Get Updates
Get notified of breaking news, exclusive insights, and must-see stories!

ಭತ್ತಕ್ಕೆ 200 ರೂ. ಕನಿಷ್ಠ ಬೆಂಬಲ ಬೆಲೆ: ಕೇಂದ್ರ ಸಂಪುಟ ಅನುಮೋದನೆ

ನವದೆಹಲಿ, ಜುಲೈ 4: ಭತ್ತಕ್ಕೆ ನೀಡುವ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಕ್ವಿಂಟಲ್‌ಗೆ 200 ರೂ.ನಷ್ಟು ಹೆಚ್ಚಿಸಿದೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಬುಧವಾರ ಈ ನಿರ್ಧಾರ ಕೈಗೊಂಡಿದೆ.

ರೈತರಿಗೆ ತಮ್ಮ ಉತ್ಪಾದನೆಯ ವೆಚ್ಚಕ್ಕಿಂತ ಶೇ 50ಕ್ಕಿಂತ ಹೆಚ್ಚು ದರ ನೀಡುವ ಚುನಾವಣಾ ಪೂರ್ವ ಭರವಸೆಯನ್ನು ಈಗ ಈಡೇರಿಸುವತ್ತ ಕೇಂದ್ರ ಸರ್ಕಾರ ಮುಂದಾಗಿದೆ.

ರೈತರ ಕೃಷಿ ಉತ್ಪನ್ನಗಳಿಗೆ ಅದಕ್ಕೆ ತಗಲುವ ವೆಚ್ಚಕ್ಕಿಂತ 1.5 ಪಟ್ಟು ಹೆಚ್ಚಿನ ದರವನ್ನು ನೀಡುವುದಾಗಿ 2014ರಲ್ಲಿ ಬಿಜೆಪಿ ಭರವಸೆ ನೀಡಿತ್ತು.

cabinet approves hike 200 Rs in msp for paddy

ಈ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರವು ಈ ವರ್ಷದ ಫೆಬ್ರುವರಿ 1ರಂದು ಮಂಡಿಸಿದ ಕೊನೆಯ ವಾರ್ಷಿಕ ಬಜೆಟ್‌ನಲ್ಲಿ ಚಾಲನೆ ನೀಡುವ ಪ್ರಯತ್ನಕ್ಕೆ ಮುಂದಾಗಿತ್ತು.

ಭತ್ತ ಸೇರಿದಂತೆ 14 ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಿಸುವ ಕುರಿತು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ನಡೆಸಿದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಸಾಮಾನ್ಯ ದರ್ಜೆಯ ಭತ್ತದ ದರವು 200 ರೂ.ನಷ್ಟು ಹೆಚ್ಚಳವಾಗಿದ್ದು, ಕ್ವಿಂಟಲ್‌ಗೆ 1,750 ಲಭ್ಯವಾಗಲಿದೆ. ಹಾಗೆಯೇ 'ಎ' ದರ್ಜೆಯ ಭತ್ತದ ಕನಿಷ್ಠ ಬೆಲೆಯನ್ನು 160 ರೂ.ಗೆ ಏರಿಸಲಾಗಿದ್ದು, ರೈತರಿಗೆ ಕ್ವಿಂಟಲ್‌ಗೆ 1,750 ರೂ. ಸಿಗಲಿದೆ.

ಮಧ್ಯಮ ಗಾತ್ರದ ಹತ್ತಿಯ ಕನಿಷ್ಠ ಬೆಂಬಲ ಬೆಲೆಯು ಕ್ವಿಂಟಲ್‌ಗೆ 4,020 ರೂ.ನಿಂದ 5,150 ರೂ.ಗೆ ಹೆಚ್ಚಳವಾಗಿದೆ. ಉದ್ದದ ಗಾತ್ರದ ಹತ್ತಿಯ ಎಂಎಸ್‌ಪಿ 4,320 ರೂ.ನಿಂದ 5,450 ರೂ.ಗೆ ಏರಿಕೆಯಾಗಿದೆ.

ಧಾನ್ಯಗಳ ಎಂಎಸ್‌ಪಿಯಲ್ಲಿಯೂ ಹೆಚ್ಚಳ ಮಾಡಲಾಗಿದೆ. ತೊಗರಿಬೇಳೆಯು ಕ್ವಿಂಟಲ್‌ಗೆ 5,450 ರೂ. ನಿಂದ 5,675 ರೂಪಾಯಿಗೆ ಹೆಚ್ಚಳವಾಗಿದೆ. ಕನಿಷ್ಠ ಬೆಂಬಲ ಬೆಲೆಯ ನೆರವಿನಿಂದ ಹೆಸರು ಬೇಳೆ ಕ್ವಿಂಟಲ್‌ಗೆ 5,757 ರೂಪಾಯಿಯಿಂದ 6,975ಗೆ ಏರಿಕೆಯಾಗಿದೆ. ಕ್ವಿಂಟಲ್‌ಗೆ 5,400 ರೂ.ನಷ್ಟಿದ್ದ ಉದ್ದಿನ ಬೇಳೆ ದರ 5600 ರೂ.ಗೆ ತಲುಪಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+