಕಲ್ಪಿಸಲಾಗಿದೆ ಎಂದು ಹಾಪ್ ಕಾಮ್ಸ್ ಅಧ್ಯಕ್ಷ ಜಿ.ಆರ್ ಶ್ರೀನಿವಾಸನ್ ಮಾಹಿತಿ ನೀಡಿದರು.
ಹಣ್ಣಿನ ಮೇಳದ ವಿಶೇಷತೆಗಳು:
ಹಳದಿ ತಿರುಳಿದ ಕಲ್ಲಂಗಡಿ, 10 ಬಗೆಯ ದ್ರಾಕ್ಷಿಗಳು, ಮ್ಯಾಂಗೋಸ್ಟೀನ್, ಬ್ಲ್ಯೂಬೆರಿ, ರಾಸ್ ಬೆರಿ, ಮಿನಿ ಆರೇಂಜ್, ಅಂಜೂರ, ಲಿಚ್ಚಿ, ಸಿಹಿಹುಣಸೆ, ಕೊಬ್ಬರಿ ಹಣ್ಣು ಇತ್ಯಾದಿ.[ಕಾಡು ಫಲಗಳು!]

ದ್ರಾಕ್ಷಿ ಹಾಗೂ ಕಲ್ಲಂಗಡಿ ವಿಧಗಳು:
ಥಾಮ್ಸನ್ ಸೀಡ್ ಲೆಸ್, ಆರದ್ , ಕೃಷ್ಣ ಶರದ್, ಗ್ಲೋಬ್, ಬೆಂಗಳೂರು ಬ್ಲೂ ಇತ್ಯಾದಿ ತಳಿಯ ದ್ರಾಕ್ಷಿ ಹಣ್ಣುಗಳು, ವೈವಿಧ್ಯಮಯ ಕಲ್ಲಂಗಡಿ ಹಣ್ಣುಗಳು ದೊರೆಯಲಿದೆ. ಈ ಎಲ್ಲಾ ಹಣ್ಣುಗಳು ಶೇ.10 ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ.[ಕತ್ತರಿಸಿಟ್ಟ ಹಣ್ಣುಗಳನ್ನು ಮಾರಾಟ ಮಾಡಬೇಡಿ]
ಉಚಿತ ತರಬೇತಿ
ತೋಟಗಾರಿಕೆ ಇಲಾಖೆಯು ಹಣ್ಣಿನ ಮೇಳ ನಡೆಯುವ ನಾಲ್ಕು ದಿನವೂ ಸಾರ್ವಜನಿಕರಿಗೆ ಜಾಮ್, ಜೆಲ್ಲಿ, ಜೂಸ್ ಇವುಗಳನ್ನು ತಯಾರಿಸುವುದು ಹೇಗೆ ಎಂಬುದರ ಕುರಿತು ಬೆಳಗ್ಗೆ 10.30 ಯಿಂದ 12.30 ರವರೆಗೆ ಉಚಿತವಾಗಿ ತರಬೇತಿ ನೀಡಲಾಗುವುದು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications