ಹೊತ್ತಿ ಉರಿದ 20 ಎಕರೆ ತೋಟ, ರೈತರ ಶ್ರಮ ಕ್ಷಣದಲ್ಲಿ ಬೂದಿ
ಚಿಕ್ಕಮಗಳೂರು, ಮಾರ್ಚ್ 02: ಆಕಸ್ಮಿಕವಾಗಿ ಹೊತ್ತಿಕೊಂಡಿರುವ ಬೆಂಕಿಗೆ 20 ಎಕರೆಗೂ ಹೆಚ್ಚು ಅಡಿಕೆ ಮತ್ತು ತೆಂಗಿನ ತೋಟ ಭಸ್ಮವಾಗಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ನಡೆದಿದೆ.
ಬೆಂಕಿ ಕೆನ್ನಾಳಗೆಗೆ ಒಂದು ಮನೆಯೂ ಆಹುತಿಯಾಗಿದ್ದು, ವರ್ಷಾನುಗಟ್ಟಲೆ ಕಷ್ಟ ಪಟ್ಟು ಬೆಳೆದ ಬೆಳೆ ಕಣ್ಣೆದುರೆ ಸುಟ್ಟು ಭಸ್ಮವಾಗಿದ್ದನು ನೋಡಿದ ರೈತರು ಕಂಗಾಲಾದರು. ಬೆಂಕಿ ನಂದಿಸಲು ರೈತರು ಹರಸಾಹಸ ಪಟ್ಟರಾದರೂ ಪ್ರಯೋಜನವಾಗಲಿಲ್ಲ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದಿದ ಬೆಂಕಿ ನಂದಿಸುವ ಕಾರ್ಯಮಾಡಿತು ಬೆಂಕಿ ಸಂಪೂರ್ಣ ತಹಬದಿಗೆ ಬರುವಷ್ಟರಲ್ಲಿ ಹಾನಿ ಆಗಿ ಆಗಿತ್ತು. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications