ಪ್ರೊ. ನಂಜುಂಡಸ್ವಾಮಿಗೆ ಬಸವಶ್ರೀ ಪ್ರಶಸ್ತಿ

Basavashree award 2011 to Prof Nanjundaswamy
ಚಿತ್ರದುರ್ಗ, ಸೆ.16: ಕರ್ನಾಟಕದಲ್ಲಿ ರೈತ ಚಳವಳಿ ಹುಟ್ಟು ಹಾಕಿದ ಪ್ರೊ. ನಂಜುಂಡಸ್ವಾಮಿ ಅವರಿಗೆ ಮರಣೋತ್ತರವಾಗಿ 2011ನೇ ಸಾಲಿನ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಬೃಹನ್ ಮಠದ ಡಾ. ಶಿವಮೂರ್ತಿ ಮುರುಘರಾಜೇಂದ್ರ ಶರಣರು ಪ್ರಕಟಿಸಿದ್ದಾರೆ.

ಸಮಾಜ ಸುಧಾರಕರು, ಹೊಸ ಹಾದಿಯ ಹರಿಕಾರನ್ನು ಗುರುತಿಸಿ 1997ರಿಂದ ಪ್ರತಿ ವರ್ಷವೂ ಚಿತ್ರದುರ್ಗದ ಶ್ರೀಮಠವೂ ಬಸವಶ್ರೀ ಪ್ರಶಸ್ತಿ ನೀಡುತ್ತಾ ಬಂದಿದೆ.

ಅಣ್ಣಾ ಹಜಾರೆ, ಮೇಧಾ ಪಾಟಕ್, ಸ್ನಾಮಿ ಅಗ್ನಿವೇಶ್, ಶಬನಾ ಆಜ್ಮಿ, ಕಿರಣ್ ಬೇಡಿ,ದಲೈಲಾಮಾ, ಸುಭಾಷ್ ಪಾಲೇಕರ್, ಕಾಂತ್ರಿಕಾರಿ ಹೋರಾಟಗಾರ ಗದ್ದರ್, ಪಿ,ಟಿ,ಉಷಾ, ಡಾ. ಎಚ್ ಸುದರ್ಶನ್, ಶ್ರೀಲಂಕಾದ ಸಮಾಜಿಕ ಕಾರ್ಯಕರ್ತ ಆರ್ಯರತ್ನೆ ಸೇರಿದಂತೆ 14ಕ್ಕೂ ಹೆಚ್ಚು ಜನರಿಗೆ ಈ ಪ್ರತಿಷ್ಥಿತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇದೇ ಮೊದಲ ಬಾರಿಗೆ ಮರಣೋತ್ತರ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ರೈತ ಚಳವಳಿಯ ಸಂಸ್ಥಾಪಕ, ನಾಡು ಕಂಡ ಶ್ರೇಷ್ಠ ಕಾನೂನು ತಜ್ಞ, ಸಮಾಜವಾದಿ, ಮಾಜಿ ಶಾಸಕ ಪ್ರೊ. ನಂಜುಂಡ ಸ್ವಾಮಿ ಅವರಿಗೆ ಈ ಬಾರಿ ಪ್ರಶಸ್ತಿ ನೀಡಲಾಗುತ್ತಿದೆ.

1989 ರಿಂದ 94 ರ ಅವಧಿಯಲ್ಲಿ ಪಕ್ಷೇತರರಾಗಿ ವಿಧಾನ ಸಭೆ ಸದಸ್ಯರಾಗಿದ್ದ ನಂಜುಂಡ ಸ್ವಾಮಿ ಅವರು ನೇರ, ನಿಷ್ಠುರ ಮಾತಿಗೆ ಹೆಸರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+